(www.vknews.com) : ಕೊರೋಣ ರಾಜ್ಯದಲ್ಲಿ ಪ್ರಕಾಶ ವೇಗದಲ್ಲಿ ಮುನ್ನುಗುತ್ತಿದೆ. ಸರಕಾರವು ನಿಯಂತ್ರಣಕ್ಕೆ ಬೇಕಾಗಿ ಹಲವಾರು ಕ್ರಮಗಳನ್ನು ಜಾರಿಗೊಳಿಸಿದೆಯಾದರೂ ಯಾವ ರೀತಿ ಕಾನೂನನ್ನು ಪಾಲಿಸಬೇಕೆಂದು ಸಾರ್ವಜನಿಕರಿಗೆ ಇನ್ನೂ ತಿಳಿದಿಲ್ಲ. ಪಂಚಾಯತ್ ಅಧಿಕಾರಿಗಳು ಒಂದು ರೀತಿಯಲ್ಲಿ ಹೇಳುವುದಾದರೆ ಆರೋಗ್ಯ ಅಧಿಕಾರಿಗಳ ಆಜ್ಞೆ ವಿಭಿನ್ನವಾಗಿರುತ್ತದೆ. ಜಿಲ್ಲಾಧಿಕಾರಿಯ ಸೂಚನೆಗಳನ್ನಲ್ಲ ಪೊಲೀಸರು ