ಮುಲ್ಕಿ (www.vknews.com) : ಮಸ್ಜಿದ್ ಅತ್ತೌಹೀದ್ ಕಾರ್ನಾಡ್’ನಲ್ಲಿ ಸಂಭ್ರಮದ ಈದ್-ಉಲ್-ಅಧಾ ನಮಾಝ್ ಹಾಗೂ ಖುತ್’ಬಾವನ್ನು ಜನಾಬ್ ಎಂ.ಜಿ. ಮುಹಮ್ಮದ್ ರವರು ನೆರೆವೇರಿಸಿದರು.
ತ್ಯಾಗ, ಬಲಿದಾನದ ಹಬ್ಬವಾದ ಈದ್-ಉಲ್-ಅಧಾ ಪ್ರವಚನ ನೀಡಿದ ಅವರು, ಇಬ್ರಾಹಿಂ ನಬಿ ಆ.ಸ. ರ ತ್ಯಾಗ, ಬಲಿದಾನ ಹಾಗೂ ಶ್ರಮದ ಬಗ್ಗೆ ಪ್ರವಚನ ನೀಡಿದರು, ಮತ್ತು ಇಬ್ರಾಹಿಂ ನಬಿ ಆ.ಸ. ರು ಕೊಟ್ಟ ಸಂದೇಶವನ್ನು ಅನುಸರಿಸಬೇಕು, ಅನುಸರಿಸಿದರೇನೇ ಇಬ್ರಾಹಿಂ ಮಿಲ್ಲತ್ ನಲ್ಲಿ ಇರಲು ಸಾಧ್ಯ, ಇಬ್ರಾಹಿಂ ಮಿಲ್ಲತ್ ನಲ್ಲಿ ಇದ್ದರೇನೇ ಪರಲೋಕದಲ್ಲಿ ಯಶ್ಶಸ್ಸುಗಳಿಸಬಹುದು ಎಂದು ಈದ್ ಸಂದೇಶವನ್ನು ನೀಡಿದರು. ಅವರು ಮಾತನಾಡುತ್ತಾ ಈ ಕೊರೋನ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸರ್ಕಾರ ಅಳವಡಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ಕರೆಕೊಟ್ಟರು.
ಈದ್-ಉಲ್-ನಮಾಝ್ ನಲ್ಲಿ ಜಮಾಹತಿನ ಸದಸ್ಯರೆಲ್ಲರೂ ಭಾಗವಹಿಸಿದರು, ಮಹಿಳೆಯರಿಗೂ ನಮಾಝ್ ನೀರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.
ಆರ್.ಹೆಚ್.ಕೆ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.