Www.vknews.in ಬಂಟ್ವಾಳ :75 ನೇ ವರ್ಷದ ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಕಾರ್ಯಕ್ರಮ ವು ಇಂದು ಸುನ್ನಿ ಸೆಂಟರ್ ಪರ್ನೆಯಲ್ಲಿ ಜರಗಿತು.
ಪೆರ್ನೆ ಜುಮಾ ಮಸ್ಜಿದ್ ಬಳಿ ಇರುವ ಸುನ್ನಿ ಸೆಂಟರ್ ನಲ್ಲಿ ಬೆಳಿಗ್ಗೆ 7.45 ಕ್ಕೆ ದ್ವಜಾರೋಹಣವನ್ನು ಎಸ್ ವೈ ಎಸ್ ಅಧ್ಯಕ್ಷರಾದ ಹಮೀದ್ ಹಾಜಿ ದೋರ್ಮೆ ನೆರವೇರಿಸಿದರು. ಹಿರಿಯರು ಹಾಗೂ ಎಸ್ ವೈ ಎಸ್ ಕೋಶಾಧಿಕಾರಿ ಯಾಗಿರುವ ಅಬ್ದುಲ್ ರಶೀದ್ ದೋರ್ಮೆ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ ವೈ ಎಸ್ ಕಾರ್ಯದರ್ಶಿ ಆಗಿರುವ ಮೊಯ್ದಿನ್ ಕುಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಎಸ್ ಎಸ್ ಎಫ್ ನ ಅದ್ಯಕ್ಷರು,ಹಾಗೂ ಸದಸ್ಯರು ಮತ್ತು ಎಸ್ ವೈ ಎಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ದ್ವಜಾರೋಹಣ ದ ಬಳಿಕ ಸ್ಥಳೀಯ ಪಂಚಾಯತ್ ವ್ಯಾಪ್ತಿಯ ಬಸ್ ತಂಗುದಾಣದ ಸುತ್ತ ಮುತ್ತ,ಹಾಗೂ ಸುನ್ನಿ ಸೆಂಟರ್ ನ ಬಳಿ ಸ್ವಚತೆಯನ್ನು ಮಾಡಿದರು.
ಪಂಚಾಯತ್ ವ್ಯಾಪ್ತಿಯ ತಂಗುದಾನವನ್ನು ಸ್ವಚ್ಚ ಗೊಳಿಸುವ ಸಂದರ್ಭದಲ್ಲಿ ಸ್ಥಳೀಯ ಪಂಚಾಯತ್ ಅಧ್ಯಕ್ಷರು ಇವರ ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.