(www.vknews.com) : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಗೋಡೌನಿನಲ್ಲಿ ಮಕ್ಕಳಿಗೆ ಸರಕಾರದಿಂದ ಉಚಿತವಾಗಿ ವಿತರಿಸಲು ದಾಸ್ತಾನಿರಿಸಿದ್ದ ಸಕ್ಕರೆ ಪ್ಯಾಕೇಟಿನ ಮೇಲೆ ಬಿಜೆಪಿಯ ಚಿಹ್ನೆ ಹಾಗೂ ಬಿಜೆಪಿ ನಾಯಕರ ಹೆಸರಿರುವ ಲೇಬಲುಗಳನ್ನು ಅಂಟಿಸಿ ಸಾರ್ವಜನಿಕರಿಗೆ ಕಿಟ್ ತಯಾರಿಸಿ ಕೊಡುತ್ತಿದ್ದುದನ್ನು ಪತ್ತೆಹಚ್ಚಿದ್ದು ಇದೊಂದು ಬಿಜೆಪಿ ಪಕ್ಷದ ಹಾಗೂ ಕರ್ಣಾಟಕ ಸರಕಾರದ ಹೇಯ ಕೃತ್ಯವಾಗಿದ್ದು ಕೂಡಲೇ ತಪ್ಪಿತಸ್ತರ ಮೇಲೆ ಕಾನೂನು ಕ್ರಮವನ್ನು ಜರುಗಿಸಿ ಜೈಲಿಗಟ್ಟಬೇಕಿದೆ.
ದೇಶದಲ್ಲಿ ಲಾಕ್ ಡೌನ್ ಜಾರಿಯಾದಂದಿನಿಂದ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರುಗಳು ದೇಶಾದ್ಯಂತ ಅನ್ನಾಹಾರವಿಲ್ಲದೇ ಪರದಾಡುತ್ತಿದ್ದ ಜನತೆಗೆ ತಮ್ಮ ಸ್ವಂತ ಕೈಯ್ಯಿಂದ ಆಹಾರ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುವಂತಹಾ ಮಹತ್ಕಾರ್ಯವನ್ನು ನಿರಂತರ ಮಾಡುತ್ತಾ ಬಂದಿದ್ದು ಇದನ್ನು ನೋಡಿತ್ತಿದ್ದ ಬಿಜೆಪಿ ಮುಖಂಡರು ಮುಜುಗರಕ್ಕೀಡಾಗಿ ಇಂತಹಾ ಕಳ್ಳತನಕ್ಕೆ ಇಳಿದು ಸಿಕ್ಕಿಹಾಕಿಕೊಂಡಿರುವುದು ವಿಪರ್ಯಾಸ.
ಬಡ ಜನತೆಗೆ ಆಹಾರ ಸಾಮಗ್ರಿಗಳ ಕಿಟ್ ಕೊಡುವ ಉದಾರ ಮನಸ್ಸಿದ್ದಿದ್ದರೆ ಇಂತಹಾ ಕಳ್ಳತನಕ್ಕೆ ಕೈ ಹಾಕುವ ಬದಲು ಬಿಕ್ಷೆ ಎತ್ತುವ ಕೆಲಸ ಮಾಡಬಹುದಿತ್ತು. ಇಂತಹಾ ಹೇಯ ಕೃತ್ಯದಲ್ಲಿ ತೊಡಗಿಕೊಂಡ ಬಿಜೆಪಿ ನಾಯಕರು ಹಾಗೂ ಅಧಿಕಾರಿಗಳನ್ನು ತಕ್ಷಣ ಬಂಧಿಸಿ ಕಾನೂನಿನ ಕುಣಿಕೆಗೆ ಒಪ್ಪಿಸಬೇಕಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.