(www.vknews.com) : ಇಸ್ಲಾಮಿನ ಪಂಚ ಸ್ತಂಭಗಳಲ್ಲೊಂದಾಗಿದೆ. ನಮ್ಮಂತೆಯೇ ಪೂರ್ವಿಕ ಜನಾಂಗಕ್ಕೂ ಕಡ್ಡಾಯಗೊಳಿಸಲ್ಪಟ್ಟ ಪುರಾತನ ಆರಾಧನೆಗಳಲ್ಲಿ ಇದೂ ಒಂದಾಗಿದೆ. ಪಾಪಗಳಿಂದ ತುಂಬಿದ ದೇಹ ಮತ್ತು ಮನಸ್ಸನ್ನು ಶುಚಿಗೊಳಿಸಲು ಅಲ್ಲಾಹನು ನೀಡಿದ ಸದವಕಾಶವೇ ಉಪವಾಸ ವ್ರತ.
ಪವಿತ್ರ ಖುರ್ ಆನ್ನಲ್ಲಿ ಅಲ್ಲಾಹನು ಹೇಳುತ್ತಾನೆ: “ಓ !!! ಸತ್ಯ ವಿಶ್ವಾಸಿಗಳೇ , ನಿಮ್ಮ ಪೂರ್ವಿಕರ ಮೇಲೆ ಉಪವಾಸ ಕಡ್ಡಾಯಗೊಳಿಸಿದಂತೆ ನಿಮ್ಮ ಮೇಲೂ ಉಪವಾಸ ಕಡ್ಡಾಯಗೊಳಿಸಲಾಗಿದೆ. ಅದರ ಮೂಲಕ ನೀವೂ ಭಯ, ಭಕ್ತಿ ಉಳ್ಳವರಾಗಲಿಕ್ಕಾಗಿ ” ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ; “ಒಬ್ಬ ವ್ಯಕ್ತಿ ಕೆಟ್ಟ ಮಾತುಗಳನ್ನೂ, ಪಾಪ ಕೃತ್ಯಗಳನ್ನೂ ಉಪೇಕ್ಷಿಸದೇ ಕೇವಲ ಅನ್ನ ಪಾನೀಯಗಳನ್ನು ತೊರೆಯುವುದು ಅಲ್ಲಾಹನಿಗೆ ಅಗತ್ಯವಿಲ್ಲ.. ಅನ್ನ ಪಾನೀಯಗಳನ್ನು ತೊರೆಯುವುದರ ಮೂಲಕ ಮಾನಸಿಕ ಹಾಗೂ ದೈಹಿಕ ನಿಯಂತ್ರಣವೇ ಉಪವಾಸದ ನಿಜವಾದ ಗುಟ್ಟು” ಎನ್ನುವುದನ್ನು ಈ ಹದೀಸಿನ ಮೂಲಕ ತಿಳಿಯಬಹುದಾಗಿದೆ…
ಮನುಷ್ಯನ ಉನ್ನತಿಯನ್ನು ತಡೆಯುವ ಅನೇಕ ವಿಷಯಗಳಿವೆ. ನಡೆ, ನುಡಿ, ಚಿಂತನೆಗಳಲ್ಲಿ ಸಂಭವಿಸುವ ಕೆಡುಕುಗಳು ಅವುಗಳಲ್ಲಿ ಬಹಳ ಮುಖ್ಯವಾದವುಗಳು. ಆದರೆ, ವ್ರತ ಅವುಗಳಿಂದ ಮುಕ್ತಿ ನೀಡಿ, ಮನುಷ್ಯನನ್ನು ಔನ್ನತ್ಯಕ್ಕೇರಿಸುತ್ತದೆ. ವ್ರತಕಾಲವು ದುಷ್ಟ ಚಿಂತೆ, ದುಷ್ಟ ಕೆಲಸಕಾರ್ಯಗಳಿಂದ ತಡೆದು ನಿಲ್ಲಿಸಿ, ಮನಸ್ಸು ಹಾಗೂ ಶರೀರವನ್ನು ಸ್ಪಟಿಕ ಶುದ್ಧಗೊಳಿಸಿ, ಸಂಶುದ್ದ ಜೀವನ ನಡೆಸಲು ಮನುಷ್ಯನನ್ನು ಪ್ರಾಪ್ತನನ್ನಾಗಿಸುವ ಸಂದೇಶ ಒಳಗೊಂಡಿದೆ
