ಉಡುಪಿ ,(ವಿಶ್ವ ಕನ್ನಡಿಗ ನ್ಯೂಸ್ ):ಕರಾವಳಿ ಯೂತ್ ಕ್ಹಬ್ (ರಿ) ಉಡುಪಿ ಜಿಲ್ಲೆ,ಅಭಯಹಸ್ತ ಹೆಲ್ಪ್ ಲೈನ್ ಉಡುಪಿ,ಹ್ಯಾಂಡ್ ಬಾಲ್ ಆಸೋಷಿಯೇಷನ್ (ರಿ) ಉಡುಪಿ,ಮಣಿಪಾಲ್ ಇಂಪೇರಿಯಲ್ ಕ್ರಿಕೆಟ್ ಕ್ಲಬ್,ಲಯನ್ಸ್ ಕ್ಲಬ್ ಉಡುಪಿ ಚೇತನಾ,ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಕಾರದಲ್ಲಿ ‘ಸ್ವಯಂಪ್ರರೀತ ರಕ್ತದಾನ ಶಿಬಿರ ‘ ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲದಲ್ಲಿ ನಡೆಯಿತು .ಲಯನ್ಸ್ ಕ್ಹಬ್ ಉಡುಪಿ ಚೇತನಾ ಇದರ ಅಧ್ಯಕ್ಷರಾದ ಅರುಣ್ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಯುತರು ಇತ್ತಿಚಿನ ದಿನಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಲಸಿಕೆ ಪಡೆಯುತ್ತಿರುವುದರಿಂದ ಸುಮಾರು 15 ದಿನಗಳ ರಕ್ತದಾನ ಮಾಡಲು ಅವಕಾಶವಿರುವುದಿಲ್ಲ.ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ತೀವ್ರ ರಕ್ತದ ಕೊರತೆ ತಲೆತೋರಿದ್ದು ಎಲ್ಲ ಸಂಘಟನೆಗಳು ಒಂದಾಗಿ ರಕ್ತದಾನ ಶಿಬಿರಾ ಆಯೋಜಿಸಿದರೆ ಸಕಾಲದಲ್ಲಿ ರೋಗಿಗೆ ರಕ್ತ ಪೂರೈಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಮುಖ್ಯಅತಿಥಿಗಳಾಗಿ ಕರಾವಳಿ ಯೂತ್ ಕ್ಲಬ್ (ರಿ) ನ ಅಧ್ಯಕ್ಷರಾದ ಅಶೋಕ್ ಆಚಾರ್ಯ , ಅಭಯಹಸ್ತ ಹೆಲ್ಪ್ ಲೈನ್ ಉಡುಪಿ ಇದರ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಮುನಿಯಾಲು,ಮಣಿಪಾಲ್ ಇಂಪೇರಿಯಲ್ ಕ್ರಿಕೆಟ್ ಕ್ಲಬ್ ನ ನವೂಶ್ ಶೆಟ್ಟಿ,ಹ್ಯಾಂಡ್ ಬಾಲ್ ಆಸೊಷಿಯೇಷನ್ (ರಿ) ನ ಸೀತಾರಾಮ್ ಶೆಟ್ಟಿ,ಸೇರಿದಂತೆ ಮತ್ತಿತರರು ಉಪಸ್ಥಿತ್ತರಿದ್ದರು.ಸಂದೇಶ್ ಶೆಟ್ಟಿ ಸ್ವಾಗತಿಸಿದರೇ ,ಸತ್ಯ ದೇವಾಡಿಗ ನಿರೂಪಿಸಿ ವಂದಿಸಿದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.