ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಮಂಗಳೂರಿನಲ್ಲಿ 132 ಕೆಜಿ ಗಾಂಜಾದೊಂದಿಗೆ ಮಂಜೇಶ್ವರಂ ಮತ್ತು ಬಂಟ್ವಾಳ ನಿವಾಸಿಗಳನ್ನು ಬಂಧಿಸಲಾಗಿದೆ. ಮಂಗಳೂರು ನಗರ ಅಪರಾಧ ವಿಭಾಗದ ಪೊಲೀಸರು ಮಂಜೇಶ್ವರಂ ಪೊಲೀಸ್ ಠಾಣೆಯ ಅಬ್ದುಲ್ ಖಾದರ್ ಹ್ಯಾರಿಸ್ (31) ಮತ್ತು ಬಂಟ್ವಾಳ ಪೊಲೀಸ್ ಠಾಣೆಯ ರಮೀಜ್ ಅಲಿಯಾಸ್ ರಾಸ್ (30) ನನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಮೀಪದ ಮುಡಿಪ್ಪು ಕೈರ್ಗೋಳಿಯಲ್ಲಿ ಕಾದು ಕುಳಿತಿದ್ದ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಎಸ್ ಐ ಬಿ. ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಂಡ ಇವರನ್ನು ಬಂಧಿಸಿದ್ದಾರೆ. ಗಾಂಜಾವನ್ನು ಸುರಕ್ಷಿತವಾಗಿ ಪ್ಯಾಕ್ ಮಾಡಿ ವಾಹನದಲ್ಲಿ ಪೇರಿಸಿಟ್ಟಿದ್ದರು. ಗಾಂಜಾ ಸಾಗಾಟ ತಡೆದ ವೇಳೆ ದಾಳಿ ನಡೆಸಲು ಬಳಸಿದ್ದ ಎರಡು ಕತ್ತಿ, ಹಣ, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು ಭಾಗದಲ್ಲಿ ರಾಸ್ ವಿತರಣೆ ಹಾಗೂ ಕೇರಳದ ಭಾಗಗಳಲ್ಲಿ ಅಬ್ದುಲ್ ಖಾದರ್ ವಿತರಣೆ ಮಾಡಿತ್ತಿದ್ದರು ಎಂದು ಹೇಳಲಾಗುತ್ತದೆ. ಇವರ ಮೇಲೆ ಮಂಗಳೂರಿನ ಕೊಣಾಜೆ ಠಾಣೆಯಲ್ಲಿ ಮೂರು ಡ್ರಗ್ಸ್ ಪ್ರಕರಣಗಳು ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರು ಗಾಂಜಾ ಸಾಗಾಟ ಹಾಗೂ ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ.
ಅಬ್ದುಲ್ ಖಾದರ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಎರಡು ಕೊಲೆ ಯತ್ನ ಪ್ರಕರಣಗಳು ಹಾಗೂ ಮಂಜೇಶ್ವರಂ ಠಾಣೆಯಲ್ಲಿ ಎರಡು ಹಲ್ಲೆ ಪ್ರಕರಣಗಳಿವೆ. ಇವರಿಬ್ಬರು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಮಂಗಳೂರಿಗೆ ಗಾಂಜಾ ತಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಉಪ ಪೊಲೀಸ್ ಆಯುಕ್ತರಾದ ಅಂಶುಕುಮಾರ್, ದಿನೇಶ್ ಕುಮಾರ್, ಸಿಸಿಬಿ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.