ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಹೊರ ಜಿಲ್ಲೆಯ ಹಿಂದೂ ಯುವಕರೊಂದಿಗೆ ಪುತ್ತೂರಿನ ಮುಸ್ಲಿಂ ಯುವತಿ ಹಾಗು ಆಕೆಯ ಸ್ನೇಹಿತೆ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ಮುಸ್ಲಿಂ ಯುವಕರು ಅವರನ್ನು ತರಾಟೆಗೆ ತೆಗೆದುಕೊಂಡರ ಘಟನೆ ಪುತ್ತೂರಿನಲ್ಲಿ ನಡೆದಿದೆ.
ರಾಯಚೂರು ಮೂಲದ ಹಿಂದೂ ಯುವಕರು ಹಾಗು ಪುತ್ತೂರು ಮೂಲದ ಮುಸ್ಲಿಂ ಯುವತಿ ಹಾಗು ಆಕೆಯ ಸ್ನೇಹಿತೆ ಹಿಂದೂಸ್ತಾನ್ ಲಾಡ್ಜ್ ನಲ್ಲಿ ರೂಮ್ ಬುಕ್ ಮಾಡಲು ತೆರಳಿದ್ದು, ವಿವರ ತಿಳಿದ ಮುಸ್ಲಿಂ ಯುವಕರು ಹಿಂದೂ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗುತ್ತಿದ್ದಂತೆ ಸ್ಥಳೀಯರು ಅವರನ್ನು ಆಟೋ ಮೂಲಕ ಪೊಲೀಸ್ ಠಾಣೆಗೆ ಕಳುಹಿಸಿದ್ದು, ಸದ್ಯ ಆ ಇಬ್ಬರು ಯುವಕರು ಹಾಗೂ ಯುವತಿ ಪುತ್ತೂರು ನಗರ ಠಾಣೆಯಲ್ಲಿದ್ದಾರೆ .
ರಾಯಚೂರು ಮೂಲದ ಹಿಂದೂ ಯುವಕನಿಗೆ ಇನ್ಸ್ಟಾಗ್ರಾಮ್ ಮೂಲಕ ಪುತ್ತೂರು ಮೂಲದ ಮುಸ್ಲಿಂ ಯುವತಿಯ ಪರಿಚಯವಾಗಿದ್ದು, ಪರಿಚಯ ಪ್ರೇಮಕ್ಕೆ ತಿರುಗಿ ಅವಳನ್ನು ಭೇಟಿ ಮಾಡಲು ಇಂದು ಪುತ್ತೂರಿಗೆ ಬಂದಿದ್ದರು ಎನ್ನಲಾಗುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.