(www.vknews.com) : ಉಂಡ ಮನೆಗೆ ದ್ರೋಹ ಬಗೆಯುವಾಗ ಯಾರು ತಾನೇ ಮಾತನಾಡದೆ ಇರುತ್ತಾರೆ ಹೇಳಿ. ಇತ್ತೀಚಿನ ಕೆಲ ವರದಿಗಳನ್ನು ಓದುವಾಗ ಈ ಮಾತು ನೆನಪಿಗೆ ಬರುತ್ತದೆ.
ಕಾರಣ ಅರಬ್ ದೇಶಗಳಾದ ದುಬೈ, ಕುವೈಟ್ ಮೊದಲಾದ ಕಡೆಗಳಲ್ಲಿ ಸಮುದಾಯಗಳ ನಡುವೆ ಅಶಾಂತಿ ಉಂಟು ಮಾಡುವ ಸಂದೇಶಗಳನ್ನು ಹರಡಿ ಕೆಲ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ನಿಜಕ್ಕೂ ಅರಬರು ಮಾಡುತ್ತಿರುವುದು ಉತ್ತಮ ಕೆಲಸ. ಅದೇ ದೇಶದಲ್ಲಿ ದುಡಿದು, ಅಲ್ಲಿನ ಅನ್ನ ತಿಂದು, ಅದೇ ಸಮುದಾಯದ ವಿರುದ್ಧ ಅನವಶ್ಯಕವಾದ ಸಂದೇಶಗಳನ್ನು ಹರಡುವುದು ಎಷ್ಟು ಸರಿ?
ನನ್ನ ಅಭಿಪ್ರಾಯದಲ್ಲಿ ಬೇರೆ ರಾಷ್ಟ್ರಗಳಲ್ಲಿ ಆದ್ರೆ ಇವರು ಕೇವಲ ಉದ್ಯೋಗ ಕಳಕೊಳ್ಳುವುದು ಮಾತ್ರವಲ್ಲ, ಸರಿಯಾದ ದಂಡ ಹಾಗು ಜೈಲು ಕಂಬಿ ಎಣಿಸಬೇಕಿತ್ತು. ಎಲ್ಲ ಸಮುದಾಯದವರು ಒಟ್ಟಾಗಿ ಜೀವಿಸುತ್ತಿರುವಾಗ ಇವರಿಗೆ ಯಾಕಾಗಿ ಈ ತರದ ಮನಸ್ಥಿತಿ ಬರುತ್ತಿದೆ. ಇನ್ನಾದರೂ ಇಂತಹ ನೀಚ ಬುದ್ದಿಯ ಜನರಿಗೆ ತಕ್ಕಶಿಕ್ಷೆ ಆಗಿ, ಮುಂದೆ ಯಾರು ಕೂಡ ಇದು ಮುಂದುವರೆಸದಂತೆ ಮಾಡಬೇಕಾಗಿದೆ.
– Qayhan K, ಪುತ್ತೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.