ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): 1886 ಮೇ ತಿಂಗಳಲ್ಲಿ ಚಿಕಾಗೊದಲ್ಲಿ ಕಾರ್ಮಿಕರ ಮೇಲೆ ನಡೆದ ಧಮನಕಾರಿ ಘಟನೆಯನ್ನು ಆಧರಿಸಿ ಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತಿದೆ.ಆದರೆ 134 ವರ್ಷ ಕಳೆದರೂ ಕಾರ್ಮಿಕರ ಮೇಲಿನ ಧಮನ ಕಡಿಮೆಯಾಗಿಲ್ಲ.
ಇಂದಿಗೂ ನಮ್ಮ ದೇಶದಲ್ಲಿ ಕಾರ್ಮಿಕರ ಕಲ್ಯಾಣ ನಿಧಿಗಳು ಅದರ ಉದ್ದೇಶದ ಪ್ರಕಾರ ಬಳಕೆಯಾಗುತ್ತಿಲ್ಲ.ಇಂದಿನ ಆಡಳಿತ ಸರಕಾರಗಳು ಮಾಲಿಕರ ಪರವಾಗಿವೆಯೇ ಹೊರತು ಕಾರ್ಮಿಕರ ಪರವಾಗಿಲ್ಲ.
ಈ ಬಾರಿ ಕೊರೊನದ ಲಾಕ್ ಡೌನ್ ನಿಂದಾಗಿ ಕಾರ್ಮಿಕರನ್ನು ಕೆಲಸದಿಂದ ತೆಗೆಯಬಾರದು,ಅವರ ವೇತನ ಕಡಿತಗೊಳಿಸಬಾರದು ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದ ಎರಡೇ ದಿವಸದಲ್ಲಿ ಸರಕಾರ ಆದೇಶವನ್ನು ಹಿಂಪಡೆದಿರುವುದರಿಂದಲೇ ತಿಳಿಯುತ್ತದೆ ಸರಕಾರವು ಮಾಲಿಕರ ಗುಲಾಮರಾಗಿದೆ ಎಂದು.
ಹಲವಾರು ಕಾರ್ಮಿಕರ ಪರ ಕಾನೂನುಗಳನ್ನು ಆಡಳಿತ ಸರಕಾರವು ತಿದ್ದುಪಡಿ ಮಾಡಿ ಮಾಲಿಕರ ಪರವಾಗಿಸಿದೆ. ಒಟ್ಟಿನಲ್ಲಿ ಆಡಳಿತ ಸರಕಾರಗಳು ಕಾರ್ಮಿಕರನ್ನು ನಯವಾಗಿ ವಂಚಿಸಿ ಮಾಲಿಕರನ್ನು ಸಂತೃಪ್ತಿ ಪಡಿಸುತ್ತಿದೆ. ಈ ನಿಟ್ಟಿನಲ್ಲಿ ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಕರ್ನಾಟಕ ಸರಕಾರದೊಂದಿಗೆ ಕೆಲವೊಂದು ಬೇಡಿಕೆಗಳನ್ನು ಇಡುತ್ತಿದೆ.ಈ ಬೇಡಿಕೆಗಳನ್ನು ಸರಕಾರವು ಖಂಡಿತವಾಗಿಯೂ ಪೂರೈಸಬೇಕು ಮಾತ್ರವಲ್ಲ ಯಾವುದೇ ಕಾರಣಕ್ಕೂ ನಿರಾಕರಿಸಬಾರದೆಂದು ತಾಕೀತು ಮಾಡುತ್ತಿದೆ. ಕಾರ್ಮಿಕರ ಸಾಮಾಜಿಕ ಭದ್ರತಾ ಪಧ್ಧತಿ ಕೊನೆಗೊಳಿಸುವ ತೀರ್ಮಾನವನ್ನು ಹಿಂಪಡೆಯಬೇಕು.
ಕೆಲಸದ ಸಮಯವನ್ನು 12 ಗಂಟೆಯಾಗಿ ಹೆಚ್ಚಿಸುವ ತೀರ್ಮಾನವನ್ನು ಕೈಬಿಡಬೇಕು. ಕೊರೊನದಿಂದಾಗಿ ಸಂಭವಿಸಿದ ಆರ್ಥಿಕ ಕುಸಿತವನ್ನು ಸರಿದೂಗಿಸಲು ಕಾರ್ಮಿಕರ ತಲೆಯ ಮೇಲೆ ಅದನ್ನು ಹೊರಿಸಬಾರದು.
ರಾಜ್ಯದ ಎಲ್ಲಾ ವಲಸೆ ಕಾರ್ಮಿಕರಿಗೆ ಉಚಿತ ರೇಶನ್ ಮತ್ತು ಹಣಕಾಸಿನ ನೆರವು ಖಾತ್ರಿಪಡಿಸಬೇಕು. ಸಾಂಕ್ರಾಮಿಕ ರೋಗದ ಮರೆಯಲ್ಲಿ ಜನರನ್ನು ಪರಸ್ಪರ ಎತ್ತಿಕಟ್ಟುವ ಕೋಮುವಾದಿಗಳನ್ನು ನಿಯಂತ್ರಣದಲ್ಲಿರಿಸಬೇಕು ಪ್ರಜಾಪ್ರಭುತ್ವದ ಅವಕಾಶ ಮತ್ತು ಕಾರ್ಮಿಕರ ಅವಕಾಶವನ್ನು ಮುಗಿಸುವ ಕುತಂತ್ರ ಸರಕಾರ ಮಾಡಬಾರದು. ದೇಶದ ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ಹಣಕಾಸು ಸುರಕ್ಷತೆ ನೀಡಬೇಕು.
ರೈತರ,ಕೃಷಿಕರ ಮತ್ತು ಸಣ್ಣವ್ಯಾಪಾರಿಗಳ ಎಲ್ಲಾ ಸಾಲವನ್ನು ಭೇಷರತ್ ಮನ್ನಾ ಮಾಡಬೇಕು. ಬಂಡವಾಳಶಾಹಿಗಳಿಗೆ ಮತ್ತು ಅಗರ್ಭ ಶ್ರೀಮಂತರಿಗೆ ಪ್ರತ್ಯೇಕ ತೆರಿಗೆ ನಿಯಮ ಜಾರಿಗೆ ತಂದು ಆರ್ಥಿಕ ಕುಸಿತವನ್ನು ಸರಿದೂಗಿಸಬೇಕು.
ಅಡ್ವಕೇಟ್ ಅಬ್ದುಸ್ಸಲಾಂ ರಾಜ್ಯಾದ್ಯಕ್ಷರು FITU ಕರ್ನಾಟಕ.
ಸುಲೈಮಾನ್ ಕಲ್ಲರ್ಪೆ. ಪ್ರಧಾನ ಕಾರ್ಯದರ್ಶಿಗಳು FITU ಕರ್ನಾಟಕ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.