(ವಿಶ್ವ ಕನ್ನಡಿಗ ನ್ಯೂಸ್) : ಕಳೆದ ವರ್ಷ ಲಾಕ್ ಡೌನ್ ಇದ್ದ ಕಾರಣ ಪವಿತ್ರ ಹಜ್ಜ್ ಯಾತ್ರೆಗೆ ಇಟ್ಟಿದ್ದ ಹಣವನ್ನು ಬಡವರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದ ಹಸನ್ ಬಾವಾ ಕಿನ್ನಿಪದವು ಅವರಿಗೆ ಹಾಗು ಅವರ ಪತ್ನಿಗೆ ಈ ಬಾರಿ ಹಜ್ಜ್ ಯಾತ್ರೆಗೆ ಹೋಗುವ ಭಾಗ್ಯ ಒಲಿದು ಬಂದಿದೆ
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕು ಬಜ್ಪೆಯ ಬಡ ಮತ್ತು ನಿರ್ಗತಿಕರ ಆಶಾಕಿರಣ, ಬಜ್ಪೆ ವಲಯ ಮುಸ್ಲಿಮ್ ಲೀಗ್ ಅಧ್ಯಕ್ಷ ಹಾಗೂ ಸಂಶುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಎಸ್ ಕೆ ಎಸ್ ಎಸ್ ಎಫ್ ಹಾಗೂ ಕಿನ್ನಿಪದವು ಮಸೀದಿಯ ಜೊತೆ ಕಾರ್ಯದರ್ಶಿ ಹಸನ್ ಬಾವಾ ಕಿನ್ನಿಪದವು ಅವರು ಮತ್ತು ಅವರ ಪತ್ನಿ ಪವಿತ್ರ ಹಜ್ಜ್ ಯಾತ್ರೆಗೆ ಇಂದು ಹೊರಟಿದ್ದಾರೆ.
ಯಾವುದೇ ಪ್ರಚಾರ ಬಯಸದೆ ಅವರು ಮಾಡಿದ ಸೇವೆ ಅಪಾರವಿದೆ, ಹೋದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಹಜ್ಜ್ ಯಾತ್ರೆಗೆ ಹೋಗುಲು ಅಸಾಧ್ಯವಾದ ಕಾರಣದಿಂದ ಹಜ್ಜ್ ಗೆ ಹೋಗುವ ಹಣದಿಂದ ಬಡತನದಲ್ಲಿದ್ದ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸಹಾಯ ಮಾಡುವ ಮೂಲಕ ಬಡ ಜನರ ಪಾಲಿಗೆ ಆಶಾಕಿರಣವಾಗಿರುವುದು ಇಲ್ಲಿ ನೆನಪಿಸಬಹುದು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.