ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಕರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ಪಾಲಿಸುವ ಮೂಲಕ ದೇಶವನ್ನು ಕರೋನಾ ಮುಕ್ತದ ಹಂಚಿಗೆ ತಂದಿರುವ ದೊರೆ ಸಲ್ಮಾನ್ ಹಾಗೂ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ಅವರ ನಡೆಗ ಸೌದಿಯಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಅಕ್ಟೋಬರ್ 17ರಿಂದ ಸೌದಿಯಲ್ಲಿ ಜಾರಿಗೆ ಬರುವ ಕರೋನಾ ನಿಯಂತ್ರಣಗಳ ರಿಯಾಯಿತಿಗಳ ಬಗ್ಗೆ ಸುದ್ದಿ ಪ್ರಕಟಿಸಿದ ಮಾದ್ಯಮಗಳು ದೊರೆಯ ನಾಯಕತ್ವ ಹಾಗೂ ಸಮಯ ಪ್ರಜ್ಞೆಯನ್ನು ಕೊಂಡಾಡಿದೆ.
ಸಾಮಾನ್ಯ ಜನರು ಈ ಹಂತವನ್ನು ತಲುಪಲು ಸೌದಿ ಅರೇಬಿಯಾ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಶ್ಲಾಘಿಸಿದ ಬುದ್ಧಿಜೀವಿಗಳು ಸೌದಿ ಆಡಳಿತವನ್ನು ಹೊಗಳಿದ್ದಾರೆ.
ನೀವು ನಮ್ಮನ್ನು ಸುರಕ್ಷತೆಗೆ ಕರೆದೊಯ್ದಿದ್ದೀರಿ. ನಿಮ್ಮ ನಾಯಕತ್ವ ಪ್ರಶ್ನಾತೀತವಾಗಿದೆ .ನಿಮಗೆ ಪ್ರೀತಿಪೂರ್ವಕ ಧನ್ಯವಾದಗಳು ಎಂದು ಖ್ಯಾತ ಪತ್ರಕರ್ತ ಮೊಹಮ್ಮದ್ ಅಲ್ ಟುನಿಸಿ ಬರೆದಿದ್ದಾರೆ.
ಸೌದಿ ನಾಯಕತ್ವವು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಹಲವರು ಪ್ರತಿಕ್ರಿಯಿಸಿದರು. ಅಕ್ಟೋಬರ್17 ನೇ ಭಾನುವಾರದಿಂದ, ಸೌದಿ ಅರೇಬಿಯಾದಲ್ಲಿ ತೆರೆದ ಸ್ಥಳದಲ್ಲಿ ಮುಖವಾಡವನ್ನು ತೆಗೆದುಹಾಕಲಾಗುತ್ತದೆ ಮತ್ತು ಎಲ್ಲಾ ಸ್ಥಳಗಳಲ್ಲಿನ ಸಾಮಾಜಿಕ ಅಂತರವನ್ನು ಕೊನೆಗೊಳಿಸಲಾಗುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.