(www.vknews.com) : ನಮ್ಮ ಹವ್ಯಾಸ, ಆದ್ಯತೆಗಳನ್ನು ಬದಲಿಸಿಕೊಳ್ಳುವುದು ನಮ್ಮ ಕೈಯಲ್ಲೆ ಇದೆ. ಆ ಮೂಲಕ ಭವಿಷ್ಯವನ್ನು ನಮಗೆಬೇಕಾದಂತೆ ಬದಲಿಸಿಕೊಳ್ಳಬಹುದು. ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸುರತ್ಕಲ್ ನಿವಾಸಿಯಾಗಿರುವ ಪುಷ್ಪರಾಜ್ ಹಾಗೂ ಲಲಿತ ದಂಪತಿಗಳ ಪ್ರೀತಿಯ ಮಗಳಾದ ಪೂಜಾಶ್ರೀ ತನ್ನ ಮನೆಯ ಗೋಡೆಗಳ ಮೇಲೆ ಚಿತ್ರಬಿಡಿಸಿ ಮನೆಯ ಸೌಂದರ್ಯ ಹೆಚ್ಚಿಸಿದ್ದಾರೆ.
ಈಕೆ ಸುರತ್ಕಲ್ ಹೋಲಿ ಫ್ಯಾಮಿಲಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಚಿತ್ರಕಲೆ ಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಗಮನಾರ್ಹ ಸಾಧನೆಯನ್ನು ಮಾಡುವುದರ ಮೂಲಕ 2020 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕನ್ನಡ ಕವಿವಾಣಿ ಪತ್ರಿಕೆ ಬಳಗ ನಡೆಸಿದ್ದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ಯಲ್ಲಿ ದ್ವಿತೀಯ ಸ್ಥಾನ ಪಡೆದು ಚಿತ್ರಕಲಾ ರತ್ನ ಪ್ರಶಸ್ತಿ ಯನ್ನು ಪಡೆದಿರುತ್ತಾರೆ.
ಜೊತೆಗೆ ನೃತ್ಯ, ಸಂಗೀತ, ಯೋಗ ಇತ್ಯಾದಿ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಪೂಜಾಶ್ರೀ ಸಾಧನೆ ಆಕೆಯ ಜೀವನಕ್ಕೆ ದಾರಿದೀಪವಾಗಲಿ. ದ.ಕ ಜಿಲ್ಲೆಗೆ ಮತ್ತಷ್ಟು ಹೆಸರು ತಂದು ಕೊಡಲಿ ಎಂಬುದು ವಿಶ್ವ ಕನ್ನಡಿಗ ನ್ಯೂಸ್ ತಂಡದ ಆಶಯ…
🖊️ ಸುದೇಶ್ ಜೈನ್ ಮಕ್ಕಿಮನೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.