ಎಲಿಮಲೆ(ವಿಶ್ವಕನ್ನಡಿಗ ನ್ಯೂಸ್): SKSSF ಎಲಿಮಲೆ ಶಾಖಾ ವತಿಯಿಂದ ಮಜ್ಲಿಸುನ್ನೂರ್ ವಾರ್ಷಿಕ ಹಾಗೂ ದಫ್ ಪ್ರದರ್ಶನ ಇದೇ ಬರುವ ತಾರೀಕು 31-01-2021ನೇ ಆದಿತ್ಯವಾರ ಮಗ್ರಿಬ್ ನಮಾಝಿನ ನಂತರ SKSSF ಎಲಿಮಲೆ ಶಾಖಾ ವಠಾರದಲ್ಲಿ ನಡೆಯಲಿದೆ.
ಶಾಖಾಧ್ಯಕ್ಷಕಾದ ಅಬೂಬಕರ್ ಸಿದ್ದೀಕ್ ಜೀರ್ಮುಕ್ಕಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಸ್ಸಯ್ಯದ್ ಜಲಾಲುದ್ದೀನ್ ತಂಗಳ್ ಅಲ್-ಬುಖಾರಿ ಕುನ್ನಂಗೈ ಕೇರಳ ಇವರು ದುಃವಾಶೀರ್ವಚನೆ ಮತ್ತು ಮಜ್ಲಿಸುನ್ನೂರ್ ಗೆ ನೇತೃತ್ವ ನೀಡಲಿದ್ದಾರೆ. IK ಖಲಂದರ್ ಎಲಮಲೆಯವರು ಸ್ವಾಗತ ಮಾಡಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸೈಯ್ಯದ್ ಇಸ್ಮಾಯಿಲ್ ತಂಗಳ್ ಉಪ್ಪಿನಂಗಡಿ(ಚೆಯರ್ಮೇನ್ skssf ವಿಖಾಯ ದ.ಕ) ನೆರವೇರಿಸಲಿದ್ದಾರೆ. ಜನಾಬ್ ಪಿ.ಎ ಮರ್ದಾಳ-ಸಂಘಟನಾ ಕಾರ್ಯದರ್ಶಿ ದ.ಕ ಜಿಲ್ಲೆ, ಇವರುಗಳು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಯ್ಯದ್ ಅಫ್ವಾನ್ ಅಲಿ ತಂಗಳ್ ಕರಾವಳಿ – ಚೆಯರ್ಮೇನ್ skssf ಟ್ರೆಂಡ್, ಜಮಾಲುದ್ದೀನ್ ಬೆಳ್ಳಾರೆ, ಎಸ್.ಎ ಹಮೀದ್ ಸುಳ್ಯ ಹಾಗೂ ಇನ್ನಿತರ ಗಣ್ಯ ವೆಕ್ತಿಗಳು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ವರದಿ: ಫೈಝಲ್ ಜೀರ್ಮುಕ್ಕಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.