ಕುಂದಾಪುರ,(ವಿಶ್ವ ಕನ್ನಡಿಗ ನ್ಯೂಸ್ ): ತಾಲ್ಲೋಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಕಮಲಶಿಲೆ ಶ್ರೀ ಭ್ರಾಹ್ಮೀ ದುರ್ಗಾಪರಮೇಶ್ವರೀ ದೇವಳಕ್ಕೆ ಕುಬ್ಜಾ ನದಿ ನೀರು ನುಗ್ಗಿ, ಶ್ರೀ ದೇವಿಯನ್ನು ತೊಯಿಸಿದೆ. ಬಾರಿ ಮಳೆಗೆ ಕುಬ್ಜಾ ನದಿ ಉಕ್ಕೆರಿ ದೇವಳದ ಗರ್ಭ ಗುಡಿ ಪ್ರವೇಶಿಸಿ ಶ್ರೀದೇವಿಯನ್ನು ಅಭಿಶೇಕ ಮಾಡಿತು. ಇದು ತಲಾತಲಾಂತರ ದಿಂದ ನಡೆದು ಕೊಂಡ ಬಂದ ವಿಚಾರವಾದರೂ, ಅಷ್ಟೇ ಮಹತ್ವವನ್ನು ಹೊಂದಿದೆ .,ಧಾರ್ಮಿಕತೆ ಮೇಳೈಸುತ್ತದೆ. ಶ್ರೀದೇವಿಯನ್ನು ತೊಯಿಸಿದ ನೀರಿನ್ನು ಸ್ಪರ್ಶಿಸಿದರೆ , ಪಾಪ ಪಾವನವಾಗುತ್ತದೆ ಎಂಬ ನಂಬಿಕೆ ಇದ್ದೂ, ಅದರಂತೆ ಆಸು ಪಾಸಿನ ಭಕ್ತರ ದಂಡು ಕ್ಷೇತ್ರಕ್ಕೆ ಆಗಮಿಸುತ್ತಿದ್ದೂ, ನೀರಿನಲ್ಲಿ ಮುಳುಗಿ ತಮ್ಮ ಇಷ್ಟ್ರಾರ್ಥವನ್ನು ಪಡೆಯುವುದರ ಜೊತೆಗೆ ಈ ಸನ್ನೀವೇಶವನ್ನು ಕಣ್ತುಂಬಿ ಕೊಂಡು ಶ್ರೀ ದೆವಿಯ ಕ್ರಪೆಗೆ ಪಾತ್ರರಾಗುತ್ತಿದ್ದಾರೆ. ವಿಶೇಷ ಪೂಜೆ: ದೇಗುಲ ಪ್ರವೇಶಿಸಿದ ಕುಬ್ಜಾ ನದಿಗೆ ದೇವಳದ ಆಡಳಿತ ಮಂಡಳಿ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿತು. ನಂತರ ಶ್ರೀದೇವಿಗೆ ವಿಶೇಷ ಪೂಜೆ, ಮಂಗಳಾರತಿ ಬೆಳಗಲಾಯಿತು. ದೇವಳದ ಆಡಳಿತ ಮೊಕ್ತೇಸರ ಸಚ್ಚಿದಾನಂದ ಚಾತ್ರ, ಜತೆ ಮೊಕ್ತೇಸರರಾದ ಬರೆಗುಂಡಿ ಶ್ರೀನಿವಾಸ ಚಾತ್ರ, ಆಜ್ರಿ ಚಂದ್ರಶೇಖರ ಶೆಟ್ಟಿ ಮೊದಲಾದವರು ಇದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.