ಕೇರಳ (ವಿಶ್ವ ಕನ್ನಡಿಗ ನ್ಯೂಸ್) : ಕೆಎಸ್ಆರ್ಟಿಸಿ ಬಸ್ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಯುವ ವಿದ್ವಾಂಸ ಮತ್ತು ಅವರ ಮಗ ಮೃತಪಟ್ಟಿದ್ದಾರೆ. ಮೃತರನ್ನು ಕಲ್ಪೆಟ್ಟಾದ ಪೆರುಂತಟ್ಟಾ ನಿವಾಸಿಗಳಾದ, ಪ್ರಸ್ತುತ 6ನೇ ಮೈಲಿಯ ಕುಂಡಲ ಮನಂಚಿರಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎಂ.ಝುಬೈರ್ ಸಖಾಫಿ (42) ಮತ್ತು ಅವರ ಮಗ ಮಿದ್ಲಾಜ್ (13) ಎಂದು ಗುರುತಿಸಲಾಗಿದೆ.
ಸಂಜೆ 5.45ಕ್ಕೆ ಪನಮಾರಂ-ಮನಂತವಾಡಿ ರಸ್ತೆಯಲ್ಲಿ ಕಪ್ಪುಂಚಲ್ ನ ಹಳೆಯ ಗ್ರಾಮ ಕಚೇರಿ ಬಳಿ ಅಪಘಾತ ಸಂಭವಿಸಿದೆ. ಕುಂದಲದ ಬಾಡಿಗೆ ಮನೆಗೆ ತೆರಳುತ್ತಿದ್ದ ಸ್ಕೂಟರ್ ಮತ್ತೊಂದು ವಾಹನವನ್ನು ಓವರ್ ಟೇಕ್ ಮಾಡುವಾಗ ನಿಯಂತ್ರಣ ಕಳೆದುಕೊಂಡು ಮನಂತವಾಡಿಯಿಂದ ಕೋಝೀಕ್ಕೋಡ್ ಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಗೆ ಡಿಕ್ಕಿ ಹೊಡೆದಿದೆ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ದೇಹಗಳನ್ನು ಮಾನಂತವಾಡಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಝುಬೈರ್ ಅವರು ಪತ್ನಿ ಹಾಜರಾ, ಮಗಳು ಮಿನ್ಹಾ ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.