ಉಪವಾಸದ ಲಕ್ಷ್ಯವನ್ನು ಖುರ್ಆನ್. “ನೀವು ತಖ್ವವುಳ್ಳವರಾಗಲು” ಎಂದು ವಿವರಿಸಿದೆ. ಭಯಭಕ್ತಿಯುಳ್ಳವರಾಗಲು, ಸೂಕ್ಷ್ಮಜ್ಞರಾಗಲು, ಎಚ್ಚರಿಕೆಯುಳ್ಳರಾಗಲು ಎಂದೆಲ್ಲಾ ಅರ್ಥ ನೀಡಬಹುದಾದರೂ, ಖುರ್ಆನ್ ನ ಪದ ” ತಖ್ವಾವುಳ್ಳವರಾಗಲು” ಎಂದೇ ಆಗಿದೆ. ಕಾರಣ, ತಖ್ವಾ ಎಂಬ ಪದವು ಇದೆಲ್ಲದಕ್ಕೂ ಮೇಲ್ಮಟ್ಟದ ಆಶಯವನ್ನು ಹೊಂದಿದೆ. ಇವೆಲ್ಲವನ್ನೂ ಒಳಗೊಂಡು, ಇವಿಷ್ಟು ಮಾತ್ರವಲ್ಲ, ಅದಕ್ಕೂ ಉನ್ನತವಾದುದು ಎಂಬ ಆಶಯವನ್ನು ಖುರ್ಆನ್ “ತಖ್ವಾ” ಎಂಬ ಪದಕ್ಕೆ ನೀಡಿದೆ. ವ್ರತದಿಂದ “ತಖ್ವಾ”‘ ಸಾಧಿತವಾಗುತ್ತದೆ.
ಪ್ರಸ್ಥುತ ಸನ್ನಿವೇಶದಲ್ಲಿ ಪ್ರಪಂಚಕ್ಕೆ ಹಸಿವಿನ ನೋವು ಎದುರಾದೀತೋ ಎಂಬ ಹೆದರಿಕೆ ಮುಂದಿದೆ ಆದರೆ ಮುಸಲ್ಮಾನ ಹಸಿವನ್ನು ಅರಿತವನು ಅಲ್ಲಾಹನ ತೃಪ್ತಿ ಪಡೆದವನು “ನಮಗೆ ಉಪವಾಸಿಗನೊಬ್ಬನಿಗೆ ಉಪವಾಸ ತೊರೆಯಲು ನೆರವಾಗುವ ಸಾಮರ್ಥ್ಯ ಇಲ್ಲ” ಎಂದು ಸ್ವಹಾಬಿಗಳು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಹೇಳಿದರು.
“ಒಂದು ಒಣ ಖರ್ಜೂರ ಅಥವಾ ಅಲ್ಪ ನೀರು ನೀಡಿ ಉಪವಾಸಿಗನಿಗೆ ಉಪವಾಸ ತೊರೆಯಲು ನೆರವಾಗುವವನಿಗೂ ಈ ಪ್ರತಿಫಲ ಲಭ್ಯವಾಗುತ್ತದೆ. ಉಪವಾಸಿಗನೊಬ್ಬನಿಗೆ ಹೊಟ್ಟೆ ತುಂಬಾ ಆಹಾರ ನೀಡಿದವನಿಗೆ ಅಲ್ಲಾಹನು ನನ್ನ ಹೌಳುಲ್ ಕೌಸರ್ನಿಂದ ಕುಡಿಸುವನು. ಅದನ್ನು ಕುಡಿದವನಿಗೆ ಸ್ವರ್ಗ ಪ್ರವೇಶಿಸುವವರೆಗೂ ದಾಹವಾಗುವುದಿಲ್ಲ..”
