ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಮಂಡಾಡಿ ನಿವಾಸಿ ವೃದ್ದ ದಂಪತಿಗಳಾದ ಗಿರಿಜ ಹಾಗೂ ಅವರ ಪತಿ ಯಾವುದೇ ದುಡಿಮೆ ಇಲ್ಲದೆ, ದುಡಿಯಲು ಶಕ್ತಿಯಿಲ್ಲದೆ ಅನಾರೋಗ್ಯಕ್ಕೀಡಾಗಿದ್ದು, ಮಾತ್ರವಲ್ಲ ಇವರ ಆಸರೆಗೆ ಯಾರೂ ಇಲ್ಲದೆ ಕಷ್ಟದ ಪರಿಸ್ಥಿತಿಯಲ್ಲಿ ಜೀವನ ನಿರ್ವಹಿಸುತ್ತಿರುವುದನ್ನು ಗುರುತಿಸಿದ ಡಿ ವೈ ಎಫ್ ಐ ಜಿಲ್ಲಾ ಮುಖಂಡ ಸಂತೋಷ್ ಬಜಾಲ್ ಅವರು ಅನಿವಾಸಿ ಸಂಘ ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ (ಎಂಎಎಸ್ಎ) ಸಂಸ್ಥೆಯ ಗಮನಕ್ಕೆ ತಂದು ಆ ಮೂಲಕ ಆರ್ಥಿಕ ಸಹಾಯ ಒದಗಿಸಿಕೊಸಡುವಲ್ಲಿ ಸಹಕರಿಸಿರುತ್ತಾರೆ.
ಸಂಸ್ಥೆಯು ನೀಡಿದ 20 ಸಾವಿರ ರೂಪಾಯಿ ಮೊತ್ತದ ಆರ್ಥಿಕ ಸಹಾಯದ ಚೆಕನ್ನು ಗುರುವಾರ ಸಂತ್ರಸ್ತರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಡಿವೈಎಫ್ಐ ಬಂಟ್ವಾಳ ತಾಲೂಕಿನ ಪ್ರಮುಖರಾದ ತುಳಸಿದಾಸ್ ವಿಟ್ಲ, ಉದಯ ಕುಮಾರ್ ಮಂಡಾಡಿ, ರಾಜಾ ಚೆಂಡ್ತಿಮಾರ್, ಸುರೇಂದ್ರ ಕೋಟ್ಯಾನ್, ಲೋಲಾಕ್ಷಿ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.