(www.vknews.com) : ಕಳೆದ ವಾರ ಮಧ್ಯಾಹ್ನ ಕಾನತ್ತಡ್ಕ ಮಸೀದಿ ಸಮೀಪದ ಬಾಡಿಗೆ ಮನೆಯಲ್ಲಿ ಒಂಟಿ ಮಹಿಳೆಯನ್ನು ಕಟ್ಟಿ ಹಾಕಿ, ಹಲ್ಲೆಗೈದು ದರೋಡೆ ನಡೆಸಿದ ಕೃತ್ಯವನ್ನು ಖಂಡಿಸಿ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿ, SJM ವಿಟ್ಲ ರೇಂಜ್ ಹಾಗೂ ರಾಜ್ಯ ಅಮ್ಜದೀಸ್ ಅಸೋಸಿಯೇಶನ್ ವತಿಯಿಂದ ವಿಟ್ಲ ಆರಕ್ಷಕ ಠಾಣೆಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಮದ್ರಸಾ ಅಧ್ಯಾಪಕರ ಒಕ್ಕೂಟ(SJM) ವಿಟ್ಲ ರೇಂಜ್ ನ ಅಧ್ಯಕ್ಷರಾದ ಶರೀಫ್ ಮದನಿ ಪೆರುವಾಯಿ ಕಾರ್ಯದರ್ಶಿ ರಝಾಕ್ ಮುಸ್ಲಿಯಾರ್ ಕೊಡಂಗೆ ಹಾಗೂ ಅಮ್ಜದೀಸ್ ಪ್ರಧಾನ ಕಾರ್ಯದರ್ಶಿ ಉಮರುಲ್ ಫಾರೂಖ್ ರಝಾ ಅಮ್ಜದಿ ಕುಂಡಡ್ಕ , ಉಮರ್ ಅಮ್ಜದಿ ಕುಕ್ಕಿಲ, MKM ಕಾಮಿಲ್ ಸಖಾಫಿ ಕೊಡಂಗಾಯಿ, ಅಬ್ಬಾಸ್ ಮದನಿ ವಿಟ್ಲ, ಹಾರಿಸ್ ಮದನಿ ಶಾಂತಿನಗರ, CH ಹನೀಫ್ ಸಖಾಫಿ ಕಂಬಳಬೆಟ್ಟು, ಸಾದಿಕ್ ಸಖಾಫಿ ಒಕ್ಕೆತ್ತೂರು, ಇಬ್ರಾಹಿಂ ಹಝ್ರತ್ ಮಂಗಲಪದವು,ಉಮರ್ ಮುಸ್ಲಿಯಾರ್ ಮದಕ, ಅಲಿ ಹೈದರ್ ಸಅದಿ ಕುಕ್ಕಿಲ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.