ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): “ಕೃತಕವಾದ ಸ್ವರ್ಗ ನಿಜವಾದ ನರಕ” ಹೌದು ಆಧುನಿಕ ತಂತ್ರಜ್ಞಾನದ ಯಾಂತ್ರಾಧಾರಿತ ಬದುಕಿನಲ್ಲಿರುವ ನಾವುಗಳೆಲ್ಲ ಭ್ರಾಮಕ ಲೋಕದಲ್ಲಿದ್ದೇವೆ, ಅದು ಎಷ್ಟರಮಟ್ಟಿಗೆ ಎಂದರೆ ಅರಣ್ಯಗಳ ಅಂತ್ಯವಾಡಿ ಮನೆಯ ಬಾಲ್ಕನಿಗಳಲ್ಲಿ ಕೃತಕವಾದ ಪ್ಲಾಸ್ಟಿಕ್ ಹೂಗಳ ಕುಂಡಲಗಳನ್ನು ಶೋಕಿಗಾಗಿ ಇಟ್ಟುಕೊಂಡಿದ್ದೇವೆ ಈ ತೆರನಾದ ಕೃತಕವಾದ ಸ್ವರ್ಗದಲ್ಲಿರುವ ನಾವು ನಿಜವಾದ ನರಕದಲ್ಲಿಯೇ ಇದ್ದೇವಲ್ಲದೇ ಮತ್ತೇನು.? ಜೀವನದಲ್ಲಿ ನಾವು ಏನನ್ನಾದರೂ ಕಲಿಯಬೇಕಾದರೆ ಅದು ಪ್ರಕೃತಿಯ ಮಡಿಲಲ್ಲಿಯೇ ಕಲಿಯಬೇಕು ಅದೆಷ್ಟೋ ವಿಸ್ಮಯಗಳು, ಅದೆಷ್ಟೋ ಬದುಕಿನ ನೋವಿಗೆ ಮುಲಾಮು ಪ್ರಕೃತಿಯಲ್ಲಡಗಿದೆ.
ಕಾಲದ ಒಡೆತಕ್ಕೆ ಸಿಕ್ಕಿರುವ 21 ನೇ ಶತಮಾನದ ಮನುಕುಲದ ಆರೋಗ್ಯಕರವಾದ ಬದುಕಿಗೆ ಪ್ರಕೃತಿಯೊಂದನ್ನ ಪೋಷಣೆ ಮಾಡುವುದ ಬಿಟ್ಟರೆ ಮತ್ತಿನ್ಯಾವ ಮಾರ್ಗ ಇಲ್ಲವೇ ಇಲ್ಲ.! ಈ ತರಹದ ಸತ್ಯ ಚಿತ್ರಣದ ಅರಿವು ನಮಗೆ ಕೋವಿಡ್-19 ರಲ್ಲಾಯ್ತು ಈ ನಿಟ್ಟಿನಲ್ಲಿ ನಾವು ಅರಣ್ಯ ಸಂಪತ್ತಿನ ರಕ್ಷಣೆಯ ಜವಾಬ್ದಾರಿಯನ್ನು ನಿಭಾಯಿಸಬೇಕು ಯಾಂತ್ರಾಧಾರಿತ ಬದುಕಿನ ಸಂಘಕ್ಕೆ ಪೂರ್ಣ ವಿರಾಮವನ್ನಿಡಬೇಕು.
ಗಡಿ ಜಿಲ್ಲೆ ಚಾಮರಾಜನಗರ ಇಂಥದ್ದೊಂದು ಪ್ರಾಕೃತಿಕ ಸೌಂದರ್ಯವನ್ನ ಮತ್ತು ದೈವಿಕ ಶಕ್ತಿಯನ್ನ ಹೊಂದಿರುವ ಕಾನನವನ್ನು ಹೊಂದಿದೆ. ಹೊನ್ನಮೇಟಿ ನೋಡುವ ಸಲುವಾಗಿ ದ್ವಿಚಕ್ರ ವಾಹನವನ್ನೇರಿ ನಮ್ಮ ಗೆಳೆಯರೊಂದಿಗೆ ಪ್ರಯಾಣವನ್ನು ಕೈಗೊಂಡೆವು ಅದೊಂದು ಸ್ವರ್ಗದ ಹಾದಿ. ಕಾನನದ ಹಸಿರಾಸಿಗೆ, ಕಾಡನ ಮಧ್ಯೆ ಕಿರಿದಾದ ಮಡ್ಡಿರೋಡು, ಭಯಪಡಿಸುವ ಆನೆಯ ಲದ್ದಿ, ಹಕ್ಕಿ-ಪಕ್ಷಿಗಳ ಚಿಲಿ-ಪಿಲಿ ನಾದ, ಚಳಿಗಾಲದ ಮುಸುಕಿನ ಮಂಜು, ಒಮ್ಮೊಮ್ಮೆ ಮೋಡ ಇನ್ನೊಮ್ಮೆ ಹೊಂಬಿಸಿಲು ನೋಡ. ಕಾಡನ್ನೇ ಉಸಿರಾಗಿಸಿಕೊಂಡಿರುವ ಅಲ್ಲಲ್ಲಿ ಕಾಡಿನ ಹಾದಿಯಲ್ಲಿ ಸಿಗುವ ಸೋಲಿಗ ವ್ಯಕ್ತಿಗಳು, ಸೋಲಿಗರ ಬದುಕಿನ ಚಿತ್ರಣಗಳೇಳುವ “`ಬೇಡಗುಳಿ“` ಗ್ರಾಮ ಅವರ ಭಾಷೆ, ಸಂಸ್ಕೃತಿ, ಬೇಡಗುಳಿಯ ಬಯಲಲ್ಲಿ ಗುಡ್ಡಗಾಡು ಬಳಸಿಕೊಂಡು ರಮ್ಯವಾಗಿ ಹೆಮರಾಲ್ಡ್ ಹೆವನ್ ಎಸ್ಟೇಟ್ನ ಕಾಫಿ ತೋಟ ಒಂದೊಮ್ಮೆ ಮನಸೂರೆಗೊಳ್ಳುವ ಕಾನನ ಒಂದು ವಿಸ್ಮಯ ತಾಣವೇ ಸರಿ.
