ದುಬೈ(www.vknews.in): ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಅಹರ್ನಿಶಿ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಭಾರತದ ಜಸ್ಪ್ರೀತ್ ಬುಮ್ರಾ ಹೊಡೆದ ಚೆಂಡು ಬೌಲರ್ ಕ್ಯಾಮರಾನ್ ಗ್ರೀನ್ ತಲೆಗೆ ಬಡಿದಾಗ ತನ್ನ ಬ್ಯಾಟನ್ನು ಎಸೆದು ಬೌಲರ್ ಕಡೆಗೆ ಧಾವಿಸಿ ಉಪಚರಿಸಿದ ಟೀಂ ಇಂಡಿಯಾ ಬೌಲರ್ ಮೊಹಮ್ಮದ್ ಸಿರಾಜ್ ಕ್ರೀಡಾ ಸ್ಪೂರ್ತಿಯನ್ನು ಆಸ್ಟ್ರೇಲಿಯಾದ ಮಾದ್ಯಮಗಳು ಕೊಂಡಾಡಿದೆ.
ನಾನ್-ಸ್ಟ್ರೈಕರ್ನಲ್ಲಿದ್ದ ಮೊಹಮದ್ ಸಿರಾಜ್ ರನ್ ಗಾಗಿ ಓಡದೇ ಬೌಲರ್ ಕ್ಯಾಮರಾನ್ ಗ್ರೀನ್ ರನ್ನು ವಿಚಾರಿಸಿದ ರೀತಿಗೆ ಆಸ್ಟ್ರೇಲಿಯಾದ ಜನತೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆಸ್ಟ್ರೇಲಿಯಾದ ‘9ನ್ಯೂಸ್ ಆಸ್ಟ್ರೇಲಿಯಾ’, ‘ಎಬಿಸಿ ಡಾಟ್ ನೆಟ್’, ‘ಕ್ರಿಕೆಟ್ ಡಾಟ್ ಕಾಮ್’ ಮುಂತಾದ ಮಾಧ್ಯಮಗಳು ಸಿರಾಜ್ ಕ್ರೀಡಾಸ್ಫೂರ್ತಿಯನ್ನು ಕೊಂಡಾಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.