ಕುಪ್ಪೆಪದವು (www.vknews.com) : ಶತಮಾನದ ಇತಿಹಾಸವಿರುವ ಸೃಷ್ಟಿಕರ್ತನ ಸಂದೇಶವಾದ,ಪರಿಶುದ್ಧ ಮಸ್ಜಿದ್ ಮಿನಾರಗಳಲ್ಲಿ ಮೊಳಗುತ್ತಿರುವ ಆಝಾನ್ ಬಗ್ಗೆ ಪ್ರಮೋದ್ ಮುತಾಲಿಕ್ ಅವಹೇಳನಕಾರಿ ಮಾತು ಖಂಡನೀಯ. ಇದು ಸಂಘ ಪರಿವಾರ, ನರಭಕ್ಷಕರ ಧರ್ಮ ಧರ್ಮಗಳ ಮಧ್ಯೆ ಸೌಹಾರ್ದಕ್ಕೆ ಧಕ್ಕೆಯುಂಟುಮಾಡುವ ಹುಣ್ಣಾರವಾಗಿದೆ ಎಂದು ಬದ್ರಿಯಾ ಜುಮಾ ಮಸ್ಜಿದ್ ಕುಪ್ಪೆಪದವು ಖತೀಬರಾದ ಅಬೂ ಝೈದ್ ಶಾಫಿ ಮದನಿ ಕರಾಯರವರು ಜುಮಾ ನಂತರದ ಪ್ರಭಾಷಣದಲ್ಲಿ ಹೇಳಿದರು.
ಐಪಿಎಸ್ ಅಧಿಕಾರಿ ಸಾಬಿಯ ನೈಫ್ ರವರ ಅತ್ಯಾಚಾರ ಹಾಗೂ ಬರ್ಬರ ಹತ್ಯೆ ಅಸ್ಸಾಮಿನಲ್ಲಿ ನಡೆದ ದೌರ್ಜನ್ಯ ,ಎಲ್ಲೆಡೆ ನಡೆಯುತ್ತಿರುವ ಪೊಲೀಸ್ ನೈತಿಕಗಿರಿ ಇದರ ಬಗ್ಗೆ ಅರ್ಥ ಗಂಭೀರವಾಗಿ ವಿವರಿಸಿ ದಿನೇ ದಿನೇ ಮುಸ್ಲಿಂ ಸಮುದಾಯಕ್ಕೆ ಆಗುತ್ತಿರುವ ದೌರ್ಜನ್ಯಗಳನ್ನು ಖಂಡಿಸುತ್ತಾ, ಸಂಘ ಪರಿವಾರದ ಅಕ್ರಮಗಳಿಗೆ ಪ್ರತಿರೋಧಿಸುವುದರ ಮೂಲಕ ಮುಸ್ಲಿಂ ಸಮುದಾಯ ಐಕ್ಯರಾಗಬೇಕೆಂದು ಕರೆ ನೀಡಿದರು.
ಪವಿತ್ರ ಖುತುಬಾದ ಸಾರಾಂಶವನ್ನು ಅರ್ಥ ಗಂಭೀರವಾಗಿ ತಿಳಿಸುತ್ತಾ ನಮಾಝ್ ಮುಸ್ಲಿಂ ಮತ್ತು ಇತರ ಧರ್ಮದ ಮಧ್ಯೆ ಇರುವ ವ್ಯತ್ಯಾಸವಾಗಿದ್ದು ಐದು ವಕ್ತ್ ನಮಾಝ್ ಕಲಾ ಇಲ್ಲದೆ ನಿರ್ವಹಿಸುವ ಮೂಲಕ ಇಲಾಹೀ ಸ್ಮರಣೆಗೆ ಭಾಗಿಯಾಗಬೇಕೆಂದು ತಿಳಿಸುತ್ತಾ ನಮಾಝ್ ಇಲ್ಲದವನಿಗೆ ಇಸ್ಲಾಂ ಶರೀಅತ್ ನಲ್ಲಿ ಯಾವುದೇ ಸ್ಥಾನಮಾನ ವಿಲ್ಲದಿದ್ದು ಸಾಕ್ಷಿ ಪುರಾವೆಗೂ ಕೂಡ ಅಯೋಗ್ಯ ಆಗಿರುತ್ತಾನೆ ಎಂದು ಅರ್ಥಗರ್ಭಿತವಾಗಿ ತಿಳಿಸಿದರು..!!
ಮುಝಮ್ಮಿಲ್ ನೂಯಿ ಅಡ್ಡೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.