ಗಮನ ಸೆಳೆಯುವ ಬಂಗ್ಲಪೋಡು & ಅತ್ತೀಖಾನೆ~: ಅತ್ತೀಖಾನೆ ಮತ್ತು ಬಂಗ್ಲಪೋಡು ಎಂಬ ಹೆಸರು ಕೇಳಿದೊಡನೆಯೇ ನನ್ನ ಕುತೂಹಲ ಇನ್ನಷ್ಟು ಇಮ್ಮಡಿಯಾಯ್ತು. 1923 ರಲ್ಲಿ ನಿರ್ಮಾಣವಾದ ಬ್ರಿಟಿಷರ ಕಾಲದ ಹಳೆಯ ಕಾಲದ ಬಂಗಲೆಯು ಮತ್ತು ಅಲ್ಲಿನ ಹಳೆಯ ಕಾಲದ ವಸ್ತುಪ್ರದರ್ಶನ, ಅದರ ಸುತ್ತ ಮುತ್ತಲೂ ಸೋಲಿಗರ ಪೋಡುಗಳ ತಾಣವೇ ಬಂಗ್ಲಪೋಡು ಎಂಬುದರಿಂದ ಕರೆಯುವುದುಂಟು ಅತ್ತೀಖಾನೆಯು ಕಾಫಿತೋಟವೇ ಆಗಿದೆ. ಬ್ರಿಟಿಷರ ಕಾಲದಲ್ಲಿ ಬ್ರಿಟಿಷರು ಪ್ರಕೃತಿಯ ರಸದೌತಣ ಸವಿಯುವ ಸಲುವಾಗಿ ಇಲ್ಲಿ ಬಂಗಲೆಯನ್ನು ಕಟ್ಟಿಕೊಂಡು ಬ್ರಿಟಿಷರ ಅಧಿಕಾರಿಗಳು ಬೀಡುಬಿಟ್ಟಿದ್ದರು ಎಂದೆನಿಸುತ್ತದೆ.
ಬಂಗ್ಲಪೋಡಿಂದ ಮುಂದೆ ಒಂದೆರಡು ಮೈಲಿ ಕ್ರಮಿಸಿದರೆ ಪುರಾತನ ಕಾಲದ ಕುಂತಿಕಲ್ಲು/ಕೊಂತಿಕಲ್ಲು ಎಂದು ಕರೆಯಲ್ಪಡುವ ಕಲ್ಲುಬಂಡೆಗಯಿದ್ದು ಒಂದು ಐತಿಹ್ಯದ ಪ್ರಕಾರ ಈ ಕಲ್ಲು ಕುಂತಿಯ ಹಾಗೆ ಬನ್ನುಬಾಗಿರುವುದರಿಂದ ಕುಂತಿಕಲ್ಲು ಎಂದು ಕರೆಯುವುದುಂಟು ಅದೊಂದು ಪ್ರಕೃತಿ ನಿರ್ಮಿತ ಸ್ವರ್ಗ ತಮಿಳುನಾಡು & ಕರ್ನಾಟಕ ರಾಜ್ಯವನ್ನು ಎರಡು ತುಂಡಾಗಿ ಬೇರ್ಪಡಿಸುವ ಈ ಹೊನ್ನಮೇಟಿ ಚಾಮರಾಜನಗರದ ಪ್ರಸಿದ್ದ ಪ್ರವಾಸಿ ತಾಣವಾಗಿರುವುದು ಈ ನೆಲದ ಹೆಮ್ಮೆ………
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.