ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಪ್ರಮುಖ ಪ್ರದೇಶಗಳಿಂದ ಬೀದಿ ಬದಿ ವ್ಯಾಪಾರ ಮಾಡುತ್ತಿರುವ ಬಡಪಾಯಿಗಳನ್ನು ಎತ್ತಂಗಡಿ ಮಾಡುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಿದ್ಧತೆ ನಡೆಸುತ್ತಿರುವ ಸರಕಾರದ ಕ್ರಮಕ್ಕೆ ಯಾರೂ ಅಡೆತಡೆ ಅಥವಾ ಶಿಫಾರಸ್ಸು ಮಾಡಲು ಬರಬೇಡಿಯೆಂಬ ಸಾರ್ವಜನಿಕ ಫರ್ಮಾನನ್ನು ಈಗಾಗಲೇ ಮನಪಾದ ವತಿಯಿಂದ ಹೊರಡಿಸಲಾಗಿದೆ. ಆದರೆ ಇಲ್ಲಿನ (ಮಂಗಳೂರು ನಗರ ಪ್ರದೇಶಗಳಲ್ಲಿನ) ರಸ್ತೆಗಳು ಇಷ್ಟೊಂದು ಬೀದಿ ಬದಿಯಲ್ಲಿನ ವ್ಯಾಪಾರಸ್ಥರುಗಳಿಂದ ತುಂಬಿಹೋಗುವಲ್ಲಿ ಇದೇ ಮನಪಾದವರು ನೀಡಲಾಗಿರುವ ಪರವಾನಿಗೆಗಳೇ ಕಾರಣ ಎಂಬ ವಾಸ್ತವಿಕತೆಯನ್ನು ಅವರು ಅರ್ಥಯಿಸಬೇಕು ಎಂಬುವುದಾಗಿ ಅವರ ಇಷ್ಟೊಂದು ದ್ವ೦ದ್ವ ನಿಲುವನ್ನು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ದ.ಕ. ಜಿಲ್ಲಾ ಕಾರ್ಯದರ್ಶಿಯವರಾದ ಎಮ್. ಎಸ್. ಮುತ್ತಲಿಬ್ ರವರು ಖಂಡಿಸಿದರು.
ಬೀದಿ ಬದಿ ವ್ಯಾಪಾರಿಗಳು ಮಾತ್ರವಲ್ಲದೆ ತಳ್ಳುಗಾಡಿಯವರು ಕೂಡಾ ಮಂಗಳೂರು ನಗರ ಪಾಲಿಕೆಯ ವತಿಯಿಂದ ಯಾವುದಾದರೊಂದು ರೀತಿಯ ಪರವಾನಿಗೆಯನ್ನು ಪಡೆದವರೇ ಆಗಿರುತ್ತಾರೆ. ತಳ್ಳುಗಾಡಿಗಳಲ್ಲಿ ಕೂಡಾ ಮನಪಾದವರಿಂದ ಪಡೆದ ಕ್ರಮಸಂಖ್ಯೆಯನ್ನು ಹೊಂದಿದ ಸ್ಟಿಕ್ಕರ್ ಅಳವಡಿಸಿರುವುದನ್ನು ನಾವು ಕಾಣಬಹುದಲ್ಲದೆ ಬೀದಿಯ ಬದಿಯಲ್ಲಿ ಮಾರಾಟ ಮಾಡಲು ಕೆಲವರಿಗೆ ಬ್ಯಾಡ್ಜ್ ಗಳನ್ನೂ ವಿತರಿಸಲಾಗಿದೆಯೆಂದು ಹೇಳಲಾಗುತ್ತದೆ ಇನ್ನೂ ಕೆಲವು ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಜನಗಳು ತಮ್ಮ ಮಳಿಗೆಗಳಿಗೆ ಶೀಟ್ ಮೇಲ್ಚಾವಣಿಯನ್ನು ಹೊಂದುವ ಹಾಗೆ ಮನಪಾ ದವರಿಂದಲೇ ಅನುಮತಿ ಪಡೆದು ನಿರ್ಮಿಸಿದವರಾಗಿದ್ದರೆ, ಮೆಸ್ಕಾಂನವರು ಅವುಗಳಿಗೆ ವಿದ್ಯುತ್ ಸಂಪರ್ಕವನ್ನೂ ಒದಗಿಸಿದ್ದಾರೆ. ಇವೆಲ್ಲವನ್ನೂ ಒದಗಿಸಿದವರು ಸರಕಾರಿ ಅಧಿಕಾರಿಗಳ ಅನುಮತಿಯ ಮೇರೆಗೆ ಆಗಿದ್ದರೆ, ಅವರನ್ನು ಭದ್ರವಾಗಿ ನೆಲೆಗೊಳಿಸುವ ಸಲುವಾಗಿ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದನ್ನು ಬಿಟ್ಟು ಇದೀಗ ಟೈಗರ್ ಪೋರ್ಸ್ ಗಳನ್ನು ತಂದು ಅವರಿಗೆ ಯಾವುದೇ ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸದೆ ಅವರನ್ನು ಏಕಪಕ್ಷೀಯವಾಗಿ ಬಲವಂತದಿಂದ ಒಕ್ಕಲೆಬ್ಬಿಸುವ ರೀತಿ ಅಮಾನುಷ ಮತ್ತು ಅಪ್ರಜಾಪ್ರಭುತ್ವವೂ ಆಗಿದೆಯೆಂದವರು ಈ ಸಂಧರ್ಭದಲ್ಲಿ ಹೇಳಿದರು.
