ದುಬೈ (ವಿಶ್ವ ಕನ್ನಡಿಗ ನ್ಯೂಸ್) : ಕಳೆದ ಸುಮಾರು ಮೂರು ದಶಕಗಳಿಂದ ಕರ್ನಾಟಕದ ಅಲ್ಪ ಸಂಖ್ಯಾತ ಮತ್ತು ಇತರ ಹಿಂದುಳಿದ ವರ್ಗದಲ್ಲಿ ಶೈಕ್ಷಣಿಕ ಜಾಗ್ರಿತಿಯ ಪ್ರವರ್ತನೆಯ ಮೂಲಕ ಮೌಲ್ಯಾಧಾರಿತ ವಿದ್ಯಾ ಕ್ರಾಂತಿಯ ರೂವಾರಿಯಾಗಿ ಹಲವಾರು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ನೂರಾರು ಬಡ ಮಕ್ಕಳು, ಅನಾಥ ಮಕ್ಕಳು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಒದಗಿಸುವ ಬ್ರಹತ್ ಸೇವೆಯನ್ನು ಮಾಡುತ್ತಾ ಅತ್ಯಂತ ಜನಪ್ರಿಯ ಸಮಾಜ ಸೇವಾ ಸಂಸ್ಥೆಯಾಗಿರುವ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ವತಿಯಿಂದ ಪ್ರತೀ ವರ್ಷ ದಂತೆ ಈ ವರ್ಷವೂ ಬೃಹತ್ ಈದ್ ಮೀಲಾ ದುನ್ನಬಿ ಸಮಾವೇಶ ನಡೆಯಲಿದೆ.
ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ( DKSC) ನಿಂದ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಾಸಲ್ಲಮ್ ರವರ ಅನುಗ್ರಹೀತ ಜನ್ಮ ದಿನದ ಆಚರಣೆಯ ಪ್ರಯುಕ್ತ ಬ್ರಹತ್ ಸಮಾವೇಶವು ನಾಳೆ ಶುಕ್ರವಾರ ದಿನಾಂಕ 15/10/2021 ರಂದು ( ಮಗ್ರಿಬ್ ನಮಾಜಿನ ಬಳಿಕ ) ದುಬೈ ಯ ಅಲ್ ಕಿಸೈಸ್ ನಲ್ಲಿರುವ ರೇವಾಕ್ ಔಷಾ ಎಜುಕೇಷನಲ್ ಇನ್ಸ್ಟಿಟ್ಯೂಟ್ ಸಭಾಂಗಣದಲ್ಲಿ ಸಂಜೆ ಗಂಟೆ 6.30 ಕ್ಕೆ ಸರಿಯಾಗಿ ನೆರವೇರಲಿದೆ.
ಪ್ರವಾದಿಯವರ ಮದ್ಹ್ , ಬುರ್ದಾ ಆಲಾಪನೆ, ಮೌಲೂದ್ ಮೊದಲಾದ ಕಾರ್ಯಕ್ರಮಗಳಿಂದ ಕೂಡಿದ ಈ ಆಧ್ಯಾತ್ಮಿಕ ಮಜ್ಲಿಸ್ ನಲ್ಲಿ ಅನೇಕ ಉಲೇಮಾ ಮತ್ತು ಉಮರಾ ನಾಯಕರು , ವಾಗ್ಮಿಗಳು ಭಾಗವಹಿಸಲಿದ್ದಾರೆ.
ದೀನೀ ಮತ್ತು ಪ್ರವಾದಿ ಪ್ರೇಮಿಗಳಾದ ಎಲ್ಲಾ DKSC ಅಭಿಮಾನಿಗಳು ಈ ಮಹೋನ್ನತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳ ಬೇಕೆಂದು DKSC ಮೀಲಾದುನ್ನಬಿ ಕಮಿಟಿ ಚಯರ್ಮನ್ ಜನಾಬ್ ಶುಕೂರ್ ಮನಿಲಾ ಮತ್ತು ಸದಸ್ಯರು DKSC ಪರವಾಗಿ ವಿನಂತಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.