ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ಪ್ರವಾದಿ ಇಬ್ರಾಹೀಮರು ಏಕದೇವನ ಹಾದಿಯಲ್ಲಿ ಸಾಗಲು ಸಹಿಸಿದ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸುವ ಸಾಂಕೇತಿಕವಾಗಿ ಆಚರಿಸುವ ಹಬ್ಬ, ಈದ್ ಅಲ್ ಅಝ್ ಹಾ ಮೂಲಕ ಮುಂದಿನ ದಿನಗಳು ಸಕಲ ರೋಗರುಜಿನ ಸಾಂಕ್ರಾಮಿಕ ರಹಿತವಾದ ಕೆಡುಕು ಮುಕ್ತ ಸಮಾಜವಾಗಿ, ಸರ್ವರಿಗೂ ಒಳಿತನ್ನು ಹಾಗೂ ಶಾಂತಿ ಸಾಮರಸ್ಯ ಸಾರುವ ಸಹಬಾಳ್ವೆಯಲ್ಲಿ ಸದಾ ಸಂತಸದ ಕ್ಷಣಗಳನ್ನು ನೀಡುವಲ್ಲಿ ನಾಂದಿಯಾಗಲಿ ಎಂದು ಹಾರೈಸುವೆವು. ಜತೆಗೆ ಈ ಬಾರಿಯೂ, ನಾವು ಪ್ರಸಕ್ತ ಸರ್ಕಾರದ ಆದೇಶಗಳಾದ, ಕೋವಿಡ್ ನ ಎಲ್ಲಾ ನೀತಿ, ನಿಯಮ, ನಿರ್ದೇಶನ ಮತ್ತು ಮಾರ್ಗಸೂಚಿಗಳನುಸಾರ ಸರಳ ಸಂಭ್ರಮದೊಂದಿಗೆ ಈದ್ ಆಚರಿಸೋಣ. ನಾಡಿನ ಜನ-ಭಾಂಧವರೆಲ್ಲರಿಗೂ ಈದ್-ಅಲ್-ಅಝ್ ಹಾ ಶುಭಾಶಯಗಳು ಎಂಬುವುದಾಗಿ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಹಾಗೂ ದಕ್ಷಿಣ ಕನ್ನಡ ಮುಸ್ಲಿಮ್ ಅಸೋಸಿಯೇಶನ್ ಇದರ ಸ್ಥಾಪಕಾಧ್ಯಕ್ಷರಾದ, ಎಸ್. ಎಂ. ರಷೀದ್ ಹಾಜಿಯವರು ತಮ್ಮ ಈದ್ ಸಂದೇಶವನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.