“ಮನುಷ್ಯನ ಎಲ್ಲಾ ಸತ್ಕರ್ಮಗಳು ದುಪ್ಪಟ್ಟಾಗುತ್ತದೆ, ಒಳಿತಿಗೆ ಹತ್ತರಿಂದ ಏಳುಪಟ್ಟು ಪ್ರತಿಫಲವಿದೆ” ಅಲ್ಲಾಹನು ಹೇಳುತ್ತಾನೆ. “ವೃತಾಚರಣೆಯನ್ನು ಹೊರತುಪಡಿಸಿ, ಅದು ನನಗಾಗಿದೆ.. ನಾನದಕ್ಕೆ ಪ್ರತಿಫಲ ನೀಡುವೆನು.. ಅವನು ತನ್ನ ಆಸೆ ಆಕಾಂಕ್ಷೆಗಳನ್ನು ಆಹಾರಗಳನ್ನು ನನಗಾಗಿ ಉಪೇಕ್ಷಿಸಿರುವನು ”
ಉಪವಾಸಿಗನಿಗೆ ಎರಡು ಸಂತೋಷವಿದೆ ಒಂದು ಉಪವಾಸ ತೊರೆಯುವಾಗ ಮತ್ತೊಂದು ಸಂತೋಷ ಅಲ್ಲಾಹನನ್ನು ಕಾಣುವಾಗ, ಉಪವಾಸಿಗನ ಬಾಯಿ ವಾಸನೆ ಅಲ್ಲಾಹನ ಬಳಿ ಕಸ್ತೂರಿ ಸುಗಂಧಕ್ಕಿಂತಲೂ ವಿಶಿಷ್ಟವಾಗಿದೆ. (ಮುಸ್ಲಿಮ್)
ಮತ್ತೊಂದು ಹದೀಸ್ ಹೀಗಿದೆ “ಸ್ವರ್ಗಕ್ಕೆ ರಯ್ಯಾನ್ ಎಂದು ಹೆಸರಿರುವ ಒಂದು ಬಾಗಿಲಿದೆ. ಅಂತ್ಯದಿನದಲ್ಲಿ ಉಪವಾಸಿಗರು ಆ ಬಾಗಿಲ ಮೂಲಕ ಪ್ರವೇಶಿಸುವವರು. ಅವರಲ್ಲದೆ ಬೇರೆ ಯಾರೂ ಆ ಬಾಗಿಲ ಮೂಲಕ ಪ್ರವೇಶಿಸಲಾರರು. ಉಪವಾಸಿಗರು ಪ್ರವೇಶಿಸಿದ ಬಳಿಕ ಅದನ್ನು ಮುಚ್ಚಲಾಗುತ್ತದೆ. ಮತ್ತೆ ಯಾರೂ ಆ ಬಾಗಿಲ ಮೂಲಕ ಪ್ರವೇಶಿಸುವುದಿಲ್ಲ..” (ಬುಖಾರಿ,ಮುಸ್ಲಿಮ್,ನಸಾಈ,ತಿರ್ಮುದಿ)
ರಯ್ಯಾನ್ ಬಾಗಿಲ ಮೂಲಕ ಸ್ವರ್ಗ ಪ್ರವೇಶಿಸಿದವನು ಅಲ್ಲಿ ದಾಹ ನೀಗಿಸಿಕೊಳ್ಳುವನು. ಮುಂದೆ ಅವನಿಗೆಂದೂ ನೀರಡಿಕೆಯಾಗದು ಎನ್ನುವ ಇತರ ಹದೀಸುಗಳು ಸಹ ಇದೆ.
” ಅಲ್ಲಾಹನ ಪ್ರೀತಿಯನ್ನು ಆಗ್ರಹಿಸಿ ಒಂದು ದಿನ ವ್ರತಾಚರಣೆ ಮಾಡಿದವನನ್ನು ಅಲ್ಲಾಹನು ನರಕದಿಂದ ದೂರವಿಡುವನು. ಒಂದು ಕಾಗೆ ಮರಿಯಾಗಿರುವುದರಿಂದ ಹಿಡಿದು ಸಾಯುವವರೆಗೆ ನಿರಂತರ ಹಾರಿದರೆ ಎಷ್ಟು ದೂರವನ್ನು ಕ್ರಮಿಸುತ್ತದೆಯೋ ಅಷ್ಟು ದೂರವಿಡುವನು..” (ಅಬೂಯಅ ಲಾ, ಬೈಹಕಿ)
ಅಬೂಉಮಾಮ (ರ) ಹೇಳುತ್ತಾರೆ.. ಒಂದು ದಿನ ನಾನು ಅಲ್ಲಾಹನ ರಸೂಲರೊಂದಿಗೆ ನನಗೊಂದು ಸತ್ಕರ್ಮವನ್ನು ಹೇಳಿಕೊಡುವಂತೆ ಕೇಳಿದೆ. ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು. “ಉಪವಾಸ ಮಾಡು, ಅದರಿಂದ ಲಭ್ಯವಾಗುವ ಪ್ರತಿಫಲಕ್ಕೆ ಲೆಕ್ಕವಿಲ್ಲ. ನಾನು ಮತ್ತೆ ಕೇಳಿದೆ. ಅಲ್ಲಾಹನ ರಸೂಲರೇ, (ಬೇರೊಂದು) ಸತ್ಕರ್ಮವೊಂದನ್ನು ನನಗೆ ತಿಳಿಸಿಕೊಡಿರಿ, ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು.”ನೀನು ಉಪವಾಸ ಆಚರಿಸು. ಅದಕ್ಕೆ ಸಮಾನವಾದುದು ಇಲ್ಲ..” (ನಸಾಈ)
