ಬಂಟ್ವಾಳ (www.vknews.in) : ಎಸೆಸೆಲ್ಸಿ ಪರೀಕ್ಷೆ ಮುಗಿದ ಬಳಿಕ ಮನೆಯಲ್ಲಿಯೇ ಎಲೆಕ್ಟ್ರಿಕ್ ಬೈಸಿಕಲ್ ತಯಾರಿಸಿದ ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ವಿದ್ಯಾರ್ಥಿ ಮುಹಮ್ಮದ್ ಸಿನಾನ್ ರನ್ನು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್.ಐ.ಓ) ಪಾಣೆಮಂಗಳೂರು ಶಾಖೆಯ ವತಿಯಿಂದ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ವಿಜ್ಞಾನ ನನ್ನ ಆಸಕ್ತಿಯ ವಿಷಯ. ಹಿಂದೆ ಸಣ್ಣ ಸಣ್ಣ ಬೋಟ್ ಗಳ ಮಾದರಿಗಳನ್ನು ಮಾಡುತ್ತಿದ್ದೆ. ಎಸೆಸೆಲ್ಸಿ ಪರೀಕ್ಷೆ ಮುಗಿದ ಬಳಿಕ ಏನಾದರು ಮಾಡಬೇಕೆಂಬ ಹಂಬಲದಿಂದ ಮೊದಲ ಬಾರಿಗೆ ಯೂಟ್ಯೂಬ್ ನಲ್ಲಿ ಮಾಹಿತಿ ಪಡೆದು, ಕುಟುಂಬದ ಸಹಕಾರದಿಂದ ಎಲೆಕ್ಟ್ರಿಕ್ ಬೈಸಿಕಲ್ ನಿರ್ಮಿಸಿದ್ದೇನೆ. ಒಂದು ಗಂಟೆ ಚಾರ್ಜ್ ಮಾಡಿದರೆ ಒಂದು ಗಂಟೆ ಓಡಾಟ ಮಾಡಬಹುದು. ಸುಮಾರು ೧೫,೦೦೦ ರೂ. ಖರ್ಚು ತಗುಲಿದೆ ಎಂದು ಸದ್ಯ ಬಂಟ್ವಾಳ ಬಿ. ಮೂಡ ಸರಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ದಾಖಲಾತಿ ಪಡೆದುಕೊಂಡಿರುವ ಮಂಚಿ ಸರಕಾರಿ ಹೈಸ್ಕೂಲ್ ನ ಹಳೆ ವಿದ್ಯಾರ್ಥಿಯೂ ಆಗಿರುವ ಮುಹಮ್ಮದ್ ಸಿನಾನ್ ಸಾಲೆತ್ತೂರು ಮಾಹಿತಿ ನೀಡಿದರು.
ನಮಗೆ ಸೋಶಿಯಲ್ ಮೀಡಿಯಾದಲ್ಲಿ ಸಿನಾನ್ ಎಲೆಕ್ಟ್ರಿಕ್ ಬೈಸಿಕಲ್ ತಯಾರಿಸಿದ ಬಗ್ಗೆ ವಿಡಿಯೋ ದೊರಕಿತ್ತು. ಈ ಹಿನ್ನೆಲೆಯಲ್ಲಿ ಆತನ ಪ್ರತಿಭೆಗೆ ಇನ್ನಷ್ಟು ವೇದಿಕೆ ಸಿಗುವಂತಾಗಲು ವಿದ್ಯಾರ್ಥಿ ಸಂಘಟನೆ ಎಂಬ ನೆಲೆಯಲ್ಲಿ ಪಾಣೆಮಂಗಳೂರು ಶಾಖೆಯ ವತಿಯಿಂದ ಸಣ್ಣಮಟ್ಟಿನ ನೆರವು ನೀಡಿ, ಸನ್ಮಾನಿಸಿ ಪ್ರೋತ್ಸಾಹಿಸಿದ್ದೇವೆ. ಅವರ ಭವಿಷ್ಯ ಉಜ್ವಲವಾಗಲಿ ಎಂದು ಎಸ್.ಐ.ಓ. ದ.ಕ. ಜಿಲ್ಲಾ ಸಂಚಾಲಕ ರಿಝ್ವಾನ್ ಅಝ್ಹರಿ ಹೇಳಿದರು.
ಈ ವೇಳೆ ಸಿನಾನ್ ರವರ ಸಹೋದರ ಸಿರಾಜ್ ಸಾಲೆತ್ತೂರು ಉಪಸ್ಥಿತರಿದ್ದರು. ಎಸ್.ಐ.ಓ ನಿಯೋಗದಲ್ಲಿ ಪಾಣೆಮಂಗಳೂರು ಘಟಕಾಧ್ಯಕ್ಷ ಮುತಹ್ಹರ್ ಶಾಬ್ , ಕಾರ್ಯದರ್ಶಿ ಸಲ್ವಾನ್ ಬೋಳಂಗಡಿ, ಇಸ್ಮಾಯಿಲ್ ಮೆಲ್ಕಾರ್, ಮುಝಮ್ಮಿಲ್, ಮುಬಾರಿಶ್ ಚೆಂಡಾಡಿ, ಯಾಸೀನ್ ಬೋಳಂಗಡಿ, ಸಫ್ ವಾನ್ ಉಪಸ್ಥಿತರಿದ್ದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.