(www.vknews.in) : ಅಧುನಿಕ ಯುಗದಲ್ಲಿ ತಂತ್ರಜ್ಞಾನ ಹಾಗೂ ಕಾನೂನು ನಡುವೆ ಇರುವ ಸಂಬಂಧ ಮತ್ತು ಪ್ರಾಮುಖ್ಯತೆ ಕುರಿತಾಗಿ ಅಲೈಯನ್ಸ್ ವಿಶ್ವವಿದ್ಯಾಲಯ ಮತ್ತು ಅಲೈಯನ್ಸ್ ಸ್ಕೂಲ್ ಆಫ್ ಲಾ ವಿಶೇಷ ಕಾನ್ ಕ್ಲೇವ್ ನ್ನು ಹಮ್ಮಿಕೊಂಡಿತ್ತು. 13-08-2022 ಬೆಂಗಳೂರಿನ ಹೊಟೆಲ್ ಅಶೊಕ್ ಲಲಿತ್ ನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ದೇಶದ ವಿವಿಧ ಭಾಗಗಗಳಿಂದ ಬಂದ ಕಾನೂನು ತಜ್ಞರು, ಕಾನೂನು ವೃತ್ತಿಪರರು ಮತ್ತು ತಂತ್ರಜ್ಞಾನಕ್ಕೆ ಕುರಿತಾದ ಅನುಭವವುಳ್ಳ ಅನೇಕ ಮಹನೀಯರು ಕೂಡ ಆಗಮಿಸಿದ್ದರು.
ಕಾನೂನಿನ ಬಗ್ಗೆ ಯುವಕರಿಗೆ ಹಾಗೂ ಜನಸಾಮಾನ್ಯರಿಗೆ ತಿಳಿ ಹೇಳುವುದು ಹಾಗೂ ತಂತ್ರಜ್ಞಾನ ಮತ್ತು ಕಾನೂನಿನ ಸಂಬಂಧ ಹೇಗೆ ಬೆಸೆದುಕೊಂಡಿದೆ ಅನ್ನೋದರ ಬಗ್ಗೆ ಚರ್ಚೆ ಮಾಡುವುದು ಈ ಕಾನ್ ಕ್ಲೇವ್ ನ ಪ್ರಮುಖ ಉದ್ದೇಶವಾಗಿತ್ತು. ಅಲೈಯನ್ಸ್ ವಿಶ್ವವಿದ್ಯಾಲಯದ ಜೊತೆಗೆ ಕರಿಯರ್ ಅಡ್ವಾನ್ಸ್ ಮೆಂಟ್ ನೆಟ್ವರ್ಕಿಂಗ್ ಕೂಡ ಸಹಯೋಗ ನೀಡಿದ ಪರಿಣಾಮ ಕಾರ್ಯಕ್ರಮ ಯಶಸ್ವಿಯಾಯಿತು.. ಇನ್ನು ಇದೇ ವೇಳೆ ಮಾತನಾಡಿದ ಅಲೈನ್ಸ್ ವಿಶ್ವವಿದ್ಯಾಲಯದ ಕುಲಪತಿಗಳಾದ ಶ್ರೀ ಅಭಯ ಜಿ.ಚೆಬ್ಬಿಯವರು, ಕಾನೂನು ಮತ್ತು ತಂತ್ರಜ್ಞಾನ ಎಷ್ಟರ ಮಟ್ಟಕ್ಕೆ ಸಮಾಗಮ ಹೊಂದಿದೆ ಅನ್ನೋದರ ಬಗ್ಗೆ ಬೆಳಕು ಚೆಲ್ಲಿದರು.
ಆಧುನಿಕ ಕಾಲದಲ್ಲಿ ಯಾವುದೇ ಕಾನೂನು ಸಮರ್ಪಕವಾಗಿ ಬಳಕೆ ಆಗಬೇಕಾದರೆ ತಂತ್ರಜ್ಞಾನದ ಜತೆ ಹೇಗೆ ಸಾಗಬೇಕು ಹಾಗೂ ಅದರ ಸಂಬಂಧ ಎಷ್ಟು ಮಹತ್ವ ಪಡೆದಿದೆ ಎನ್ನುವ ಅಂಶವನ್ನು ಹೇಳಿದರು..ಹಾಗೆಯೇ ಕಾರ್ಯಕ್ರಮಕ್ಕೆ ಬಂದ ಎಲ್ಲಾ ಕನೂನು ತಜ್ಞರಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಕರಿಯರ್ ಕಚೇರಿಯ ನಿರ್ದೇಶಕರಾದ ಶ್ರೀಮತಿ ಸುರೇಖಾ ಶೆಟ್ಟಿ ಕಾನ್ ಕ್ಲೇವ್ ಆಗಮಿಸಿದವರ ವಂದನಾಪರ್ಣೆ ಮಾಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.