.ಮತ್ತೊಂದು ವರದಿಯಲ್ಲಿ ” ಅಲ್ಲಾಹನ ರಸೂಲರೇ ನನಗೆ ಸ್ವರ್ಗ ಪ್ರವೇಶಿಸಲು ಸಾಧ್ಯವಾಗುವ ಒಂದು ಸತ್ಕರ್ಮ ತಿಳಿಸಿರಿ ” ಎಂದು ಅಬೂಉಮಾಮ (ರ) ಕೇಳಿದರು ಎಂದಿದೆ. ಅದೇನಿದ್ದರೂ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಉತ್ತರದಿಂದ ಆದ ಬದಲಾವಣೆ ಹೀಗೆ, ” ಮನೆಗೆ ಅತಿಥಿಗಳ ಆಗಮನವಲ್ಲದೆ ಅಬೂಉಮಾಮರ ಮನೆಯಲ್ಲಿ ಹಗಲು ಹೊತ್ತಿನಲ್ಲಿ ಒಲೆ ಉರಿಯುತ್ತಿರಲಿಲ್ಲ” ಎಲ್ಲಾ ರೀತಿಯ ವ್ರತಾಚರಣೆಗೆ ಅನ್ವಯಿಸುವ ಈ ಪ್ರತಿಫಲ ರಮಳಾನ್ ಮಾಸದ ವ್ರತಾಚರಣೆಗೂ ಅನ್ವಯಿಸುತ್ತದೆ. ಆದರೆ, ರಮಳಾನಿನ ವ್ರತಾಚರಣೆಗೆ ಅದಕ್ಕೂ ಮಿಗಿಲಾದ ಮಹತ್ವವಿದೆ. ರಮಳಾನ್ ಉಪವಾಸದ ಕುರಿತು ಪ್ರತ್ಯೇಕವಾಗಿಯೇ ಹೇಳಲಾಗಿದೆ. “ವಿಶ್ವಾಸದಿಂದ ಹಾಗೂ ಪ್ರತಿಫಲದ ಅಪೇಕ್ಷೆಯೊಂದಿಗೆ ರಮಳಾನಿನಲ್ಲಿ ಒಬ್ಬ ವ್ರತಾಚರಿಸಿದರೆ ಅವನ ಈ ಹಿಂದಿನ ಪಾಪಗಳೆಲ್ಲವೂ ಮನ್ನಿಸಲ್ಪಡುವುದು..” (ಬುಖಾರಿ,ಮುಸ್ಲಿಮ್)
ಅಬ್ದುರಹ್ಮಾನಿಬ್ಬು ಔಫ್ (ರ) ಹೇಳುತ್ತಾರೆ. ಇತರ ತಿಂಗಳುಗಳಿಗಿಂತಲೂ ರಮಳಾನಿಗೆ ಹೆಚ್ಚು ಮಹತ್ವ ಕಲ್ಪಿಸಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು. ವಿಶ್ವಾಸದೊಂದಿಗೆ ಹಾಗೂ ಪ್ರತಿಫಲದ ಅಪೇಕ್ಷೆಯೊಂದಿಗೆ ರಮಳಾನ್ ತಿಂಗಳಲ್ಲಿ ಉಪವಾಸ ಆಚರಿಸಿ, ನಮಾಝ್ ಮಾಡಿದರೆ ಅವನು ಪಾಪಮುಕ್ತನಾಗುವನು. ಅವನು ತಾಯಿಯ ಹೊಟ್ಟೆಯಿಂದ ಹೊರಬಂದ ದಿನದಂತೆ (ಅವನು ಪಾಪರಹಿತನಾಗುವನು)
ಉಪವಾಸವು ಮುಂದಿನ ದಿನಗಳಿಗೆ ಬೇಕಾದ ತರಬೇತಿಯಾಗಿದೆ. ಸತ್ಕರ್ಮಗಳನ್ನು ಹೆಚ್ಚಿಸುವುದು, ಒಳ್ಳೆಯ ಗುಣ ನಡತೆಗಳನ್ನು ಅಳವಡಿಸಿಕೊಳ್ಳುವುದು ಇವುಗಳೆಲ್ಲವೂ ರಮಳಾನ್ ಮಾಸದಲ್ಲಿ ನಮಗೆ ಅಭ್ಯಾಸವಾದರೆ, ಮುಂದಿನ ದಿನಗಳಲ್ಲಿ ನಮ್ಮ ಜೀವನದ ರೂಢಿಯಾಗುತ್ತದೆ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.