Loo
(www.vknews.in) ; ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷರು, ನಿವೃತ್ತ ಪೊಲೀಸ್ ಅಧಿಕಾರಿ ಜನಾಬ್ ಜಿ.ಎ ಬಾವಾರವರ ನೇತೃತ್ವದಲ್ಲಿ ಉಡುಪಿ ಸ್ಕಾರ್ಪ್ ವಿವಾದದ ಕುರಿತು ಸಮಾಲೋಚನೆ ಸಭೆ ಇಂದು ಉಡುಪಿಯಲ್ಲಿ ನಡೆಸಲಾಯಿತು. ಪ್ರಥಮ ಸಭೆಯಲ್ಲಿ ಕಳೆದ ಒಂದು ತಿಂಗಳಿಂದ ತಮ್ಮ ಹಕ್ಕುಗಳಿಗಾಗಿ ಹೊರಾಟ ಮಾಡುತ್ತಿದ್ದ ವಿದ್ಯಾರ್ಥಿನಿಯರು ಮತ್ತು ಅವರ ಪೊಷಕರೊಂದಿಗೆ ಸುದೀರ್ಘವಾದ ಸಮಾಲೋಚನೆ ನಡೆಸಲಾಯಿತು. ಸಮಾಲೋಚನಾ ಸಭೆಯಲ್ಲಿ ಸಿ.ಎಫ್.ಐ ನಾಯಕರೂ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಮತ್ತು ಹೆತ್ತವರ ಅಭಿಪ್ರಾಯ ಸಂಗ್ರಹಿಸಿದ ಜಿ.ಎ ಬಾವಾರವರ ತಂಡ ನಂತರ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಮತ್ತು ಸಿ.ಎಫ್.ಐ ರಾಜ್ಯ ನಾಯಕರೊಂದಿಗೆ ಸಮಾಲೋಚಿಸಿದರು.
ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಮಹಮ್ಮದ್ ಇಭ್ರಾಹಿಂ ಸಾಬ್ ಕೋಟ, ನಿಕಟಪೂರ್ವ ಅಧ್ಯಕ್ಷರಾದ ಯಾಸೀನ್ ಮಲ್ಪೆ, ಇಸ್ಮಾಯಿಲ್ ಕಟಪಾಡಿ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಅಝೀಝ್ , ಸಿ.ಎಫ್.ಐ ರಾಜ್ಯಾಧ್ಯಕ್ಷರಾದ ಅಥಾವುಲ್ಲಾ, ಮುಖಂಡರಾದ ಸ್ವದಕತ್ ಷಾ, ಇಮ್ರಾನ್ ಪಿಜೆ ರಾಜ್ಯ ಸಮಿತಿ ಸದಸ್ಯ ಮಸೂದ್ ಉಡುಪಿ, ಮುಂತಾದವರು ಭಾಗವಹಿಸಿದ್ದ ಸಭೆಯಲ್ಲಿ ಹಲವು ಸುತ್ತಿನ ಮಾತುಕತೆ ನಡೆದವು.
ಘಟನೆಯ ವಸ್ತು ಸ್ಥಿತಿ ಮತ್ತು ಬೆಳವಣಿಗೆಯ ಕುರಿತಂತೆ ಸಮಗ್ರವಾಗಿ ತಿಳಿದು ಕೊಂಡ ಬಾವಾರವರು ಒಂದೆರಡು ದಿನದಲ್ಲಿ ನ್ಯಾಯಯುತ ಪರಿಹಾರವನ್ನು ಕಂಡುಕೊಳ್ಳಲು ಸ್ಥಳೀಯ ಶಾಸಕರಾದ ಶ್ರೀ ರಘುಪತಿ ಭಟ್ಟ್ ಮತ್ತು ಶಾಲಾ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು. ಸೋಶಿಯಲ್ ಮೀಡಿಯಾ ಮತ್ತು ಮಾದ್ಯಮದಲ್ಲಿ ಸಮಾಜದಲ್ಲಿ ಆತಂಕ ಮತ್ತು ದ್ವೇಷ ಸೃಷ್ಠಿಸುವ ಯಾವುದೇ ಹೇಳಿಕೆ, ಬರವಣಿಗೆ ಹಾಕದಿರುವಂತೆ ವಿನಂತಿಸಿದ ಬಾವಾರವರು, ಸೌಹಾರ್ಧತೆ ಮತ್ತು ಸಮನ್ವಯತೆ ಕಾಪಾಡುವ ಎಲ್ಲಾ ಪ್ರಯತ್ನದಲ್ಲೂ ನಾವು ಜೊತೆಗೂಡಿ ದುಡಿಯುವ ಅಗತ್ಯವಿದೆ ಎಂದರು.
ವಿದ್ಯಾರ್ಥಿಗಳಿಗೆ, ಹೆತ್ತವರಿಗೆ, ಧಾರ್ಮಿಕ ಬಾವನೆಗೆ, ಸಂವಿಧಾನದ ಆಶಯ ಮತ್ತು ಶಾಲಾಶಿಸ್ತಿಗೆ ದಕ್ಕೆಯಾಗದಂತೆ ಒಂದು ಉತ್ತಮ ತೀರ್ಮಾಣಕ್ಕೆ ಬರುವ ವಾತಾವರಣ ಕಲ್ಪಿಸಲು ಎಲ್ಲರ ಸಹಕಾರ ಅಗತ್ಯವಿದ್ದು ಹಾಗಾಗ ಪ್ರಚೋದನೆ, ಊಹಾಪೂಹಕ್ಕೆ ಆಸ್ಪದ ಕೊಡದೆ ಸಾಮಾಜಿಕ ಜವಾಬ್ದಾರಿಯಿಂದ ನಾವೆಲ್ಲರೂ ವರ್ತಿಸಬೇಕಾಗಿದೆ ಎಂದು ಹೇಳಿದ ಬಾವಾರವರು ಈಗಾಗಲೇ ಸರಕಾರದ ಆದೇಶವೊಂದು ಕೈ ಸೇರಿದ್ದು ಅದರ ಕುರಿತಂತೆಯೂ ಅವಲೋಕಿಸುವುದಾಗಿ ಹೇಳಿದರು. ನಿಯೋಗದಲ್ಲಿ ಮುಸ್ಲಿಂ ಜಸ್ಜಿಸ್ ಫಾರಂ ನ ಹನೀಫ್ ಖಾನ್ ಕೊಡಾಜೆ, ಪುತ್ತೂರು ಕಮ್ಯೂನಿಟಿ ಸೆಂಟರ್ ನ ಹನೀಫ್ ಪುತ್ತೂರು ಉಪಸ್ಥಿತರಿದ್ದರು.
✍🏻 ಸುನ್ನೀಟುಡೇ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.