(www.vknews.com) : ಎಲ್ಲೋ ಓದಿದ ಒಂದು ವಿಷಯ ಜ್ಞಾಪಕಕ್ಕೆ ಬಂತು .ವೈದ್ಯರ ಬಳಿ ಓರ್ವರನ್ನು ಜನರು ಕರೆ ತಂದರು .ಹಾವು ಕಚ್ಚಿದೆ ,ಬೇಗ ಚಿಕಿತ್ಸೆ ಮಾಡಿ ಎಂದರು .ವೈದ್ಯರು ಚಿಕಿತ್ಸೆ ನೀಡಿದರು .ಕೆಲವೇ ಸಮಯದಲ್ಲಿ ಆತನ ತಂದೆ ಓಡಿ ಬಂದು, ಇದೇ ಕೆರೆ ಹಾವು ನನ್ನ ಮಗನಿಗೆ ಕಚ್ಚಿದ್ದು ನೋಡಿ ಎಂದರು .ಅದು ನೀರಿನ ಹಾವು. ವಿಷರಹಿತ ವಾಗಿತ್ತು .ಗಾಬರಿಗೊಳ್ಳುವ ವಿಷಯ ಅಷ್ಟೇನು ಇರಲಿಲ್ಲ .ಆದರೆ ಹಾವು ಕಡಿಸಿಕೊಂಡ ವ್ಯಕ್ತಿ ಮಾನಸಿಕವಾಗಿ ತತ್ತರಿಸಿ ಹೋಗಿದ್ದ .ಮನೆಗೆ ಹೋಗಿ ಸಾವನ್ನಪ್ಪಿದ .
ಅದೇ ವೈದ್ಯರು ಇನ್ನೊಂದು ಸನ್ನಿವೇಶವನ್ನು ಪ್ರಸ್ತಾಪಿಸಿದರು .ಓರ್ವ ವಿಷಪೂರಿತ ಹಾವಿನಿಂದ ಕಚ್ಚಿಸಿಕೊಂಡು, ಅದನ್ನು ಹೊಡೆದು, ಸಾಯಿಸಿ ,ವೈದ್ಯರ ಬಳಿ ಬಂದು,ಚಿಕಿತ್ಸೆ ಪಡೆದ .ವಾಸಿಯಾಗಿ ಹೋದ .ಧೈರ್ಯವಂತ ಮನುಷ್ಯ .
ಪ್ರತಿಯೊಬ್ಬ ಮನುಷ್ಯನ ಮಾನಸಿಕ ಸ್ಥಿತಿ ಒಂದೇ ರೀತಿಯಾಗಿರುವುದಿಲ್ಲ .ಕೆಲವರಿಗೆ ಧೈರ್ಯ ತುಂಬಬೇಕಾಗುತ್ತದೆ. ಆಗ ಅವರು ಅನಾವಶ್ಯಕ ಅನಾಹುತಗಳಿಂದ ಪರಾಗವುದುಂಟು .
ಈ ಕರೋನ ರೋಗದ ಬಗ್ಗೆ ನಮ್ಮ ನಡುವೆ ನಡೆಯುತ್ತಿರುವ ಸಂಭಾಷಣೆಗಳಲ್ಲಿ ಶೇ .೯೦ ಭಾಗ ದಷ್ಟು ಋಣಾತ್ಮಕ ಭಾವನೆಗಳೇ ಹೆಚ್ಚಾಗಿವೆ .ಸಾಮಾನ್ಯ ನೆಗಡಿ ಬಂದರು ಮನುಷ್ಯ ಆತಂಕಕ್ಕೆ ಒಳಗಾಗುತ್ತಿದ್ದಾನೆ . ಸಾಮಾನ್ಯ ಜ್ವರ ಬಂತೆಂದರೆ ಮನುಷ್ಯನ ಭಯಭೀತಿಗೆ ಮಿತಿಯೇ ಇಲ್ಲದಂತಾಗಿದೆ .ಏಕೆಂದರೆ ನಮ್ಮ ಮೀಡಿಯಾಗಳು ,ವಾಟ್ಸಪ್ ಗ್ರೂಪ್ಗಳು ,ಆ ರೀತಿಯ ಭಯಾನಕ ಯೋಚನೆಗಳನ್ನು ತಲೆಗಳಲ್ಲಿ ತೂರಿಸಿಬಿಟ್ಟಿವೆ .
