(www.vknews.com) : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ (ಉಳ್ಳಾಲ) ವತಿಯಿಂದ ಸಂಸ್ಥಾಪನಾ ದಿನದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಗೂ ಧ್ವಜಾರೋಹಣವನ್ನು SDPI ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಬ್ಬಾಸ್ ಕಿನ್ಯಾರವರು ವಹಿಸಿದ್ದರು. ಹಾಜಿ ಅಬ್ದುಲ್ ಲತೀಫ್ ಕೋಡಿಜಾಲ್ (ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ, ಕಾರ್ಯದರ್ಶಿ) ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅಕ್ರಮ್ ಹಸನ್ ( SDPI ರಾಜ್ಯ ಕಾರ್ಯದರ್ಶಿ)ಪಕ್ಷ ಬೆಳೆದು ಬಂದ ಬಗ್ಗೆ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದರು.
PFI ಮಲಾರ್ ಡಿವಿಷನ್ ಅಧ್ಯಕ್ಷರು ಝಾಹಿದ್ ಮಲಾರ್ ,PFI ಉಳ್ಳಾಲ ಡಿವಿಷನ್ ಕಾರ್ಯದರ್ಶಿ ಶಹೀದ್ ಕಿನ್ಯಾ ,ಝಹೂರ್ ತುಂಬೆ (SDPI ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ),ನಾಸಿರ್ ಒಮೇರಾ (SDPI ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರು),ಇರ್ಷಾದ್ ಅಜ್ಜಿನಡ್ಕ (SDTU ಅಧ್ಯಕ್ಷರು(ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ),ಅಬ್ಬಾಸ್ ಉಚ್ಚಿಲ್(ಸಾಮಾಜಿಕ ಕಾರ್ಯಕರ್ತರು),ರವುಫ್ ಉಳ್ಳಾಲ(ಉಳ್ಳಾಲ ನಗರಸಭಾ ಕೌನ್ಸಿಲರ್), ರಮೀಝ್ ಉಳ್ಳಾಲ(ಉಳ್ಳಾಲ ನಗರ ಸಭಾ ಕೌನ್ಸಿಲರ್), ಜುಲೈಕಾ ಬಶೀರ್ ಅಜ್ಜಿನಡ್ಕ (ಕೋಟೆಕಾರ್ ಪಟ್ಟಣ ಪಂಚಾಯತ್ ಕೌನ್ಸಿಲರ್),ಇಮ್ರಾನ್ ಕೆ ಸಿ ನಗರ(SDPI ತಲಪಾಡಿ ಗ್ರಾಮ ಸಮಿತಿ ಅಧ್ಯಕ್ಷರು), ವೇದಿಕೆಯಲ್ಲಿ ಉಪಸ್ಥಿತರಿದ್ದರು.
SDPI ಸಂಸ್ಥಾಪಕ ದಿನ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ ವನ್ನು ಸುಲೇಮಾನ್ ಉಸ್ತಾದ್ (SDPI ಮಂಗಳೂರು ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷರು) ಉದ್ಘಾಟಿಸಿದರು. ಸಾರ್ವಜನಿಕರಿಗೆ ತಲಪಾಡಿ ಗ್ರಾಮ ಸಮಿತಿ ಸದಸ್ಯ ಅಬ್ದುರ್ರಹ್ಮಾನ್ ಉಚಿತವಾಗಿ ಮಾಸ್ಕ್ ವಿತರಿಸಲಾಯಿತು. ಅಬ್ದುಲ್ ಹಕೀಂ ಕೆ ಸಿ ನಗರ ( ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರು) ಸ್ವಾಗತಿಸಿದರು ಹಾಗೂ ಇಸ್ಮಾಯಿಲ್ ಟಿ (SDTU ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷರು) ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.