ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) ; ವಿಮಾನದಲ್ಲಿ ದುಬೈನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ವ್ಯಕ್ತಿಯೊಬ್ಬರು ಅನಾರೋಗ್ಯಕ್ಕೀಡಾದಾಗ ಅದೇ ವಿಮಾನದಲ್ಲಿದ್ದ ಮಂಗಳೂರಿನ ವೈದ್ಯೆಯೊಬ್ಬರು ಅವರ ಪ್ರಾಣವನ್ನು ಉಳಿಸಿ ವ್ಯಾಪಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದುಬೈನಿಂದ ಸ್ಪೈಸ್ ಜಟ್ ವಿಮಾನದಲ್ಲಿ ಡಾ.ತಾಜೀಶ್ ಫಾತಿಮಾ ಅವರು ಮಂಗಳೂರಿಗೆ ಬರುತ್ತಿದ್ದಾಗ ಸುಮಾರು 40 ವರ್ಷದ ಪ್ರಾಯದ ವ್ಯಕ್ತಿಯೋರ್ವರು ಅನಾರೋಗ್ಯಕ್ಕೆ ತುತ್ತಾದರು. ಈ ವೇಳೆ ವಿಮಾನ ಸಿಬ್ಬಂದಿ ಪ್ರಯಾಣಿಕರಲ್ಲಿ ಯಾರಾದರೂ ವೈದ್ಯರಿದ್ದಾರ ಎಂದು ಕೇಳಿದ್ದಾರೆ. ಈ ವೇಳೆ ಮುಂದೆ ಬಂದ ಡಾ.ತಾಜೀಶ್ ಫಾತಿಮಾ ಮುಂದೆ ಬಂದು ರೋಗಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಅವರ ಪ್ರಾಣ ಉಳಿಸಿದ್ದಾರೆ.
ಮಂಗಳೂರಿನ ಕುಲಶೇಖರ ಮೂಲದವರಾಗಿರುವ ಡಾ. ತಾಜೀಶ್ ಫಾತಿಮಾ, ಅವರ ಕಾರ್ಯಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.