ಮಂಗಳೂರು (www.vknews.com) : ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಜೈನಧರ್ಮ ಫೇಸ್ಬುಕ್ ಬಳಗದ ಜಂಟಿ ಆಶ್ರಯದಲ್ಲಿ ಶನಿವಾರ ರೈತ ಸಮ್ಮಿಲನ-2022 ಕಾರ್ಯಕ್ರಮ ಅನ್ ಲೈನ್ ಮೂಲಕ ಜರಗಿತು. ಕೃಷಿ ಸಂಬಂಧಿತ ಉದ್ಯಮಿಗಳು ಹಾಗೂ ಪ್ರಗತಿಪರ ಕೃಷಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಚಾರ ವಿನಿಮಯ ಮಾಡಿಕೊಂಡರು.
ಕಾರ್ಯಕ್ರಮವನ್ನು ಅಮೇರಿಕಾದಲ್ಲಿ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿವುದರ ಜೊತೆಗೆ ಅಲ್ಲಿ ಭೂಮಿಯನ್ನು ತೆಗೆದುಕೊಂಡು ಕೃಷಿಯಲ್ಲಿ ತೊಡಗಿರುವ ಮೂಲತಃ ಬೆಂಗಳೂರಿನವರಾದ ಭಾವುಸಾಹೇಬ ಅಜಿತ್ ಉದಗಾಂವ ಉದ್ಘಾಟಿಸಿ ಅಮೇರಿಕಾದಲ್ಲಿ ಯಾವ ರೀತಿ ಕೃಷಿ ಮಾಡುತ್ತಾರೆ ಎಂಬ ವಿಚಾರದ ಬಗ್ಗೆ ಮಾತನಾಡಿದರು.
ಮಂಡ್ಯ ಜಿಲ್ಲೆಯ ಮದ್ದೂರಿನ ಆರತಿಪುರ ಜೈನ ಮಠದ ಪರಮ ಪೂಜ್ಯ ಸ್ವಸ್ತಿಶ್ರೀ ಸಿದ್ದಾಂತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ್ ಅಜಿಲರು ಅಧ್ಯಕ್ಷತೆವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಎ.ಪಿ.ಎಂ.ಸಿ ಅಧ್ಯಕ್ಷರಾದ ಕೆ. ಕೃಷ್ಣರಾಜ ಹೆಗ್ಡೆ ಮೂಡುಬಿದಿರೆ ಹಾಗೂ ಮೃತ್ಯುಂಜಯ ಜೈನ್ ಬೆಂಗಳೂರು,ಕೆ.ಸಿ ಧರಣೇಂದ್ರ ಜೈನ್ ಕಳಸ, ಚಿರದೀಪ್ ಎಂ.ಎ ವೈನಾಡು ಕೇರಳ, ಓಂಕಾರ್ ಜೈನ್ ಕಂದ್ರೊಳಿ ಸಾಗರ, ಪದ್ಮಜಿತ ಪಾಟಿಲ ಉಗಾರ ಬುದ್ರಕ, ಶಂಕರ ಈ. ಸೊಗಲಿ ಹಾವೇರಿ, ಎಂ.ಗೌತಮ್ ಜೈನ್ ಮೂಲ್ಕಿ, ರೇವತಿ ಪದ್ಮರಾಜ್ ಹಾಡುವಳ್ಳಿ, ಪ್ರಮೋದ ಪ್ರಕಾಶ ಮಗದುಮ ಬೆಳಗಾವಿ ಭಾಗವಹಿಸಿ ಕೃಷಿಯ ಬಗ್ಗೆ ಮಾಹಿತಿ ಹಾಗೂ ಸಲಹೆ ಸೂಚನೆಗಳನ್ನು ನೀಡಿದರು.
ಸಂತೋಷ್ ಡಿ. ಜೈನ್ ಬೆಂಗಳೂರು ಪ್ರಸ್ತಾವನೆ ಸಲ್ಲಿಸಿದರು, ವಸಂತ್ ಕುಮಾರ್ ಬಂಗ ಕಾರ್ಕಳ ನೇತೃತ್ವದ ತಂಡ ನಮೋಕಾರ ಮಂತ್ರ ಹಾಗೂ ರೈತ ಗೀತೆ ಹಾಡಿದರು, ಪ್ರಿಯದರ್ಶಿನಿ ಜೈನ್ ಮಂಗಳೂರು ನಿರೂಪಿಸಿದರು. ಪುಟ್ಟಸ್ವಾಮಿ ಜೈನ್ ಬೆಂಗಳೂರು ವಂದಿಸಿದರು. ಧೀರಜ್ ಡಿ. ಜೈನ್ ಹೊರನಾಡು , ಸುದೇಶ್ ಜೈನ್ ಮಕ್ಕಿಮನೆ ಸಹಕರಿಸಿದರು. ಜಯಶ್ರೀ ಡಿ. ಜೈನ್ ಹೊರನಾಡು ಬಳಗದಿಂದ ಶಾಂತಿಮಂತ್ರ ಪಠಣ ನಡೆಯಿತು.
ಎನ್. ಪ್ರಸನ್ನ ಕುಮಾರ್ ಮೈಸೂರು, ಮಾಳ ಹರ್ಷೇಂದ್ರ ಜೈನ್ ಬೆಂಗಳೂರು, ಧರ್ಮಪಾಲ ಜೈನ್ ಕಳಸ, ಮಿತ್ರಸೇನ ಜೈನ್ ಅಳದಂಗಡಿ, ಜಿತ್ತಾ ಜಿನೇಂದ್ರ ಬೆಂಗಳೂರು , ನಿರಂಜನ್ ಜೈನ್ ಕುದ್ಯಾಡಿ, ವಜ್ರ ಕುಮಾರ್ ಬೆಂಗಳೂರು, ಮಹಾವೀರ ಪ್ರಸಾದ್ ಹೊರನಾಡು, ಸ್ಪೂರ್ತಿ ಜೈನ್ ಕುಣಿಗಲ್, ಅಕ್ಷಯ್ ಜೈನ್ ಕೆರ್ವಾಸೆ, ಅರ್ಚಿತ್ ಎ. ಜೈನ್ ಸಂಸೆ, ಪ್ರಜ್ವಲ್ ಜೈನ್ ಚಾಮರಾಜನಗರ, ಉಜ್ವಲ್ ಜೈನ್ ಮೇಗುಂದ ಮೊದಲಾದವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.