ಬೆಳ್ತಂಗಡಿ (www.vknews.in) : ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂದನೇ ವಾರ್ಡಿನ ದ.ಕ. ಹಿರಿಯ ಪ್ರಾಥಮಿಕ ಶಾಲೆ ತಣ್ಣೀರುಪಂತ, ದ.ಕ. ಹಿರಿಯ ಪ್ರಾಥಮಿಕ ಶಾಲೆ ಕಲ್ಲಕಟ್ಟನಿ. ಮೂರು ಅಂಗನವಾಡಿ ಕೇಂದ್ರ ಮತ್ತು ಐದು ಮದರಸಗಳಿಗೆ ಎಸ್ಡಿಪಿಐ ವತಿಯಿಂದ ತುರ್ತು ಸಂದರ್ಭದಲ್ಲಿ ಉಪಯೋಗವಾಗುವ ಪ್ರಥಮ ಚಿಕಿತ್ಸೆ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಣ್ಣೀರುಪಂತ ಗ್ರಾಮ ಪಂಚಾಯತ್ ಎಸ್ಡಿಪಿಐ ಬೆಂಬಲಿತ ಸದಸ್ಯರಾದ ನಿಸಾರ್ ಕುದ್ರಡ್ಕ, ನಫ್ಸೀರಾ, ಬಾರ್ಯ ಗ್ರಾಮ ಪಂಚಾಯತ್ ಎಸ್ಡಿಪಿಐ ಬೆಂಬಲಿತ ಸದಸ್ಯ ಫೈಸಲ್ ಮೂರುಗೋಳಿ, ತಣ್ಣೀರುಪಂತ ವಾರ್ಡ್ ಅಧ್ಯಕ್ಷರಾದ ನವಾಝ್ ಕುದ್ರಡ್ಕ, ಮುಸ್ತಫಾ ಪೆರ್ಣೆ ತಣ್ಣೀರುಪಂತ ಎರಡನೇ ವಾರ್ಡಿನ ಅಧ್ಯಕ್ಷ ಅಮರ್ ಶರೀಫ್, ಬೂತ್ ಹಾಗೂ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.