ಮಂಗಳೂರು (www.vknews.com) : ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ನಗರ ವಲಯ ಟೈಲರ್ಸ್ ವಾರ್ಷಿಕ ಮಹಾಸಭೆಯು ಭಾನುವಾರ ನಗರದ ಸ್ಟೇಟ್ಬ್ಯಾಂಕ್ನ ಸಿಟಿಲಾಡ್ಜ್ ಕಟ್ಟಡದಲ್ಲಿರುವ ಶ್ವೇತ ಟೈಲರ್ಸ್ ಶಾಪಿನಲ್ಲಿ ನಗರ ವಲಯದ ಅಧ್ಯಕ್ಷರಾದ ಪ್ರಭಾಮಾಲಿನಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ 2021-24 ನೇ ಅವಧಿಗೆ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಪ್ರಭಾಮಾಲಿನಿ ಮತ್ತು ಕಾರ್ಯದರ್ಶಿಯಾಗಿ ಇಂದಿರಾ ಎನ್ ಕೆ ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ನಗರ ವಲಯ ಮಾಜಿ ಅಧ್ಯಕ್ಷರಾದ ಪರಮೇಶ್ವರ್ ಮತ್ತು ನಾರಾಯಣ ಟಿ ಇವರನ್ನು ಆಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ಸುಜಾತ ಸಿ ಉಚ್ಚಿಲ್, ಜೊತೆ ಕಾರ್ಯದರ್ಶಿಯಾಗಿ ಸರಸ್ವತಿ, ಸಂಘಟನಾ ಕಾರ್ಯದರ್ಶಿಯಾಗಿ ಗಿರೀಶ್ ಆಯ್ಕೆಯಾದರು.
ಸಮಿತಿ ಸದಸ್ಯರಾಗಿ ಕುಸುಮ ದೇವಾಡಿಗ, ಸುಲೋಚನ, ಫಾತಿಮಾ, ರೇಖಾ, ಧನವಂತಿ, ಧರ್ಮಾವತಿ ಲೀಲಾವತಿ ಮೂಡುಶೆಡ್ಡೆ, ಸುಜಾತ ಕೆ, ರಂಜಿತಾ ಮಾರ್ಲ, ಕೇಶವ ಸುವರ್ಣ, ಮೇರಿ ಡಿ ಸೋಜಾ ಆಯ್ಕೆಯಾಗಿದ್ದಾರೆ.
ಮುಖ್ಯ ಅತಿಥಿಯಾಗಿ ಕೆಎಸ್ಟಿಎ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಪತಿ ಕಲಂಬಾಡಿ, ಕೆಎಸ್ಟಿಎ ಜಿಲ್ಲಾ ಮಾಜಿ ಅಧ್ಯಕ್ಷರಾದ ಉದಯಕುಮಾರ್, ನಗರ ವಲಯ ಮಾಜಿ ಅಧ್ಯಕ್ಷರಾದ ಪರಮೇಶ್ವರ್, ನಾರಾಯಣ ಟಿ, ಕುಸುಮ ದೇವಾಡಿಗ ಉಪಸ್ಥಿತರಿದ್ದರು. ರೇಖಾ ಪ್ರಾರ್ಥಿಸಿದರು. ಸ್ವಾಗತ, ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಇಂದಿರಾ ಎನ್ ಕೆ ನೆರವೇರಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.