(www.vknews.com) : ತಾಲೂಕು ಪಂಚಾಯಿತಿ ಮಂಡಲ ಪಂಚಾಯ್ತಿ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಮಾಡಿದ ಅಭಿವೃದ್ಧಿ ಕಾರ್ಯಗಳು ಶೂನ್ಯವಾದಾಗ ಮದ್ರಸಗಳನ್ನು ಎತ್ತಿ ಕಟ್ಟಿ ಜಾತಿ ದರ್ಮಗಳ ಮಧ್ಯೆ ವಿಷ ಬೀಜವನ್ನು ಬಿತ್ತಿ ಮತ ಪಡೆಯುವ ದುರುದ್ದೇಶದಿಂದ ಸಿ.ಟಿ ರವಿಯವರು ಆಡಿದ ಮಾತು ಬಾಲಿಷವೂ ಖಂಡನೀಯವೂ ಆಗಿದೆ. ಒಬ್ಬ ಜನ ಪ್ರತಿನಿಧಿಯಾಗಿ ಪ್ರಮಾಣವಚನ ಸ್ವೀಕರಿಸಿದ ವ್ಯಕ್ತಿಯಿಂದ ಇಂತಹ ಮಾತು ದೇಶದ ಇತಿಹಾಸ ಮತ್ತು ಧರ್ಮಗಳ ಬಗ್ಗೆ ಇರುವ ಅಜ್ಞಾನವಾಗಿದೆ.
ಲಾಕ್ ಡೌನ್ ಸಮಯದಲ್ಲಿ ಕಾರ್ಮಿಕರು ನಡೆದು ಕೊಂಡು ಹೋಗುವ ವೇಳೆ ಮುಸ್ಲಿಂ ಬಾಹುಲ್ಯವಿರುವ ಪ್ರದೇಶಗಳಲ್ಲಿ ನಡೆದುಕೊಂಡು ಹೋದರೆ ಅನ್ನ ಪಾನಿಯಗಳು ಸಿಗಬಹುದೆಂದು ಸಹೋದರ ಧರ್ಮಿಯರು ಹೇಳುತ್ತಾರಾದರೆ ಅದಕ್ಕೆ ಕಾರಣ ಸಿ.ಟಿ ರವಿ ಯವರು ಹೇಳಿದ ಇದೇ ಮದ್ರಸಗಳಿಂದ ಕಲಿತ ಜ್ಞಾನವಾಗಿದೆ.
ಮುಸ್ಲಿಂ ಬಹುಸಂಖ್ಯಾತವಿರುವ ಇಂಡೋನೇಶ್ಯ,ಸೌದಿ ಅರೇಬಿಯಾ ಮುಂತಾದ ದೇಶಗಳಲ್ಲಿ ಅಲ್ಪ ಸಂಖ್ಯಾತರು ಸುಖ ಸಂತೋಷದಿಂದ ಬಾಳುವುದಾದರೆ ಅದಕ್ಕೆ ಕಾರಣ ಇಂತಹದೇ ಮದ್ರಸಗಳಿಂದ ಕಲಿತ ಮುಸಲ್ಮಾನರಾಗಿದ್ದಾರೆ ರವಿ ಯವರೆ.
ಇಲ್ಲಿ ಕೆಲ ಸಂಘಿ ಮನೋಭಾವದವರು ರಾಜಕೀಯಕ್ಕಾಗಿ ದಲಿತರನ್ನು ,ಮುಸಲ್ಮಾನರನ್ನೂ ಥಳಿಸಿ ಹತ್ಯೆ ಮಾಡಿ ಭಯೋತ್ಪಾದನೆ ಕ್ರತ್ಯಗಳಲ್ಲಿ ತೊಡಗಿಸಿಗೊಳ್ಳುವುದನ್ನ ಇಲ್ಲಿರುವ ಕೋಟಿ ಗಟ್ಟಲೆ ಹಿಂದೂ ಸಹೋದರರು ಖಂಡಿಸುತ್ತಾರೋ ಅದೇ ತರಹ ಅಫ್ಘಾನಿಸ್ತಾನ ಪಾಕಿಸ್ತಾನ ಗಳಲ್ಲಿ ಕೆಲ ಮುಸ್ಲಿಂ ನಾಮದಾರಿಗಳು ನಡೆಸುವಂತಹ ಭಯೋತ್ಪಾದಕ ಕ್ರತ್ಯಗಳನ್ನು ದೇಶದಲ್ಲಿರುವ ಎಲ್ಲಾ ದಾರ್ಮಿಕ ಮುಖಂಡರು ಉಲಮಾ ನೇತಾರರೂ ಖಂಡಿಸುತ್ತಾರೆ ಎಂಬುದನ್ನ ಸಿ.ಟಿ ರವಿಯವರು ಇನ್ನಾದರೂ ಅರ್ಥಮಾಡುವುದು ಒಳಿತು.
ಇಂತಹ ಭಾಲಿಶ ಹೇಳಿಕೆಗಳಿಗೆ ಮತ್ತು ಪೊಳ್ಳು ಆಶ್ವಾಸನೆಗಳಿಗೆ ಆಯುಸ್ಸು ಕಮ್ಮಿಯಾಗಿದೆ ಎಂಬುದಕ್ಕೆ ಪಕ್ಷಿಮ ಬಂಗಾಲದಂತಹ ರಾಜ್ಯಗಳ ಪಲಿತಾಂಶಗಳೇ ಉದಾಹರಣೆ. ಇನ್ನಾದರೂ ಶಿಷ್ಟ ಜೀವನದಲ್ಲಿ ಜನಸಾಮಾನ್ಯರಿಗೆ ಒಳಿತನ್ನು ಮಾಡಲು ಪ್ರಯತ್ನಿಸಿ ಸಾಯುವಾಗ ಪುಣ್ಯದೊಂದಿಗೆ ಜನರ ಪ್ರೀತಿ ಸಂಪಾದಿಸಿದರೆ ಅದು ನಿಮಗೂ ದೇಶಕ್ಕೂ ಉತ್ತಮ.
— ತಬೂಕ್ ದಾರಿಮಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.