ನನ್ನ ಇಬ್ಬರು ಸ್ನೇಹಿತರು ಪಿಜಿ ಮುಚ್ಚಿದ ಕಾರಣ ಬೆಂಗಳೂರಿನಿಂದ ಒಡಿಶಾಗೆ ಹೊರಡಲು ಸಿದ್ದರಾದರು `.ಪ್ಲೇನ್ ಟಿಕೆಟ್ ಬುಕ್ ಆಯಿತು .ಅದರ ಜೊತೆಗೆ ಸರ್ಕಾರದಿಂದ ಒಂದು ರಿಜಿಸ್ಟರ್ ನಂಬರ್ ಸಿಗುತ್ತದೆ .ವಿಮಾನ ನಿಲ್ದಾಣಕ್ಕೆ ಹೋದರು .ಜನಜಂಗುಳಿ ಜಾತ್ರೆಗಿಂತ ಕಡಿಮೆ ಇಲಲಿಲ್ಲ . ಯಾರೂ ಸರ್ಕಾರದ ನಿಯಮಗಳನ್ನು ಪಾಲಿಸುತ್ತಿರುವುದು ಕಾಣುತ್ತಿರಲಿಲ್ಲ .ಜನರು ಗುಂಪು ಗುಂಪುಗಳಲ್ಲೇ ಇದ್ದರು .ಚೆಕಿಂಗ್ ಪ್ರಾರಂಭ .ಆ ಮಾನಸಿಕ ರೋಧನೆ ಕೇಳಬೇಡಿ .ಪ್ರಯಾಣ ಮುಗಿಯಿತು .ಅಲ್ಲಿಯ ವಿಮಾನ ನಿಲ್ದಾಣದಲ್ಲಿ ಬೇರೆ ರಾಜ್ಯಗಳಿಂದ ಬಂದವರಿಗಾಗಿ ಪೋಲಿಸರು ,ಸ್ವಾಗತಿಸಲು ನಿಂತಿದ್ದರು .ಅಲ್ಲಿ ಟೆಸ್ಟಿಂಗ್ ಆಯಿತು .ಕೈಗೆ ಸೀಲ್ ಹಾಕಿ ಯಾವುದೋ ಶಾಲೆಗೇ ಕರೆದುಕೊಂಡು ಹೋದರು .ಆ ಶಾಲೆಯಲ್ಲಿ ಕಳೆದ ವನವಾಸ ದೇವರೇ ಬಲ್ಲ…! .ಪರೀಕ್ಷಿಸಿದ ರಕ್ತದ ರಿಸಲ್ಟ್ ಕೋವಿಡ್ ನೆಗೆಟಿವ್ ಬಂತು .ಕೊನೆಗೆ ಮನೆಗೆ ಪ್ರಯಾಣ .ಮನೆಗೆ ತಲುಪಿ ಎರಡು ದಿನದ ನಂತರ ಜ್ವರ ,ಕೆಮ್ಮು,ಬಂತು .ಮನೆಯವರಿಗೆ ಆತಂಕ ಪ್ರಾರಂಭ .ಅಕ್ಕಪಕ್ಕದವರಿಗೆ ಗೊತ್ತಾಗಿ ಹೋದರೆ ಏನಾಗುತ್ತೋ ಎನ್ನುವ ಭಯ. ಧೈರ್ಯ ಮಾಡಿ ಪರಿಚಿತ ವೈದ್ಯರಿಗೆ ತಿಳಿಸಿದರು.ಅವರು ಹೆದರುವ ಚಿಂತೆ ಏನಿಲ್ಲ .ಸಾಮಾನ್ಯ ಜ್ವರ ,ಈ ಮಾತ್ರೆ ಗಳನ್ನು ಸೇವಿಸಿ ಎಂದರು .ಅಬ್ಬಾ..! ಎರಡು ದಿನಗಳಲ್ಲಿ ಜ್ವರ ಮಾಯ.ಆದರೆ ೧೦ ದಿನಗಳ ಮಾನಸಿಕ ಹಿಂಸೆ ಹೇಳಲು ಸಾಧ್ಯವಿಲ್ಲ . ಇದಕ್ಕೆಲ್ಲಾ ಕಾರಣ ಮೀಡಿಯಾಗಳು .ಅತೀ ಹೆಚ್ಚಾಗಿ ಬಿತ್ತರಿಸುತ್ತಿರುವ ಋಣಾತ್ಮಕ ವಿಷಯಗಳು. ಕೆಲ ಆಸ್ಪತ್ರೆಗಳು ,ವೈದ್ಯರು, ಮತ್ತು ಸುತ್ತಮುತ್ತಲ ಸಮಾಜ ಕೊರೊನ ರೋಗಿಗಳ ಜೊತೆ ಮಾಡುತ್ತಿರುವ ದುರ್ವರ್ತನೆಗಳು .
ಧೈರ್ಯ ಹೇಳುವವರು ತೀರಾ ಕಡಿಮೆ .ಆದುದರಿಂದ ಋಣಾತ್ಮಕ ವಾರ್ತೆಗಳಿಂದ ದೂರ ಉಳಿಯೋಣ. ಮುಂಜಾಗ್ರತೆಯನ್ನು ವಹಿಸೋಣ .ಭವಿಷ್ಯವನ್ನು ಕಾಲಕ್ಕೆ ಬಿಡೋಣ..ಮನುಷ್ಯತ್ವ ತೋರಿಸುತ್ತಿರುವ ಕೆಲ ವೈದ್ಯರಿಗೆ ಸಮಾಜ ಸೇವಕರಿಗೆ ಜನರು ಉಸಿರಿರುವವರೆಗೂ ಮರೆಯುವುದಿಲ್ಲ. ನಾವೂ ಅವರಲ್ಲಿ ಒಬ್ಬರಾಗೋಣ .ಧನಾತ್ಮಕ ವಾತಾವರಣವನ್ನು ಸೃಷ್ಟಿಸೋಣ .
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.