ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ): ಬಾಲಿವುಡ್ ಖ್ಯಾತ ನಟ ಸುನಿಲ್ ಶೆಟ್ಟಿ ತನ್ನ ಪುತ್ರನ ಪ್ರಥಮ ಚಿತ್ರ ಬಿಡುಗಡೆಯ ಸಂದರ್ಭ ಪುತ್ರನ ಜೊತೆಗೆ ಕರಾವಳಿಯ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದರು .
ತುಳುವನಾಗಿ ಇಷ್ಟು ದೊಡ್ಡ ಬೆಳೆಯುವದಕ್ಕೆ ಇಲ್ಲಿನ ದೈವ -ದೇವರುಗಳೇ ಕಾರಣ ಹಾಗಾಗಿ ಆಗಾಗ ಇಲ್ಲಿಗೆ ಬಂದು ದೇವರ ಕ್ರಪೆಗೆ ಪಾತ್ರರಾಗುತ್ತೇನೆ .ಇಂದು ಮಗನ ಪ್ರಥಮ ಚಿತ್ರ ತೆರೆ ಕಾಣುತ್ತಿರುವುದಕ್ಕೆ ದೇವರ ಆಶೀರ್ವಾದ ಪಡೆಯಲು ಬಂದಿರುವೆ ಎಂದು ಸುನಿಲ್ ಶೆಟ್ಟಿ ಹೇಳಿದರು . ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ ಬಾಲಿವುಡ್ಗೆ ಎಂಟ್ರಿ ನೀಡಿದ್ದು ‘ತಡಪ್’ ಚಿತ್ರದ ಮೂಲಕ ಸಿನಿ ಕೆರಿರಿಯರ್ ಆರಂಭಿಸುತ್ತಿದ್ದಾರೆ.2018 ರಲ್ಲಿ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹಿಟ್ ಎನಿಸಿಕೊಂಡ ‘ಆರ್ಎಕ್ಸ್100’ ಚಿತ್ರದ ರೀಮೇಕ್ ಆಗಿದೆ. ಇದು ಡಿ. 3 ಕಾಣುತ್ತಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.