ಕಲ್ಲೆಕೋಟೆ (www.vknews.com) : ಹಿಮಾಯತುಲ್ ಇಸ್ಲಾಂ ಕಮಿಟಿ ಖುತುಬಿಯಾ ಜುಮಾಮಸೀದಿ ಗಂಡಿಬಾಗಿಲು ಇದರ ಆಶ್ರಯದಲ್ಲಿ ಕಾರ್ಯಚರಿಸುತ್ತಿದ್ದ ಕೆಮ್ಮಾರ ಶಕ್ತಿನಗರ ಹಿದಾಯತುಲ್ ಇಸ್ಲಾಂ ಮದ್ರಸ ಮತ್ತು ಶಂಸುಲ್ ಉಲಮಾ ಮಹಿಳಾ ಶರೀಹತ್ ಕಾಲೇಜ್ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ದಿ ಪಡಿಸುವ ಸಲುವಾಗಿ ಇತ್ತೀಚೆಗೆ ಆಸ್ತಿತ್ವಕ್ಕೆ ತರಲಾದ ಶಂಸುಲ್ ಉಲಮಾ ಎಜುಕೇಶನ್ ಟ್ರಸ್ಟ್ ಗೆ ವಹಿಸಿಕೊಡಲಾಗಿದ್ದು ನೂತನ ಸಮಿತಿಗೆ ಸಂಸ್ಥೆಯನ್ನು ಮುನ್ನಡೆಸುವ ಅನುಮತಿ ಪತ್ರವನ್ನು ಕಲ್ಲಿಕೋಟೆ ಸಮಸ್ತ ಕೇಂದ್ರ ಕಚೇರಿಯಲ್ಲಿ ಶೈಖುನಾ ಸಯ್ಯಿದುಲ್ ಉಲಮಾ ಜಿಪ್ರಿ ಮುತ್ತುಕೋಯ ತಙಳ್ ಟ್ರಸ್ಟ್ ಪದಾಧಿಕಾರಿಗಳಿಗೆ ವಿದ್ಯುಕ್ತವಾಗಿ ಹಸ್ತಾಂತರಿಸಿದರು.
ಬಳಿಕ ಮಾತಾಡಿದ ಸಯ್ಯಿದರು ಸದ್ರಿ ಸಂಸ್ಥೆ ಜನರ ನಿರೀಕ್ಷೆಯಂತೆ ಉತ್ತಮವಾಗಿ ಬೆಳೆದು ಶೈಕ್ಷಣಿಕವಾಗಿ ಉತ್ತರೋತ್ತರ ಅಭಿವೃದ್ದಿ ಹೊಂದಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಎಸ್ ಬಿ ದಾರಿಮಿ ಅದ್ಯಕ್ಷರು, ಅಬ್ದುಲ್ ರಶೀದ್ ಹಾಜಿ ಸಂಚಾಲಕರು ,ಹುಸೈನ್ ಬಡಿಲ ,ಎನ್ ಎ ಇಸಾಕ್ ಸದಸ್ಯರು ಜಮಾತ್ ಸಮಿತಿ ಕೋಶಾಧಿಕಾರಿ ಹಸೈನಾರ್ ಹಾಜಿ,ಉಪಾದ್ಯಕ್ಷ ಜಿ ಮುಹಮ್ಮದ್ ರಪೀಕ್ ಹಾಜಿ ,ಜೊತೆ ಕಾರ್ಯದರ್ಶಿಗಳಾದ ಅಬ್ದುಲ್ ರಝಾಕ್ ಮರ್ವೇಲ್ ,ಜಿಎಂ ಆರ್ ರಝಾಕ್,ಸದಸ್ಯರಾದ ಜಿ ಇಸ್ಮಾಯಿಲ್,ಕಲಂದರ್ ಎಸ್ ಪಿ ಹಾಜರಿದ್ದರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.