ಅದೇ ರೀತಿಯಲ್ಲಿ ಕೆಲವು ವಾಣಿಜ್ಯ ಸಂಕೀರ್ಣ ಮತ್ತು ಹೋಟೆಲ್, ಲಾಡ್ಜ್ (ವಸತಿ ಗೃಹ) ಕಟ್ಟಡಗಳ ನೆಲ ಅಂತಸ್ತಿನಲ್ಲಿ ಅಥವಾ ಕೆಳ ಅಂತಸ್ತಿನಲ್ಲಿ (ಅಂಡರ್ ಗ್ರೌಂಡ್) ಮೀಸಲಿಟ್ಟ ವಾಹನ ನಿಲುಗಡೆ (ಕಾರ್ ಪಾರ್ಕಿಂಗ್) ಜಾಗದಲ್ಲಿಯೇ ಕೆಲವು ಸ್ಟಾಲ್ (ಮಳಿಗೆ) ಗಳನ್ನು ಹೊಂದಿದ್ದು ಅಲ್ಲೆಲ್ಲಾ ವಾಹನ ನಿಲ್ಲಿಸಲು ಅವಕಾಶವೇ ಇಲ್ಲದಂತೆ ಅದು ವಿವಿಧ ಮಳಿಗೆಗಳಿಂದ ತುಂಬಿರುವ ಉದಾಹರಣೆಗಳು ಮನಪಾ ವ್ಯಾಪ್ತಿಯಲ್ಲಿನ ಕೆಲವು ಕಟ್ಟಡಗಲ್ಲಿವೆ ಇಲ್ಲೆಲ್ಲಾ ಇಷ್ಟೊಂದು ಕಾನೂನುಬಾಹಿರ ಅಕ್ರಮ ಪ್ರಕ್ರಿಯೆಗೆ ಪಾಲಿಕೆಯ ವತಿಯಿಂದ ಅಲ್ಲಿನ ಅಧಿಕಾರಿಗಳ ಮೂಲಕವೇ ಪರವಾನಿಗೆ ಪಡೆದ ನಂತರವೇ ಇವೆಲ್ಲವೂ ಅಸ್ತಿತ್ವಕ್ಕೆ ಬಂದಿರುವುದಾಗಿದೆ. ಇವುಗಳೆಲ್ಲವೂ ಭ್ರಷ್ಟ ಅಧಿಕಾರಿಗಳ ನೆರವಿನಿಂದಲೇ ತೆರೆಯಲ್ಪಟ್ಟಿವೆಂಬುವುದಂತೂ ಸ್ಪಷ್ಟ. ಇದರಿಂದ ಕಟ್ಟಡಗಳ ಹೊರಾಂಗಣ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುವ ಅನಿವಾರ್ಯತೆಯಿಂದ ಸಾರ್ವಜನಿಕ ತೊಂದರೆ ಕೂಡಾ ಆಗುತ್ತದೆ. ಇವೆಲ್ಲಾ ಸಮಸ್ಯೆಗಳ ಅರಿವಿದ್ದರೂ ಉದ್ಯಮಿಗಳು ನೀಡುವ ಲಂಚದಿಂದಲೇ ಯಾವ ಪರವಾನಿಗೆಗಳು ದಕ್ಕುವುದಾದರೆ ಮತ್ತೆ ಅದೇ ಪರವಾನಿಗೆ ಹೊಂದಿದವರ ಮೇಲೆ ಬಲಪ್ರಯೋಗದಿಂದ ತೆರವುಗೊಳಿಸುವುದೇ ಅರ್ಥಹೀನವಾಗಿದೆಯೆಂದು ಹೇಳಿದ ಅವರು ಮನಪಾದವರಿಂದ ಅನ್ಯಾಯದಿಂದ ಪರವಾನಿಗೆ ನೀಡಲಾಗಿದ್ದರೆ ಯಾರ ಅವಧಿಯಲ್ಲಿ ಯಾವ ಅಧಿಕಾರಿಗಳ ಮೂಲಕ ಅಷ್ಟೊಂದು ತಪ್ಪುಗಳು ಸಂಭವಿಸಿವೆಯೆಂಬುವುದನ್ನು ಪರಿಶೀಲಿಸಿ ಅವರ ವಿರುದ್ಧ ಕಾನೂನುಕ್ರಮ ಜರಗಿಸುವಂತಾಗಲಿ ತಪ್ಪು ಮಾಡಿದ ಅಧಿಕಾರಿಗಳು ನಿವೃತ್ತರಾಗಿದ್ದಲ್ಲಿ ಅವರ ಪಿಂಚಣಿ ಅಥವಾ ಅವರಿಗೆ ನೀಡುವ ಇನ್ನಿತರ ಯಾವುದೇ ರೀತಿಯ ಸೌಲಭ್ಯ ತಡೆಹಿಡಿಯಲಿ ಮತ್ತು ಆದರ ಮೂಲಕ ತೆರವುಗೊಳಿಸಲು ಆದೇಶ ನೀಡಿದ ಜನಗಳಿಗೆ ಪರಿಹಾರವನ್ನಾದರೂ ನೀಡುವಂತಾಗಬೇಕು ಎಂಬುವುದಾಗಿ ಅವರು ಈ ಸಂಧರ್ಭದಲ್ಲಿ ಹೇಳಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.