ಮುಂಬೈ (www.vknews.com) : ಬೇರೆ ರಾಜ್ಯಗಳಲ್ಲಿ ಇರುವ ಕನ್ನಡಿಗರ ಅಳಲು ದಿನಕ್ಕೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮುಂಬೈಯಲ್ಲಿರುವ ಯುವತಿಯೊಬ್ಬಳು ವಿಡಿಯೋ ಮಾಡಿ ಮುಂಬೈ ಕನ್ನಡಿಗರನ್ನು ಕರ್ನಾಟಕ ಸರ್ಕಾರ ನಿರ್ಲಕ್ಷ ಮಾಡಿದೆ ಎಂದು ತಮಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ.
ಕನ್ನಡಿಗರಾದ ನಮ್ಮ ಕಡೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮುಂಬೈ ಇಂದ ನಮ್ಮ ರಾಜ್ಯಕ್ಕೆ ಬರಲು ಅವಕಾಶ ಮಾಡಿ ಕೊಡಬೇಕೆಂದು ಅಳಲು ತೋಡಿಕೊಂಡಿದ್ದಾರೆ.
ಮುಂಬೈ ನಲ್ಲಿ ಕೊರೊನಾಕ್ಕಿಂತ ಊಟಕ್ಕೆ ಅನ್ನ ಇಲ್ಲದೆ ಸಾಯುತ್ತಿದ್ದೇವೆ ನಮ್ಮನ್ನು ಆದಷ್ಟು ಬೇಗ ನಮ್ಮ ರಾಜ್ಯಕ್ಕೆ ಕರೆದುಕೊಳ್ಳುವ ವ್ಯವಸ್ಥೆ ಮಾಡಿ ಎಂದು ಭಾವುಕರಾಗಿದ್ದಾರೆ. ಅಲ್ಲದೆ ಚುನಾವಣೆ ಬಂದ ಸಮಯದಲ್ಲಿ ಓಟಿಗಾಗಿ ನಮ್ಮ ನೆನಪಾಗುವ ನಿಮಗೆ ಇಂದು ನೆನಪಾಗುತ್ತಿಲ್ಲ ಎಂದು ತಮ್ಮ ಮನದ ನೋವನ್ನು ವಿಡಿಯೋ ಮೂಲಕ ತೋಡಿಕೊಂಡಿದ್ದಾಳೆ.
ವಿಡಿಯೋ ವೀಕ್ಷಿಸಿ…
ವರದಿ : ನಯನ್ ಮಹೇಶ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.