ವಿಶ್ವಕನ್ನಡಿಗ ನ್ಯೂಸ್(www.Vknews.in): ತುಳುನಾಡಿನ ಕಾರ್ಣಿಕದ ಶಕ್ತಿ ದೈವ ದ ಕಾರ್ಣಿಕವನ್ನು ತೋರಿಸುವ ಕಥಾ ವಸ್ತುವಿರುವ ಧರ್ಮ ದೈವ ಕಿರು ಚಿತ್ರದ ಚಿತ್ರೀಕರಣ ಸುಮಾರು ನೂರು ವರ್ಷದ ಇತಿಹಾಸವಿರುವ ಬೆಳ್ಳಾರೆಯ “ತೋಟ “ಮನೆಯಲ್ಲಿ ನಡೆದಿದೆ. ನಿತಿನ್ ರೈ ಕುಕ್ಕುವಳ್ಳಿ ಹಾಗು ಹಮೀದ್ ಪುತ್ತೂರು ಚಿತ್ರವನ್ನು ನಿರ್ದೇಶಸಿದ್ದು ಕಥೆ ನಿತಿನ್ ರೈ ಕುಕ್ಕುವಳ್ಳಿ ಬರೆದಿದ್ದಾರೆ. ಬೆಳ್ಳಾರೆಯಲ್ಲಿ ನಡೆದ ಚಿತ್ರೀಕರಣಕ್ಕೆ ಅಂತಾರಾಷ್ಟ್ರೀಯ ಕ್ರೀಡಾಪಟು ಸುಬಾಶ್ಚoದ್ರ ರೈ ತೋಟ ದೀಪ ಬೆಳಗಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮನೆಯ ಹಿರಿಯರಾದ ಲಕ್ಷ್ಮಿ ನಾರಾಯಣ ಭಂಡಾರಿ, ಬಾಲ ಚಂದ್ರ ರೈ ಶರತ್ ರೈ ಪಟ್ಟೆ ಮುಂತಾದವರು ಉಪಸ್ಥಿತರಿದ್ದರು. ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸುಂದರ್ ರೈ ಮಂದಾರ, ಪೆನ್ಸಿಲ್ ಬಾಕ್ಸ್ ಖ್ಯಾತಿಯ ದೀಕ್ಷಾ ಡಿ ರೈ, ಚಿತ್ತರಂಜನ್ ರೈ ನುಳಿಯಾಲು, ವಸಂತ ಲಕ್ಷ್ಮಿ, ಕೌಶಿಕ್ ತೋಟ, ನಿತೇಶ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಸುಧಾಕರ್ ಪಡೀಲ್ ತಮ್ಮ ಸೋನು ಕ್ರಿಯೆಷನ್ ಅಡಿಯಲ್ಲಿ ನಿರ್ಮಿಸಿದ್ದಾರೆ.. ಹರೀಶ್ ಪುತ್ತೂರು ಕ್ಯಾಮರಾ ಕೆಲಸ ಮಾಡಿದ್ದು ರಾಧೆಶ್ ರೈ ಮೋಡ ಪ್ಪಾಡಿ ಅವರ ಸಂಕಲನ ಮತ್ತು ಧ್ವನಿಗ್ರಹನ ವಿದ್ದು ಪ್ರೇಮ್ ಅರ್ಲಪದವು ಅವರ ಪ್ರಸಾದನ ಈ ಕಿರು ಚಿತ್ರಕ್ಕಿದೆ. ಚಿತ್ರದ ಚಿತ್ರಕತೆ ಹಮೀದ್ ಪುತ್ತೂರು ಬರೆದಿದ್ದು ಸಂಭಾಷಣೆ ಜವಾಬ್ದಾರಿಯನ್ನು ಹಮೀದ್ ಪುತ್ತೂರು ಮತ್ತು ನಾರಾಯಣ ರೈ ಕುಕ್ಕುವಳ್ಳಿ ನಿರ್ವಹಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.