ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಇಂದು ಮುಖ್ಯಮಂತ್ರಿಗಳ ಸಭೆಯ ನಂತರ ದ.ಕ . ಜಿಲ್ಲಾ ಉಸ್ತುವಾರಿ ಸಚಿವರು ಆದ ಮಾನ್ಯ ಶ್ರೀ ಶ್ರೀನಿವಾಸ್ ಪೂಜಾರಿ ಅವರು,ಜೂನ್ 1 ರಿಂದ ದೇವಸ್ತಾನಗಳನ್ನು ಆರಾಧನಾ ಚಟುವಟಿಕೆಗಳಿಗೆ ತೆರೆದುಕೊಳ್ಳಲು ಅನುಮತಿ ಸಲಾಗಿದೆ ಎಂದು ಮಾದ್ಯಮದ ಮೂಲಕ ಹೇಳಿಕೆ ನೀಡಿದ್ದು,ಇತರ ಸಮುದಾಯದ ಆರಾಧನಾಲಯಗಳ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂದು ತಿಳಿಸಲಾಗಿದೆ. ಸರಕಾರದ ಈ ನಡೆ ತೀವ್ರ ಖೇದಕರ. ಜನರ ಆರಾಧನಾ ಹಕ್ಕನ್ನು ಸರಕಾರ ಯಾವ ರೀತಿಯಲ್ಲೂ ತದೆಯುವಂತಿಲ್ಲ, ಸರಕಾರವು ದೇವಸ್ತಾನ ಮಾತ್ರ ತೆರೆಯಲು ಅನುಮತಿಸು ದ್ದು,ಮಸೀದಿ, ಚರ್ಚು, ಗುರುದ್ವಾರಗಳನ್ನು ಆರಾಧನಾ ಚಟುವಟಿಕೆಗಳಿಗೆ ಅನುಮತಿಸದೆ ಇರುವುದು,ಸರಕಾರ ಮತೀಯತೆಯನ್ನು ಪ್ರೋತ್ಸಾಹಿಸುವ ಬಗೆ ಸಂಶಯ ವ್ಯಕ್ತ ಪಡಿಸಬೇಕಾಗುತ್ತದೆ.
ಸರ್ಕಾರವು ಸರ್ವಜಾತಿ, ಮತ ಸಮುದಾಯದ ಆರಾಧನಾ ಲಯಗಳನ್ನು ಏಕಕಾಲದಲ್ಲಿ ತೆರೆಯಲು ಶೀಘ್ರ ಅನುಮತಿ ಸಬೇಕು,ಅದರಲ್ಲೂ ಮುಸ್ಲಿಮ್ ಸಮುದಾಯದ ಮಸೀದಿಗಳನ್ನು ತೆರೆಯಲು ಅನುಮತಿ ಸಬೇಕಾಗಿರುವುದು ಸರಕಾರದ ಪ್ರಾಶಸ್ತ್ಯ ವಾಗಿರಲಿ,ಯಾಕೆಂದರೆ ಮುಸ್ಲಿಮ್ ಸಮುದಾಯ ಸರ್ಕಾರದ ಸೋಂಕು ನಿಯಂತ್ರಣದ ಭಾಗವಾಗಿ ಸರ್ವ ರೀತಿಯಲ್ಲಿ ಸರ್ಕಾರಕ್ಕೆ ಸಹಕರಿಸಿದೆ.
ಈ ಮನವಿಯನ್ನು ಸರಕಾರ ಉತ್ತಮ ರೀತಿಯಲ್ಲಿ ಪರಿಗಣಿಸುವುದಾಗಿ ನಂಬುತ್ತೇವೆ ಎಂದು ದಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷರಾದ ಕೆ.ಅಶ್ರಫ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.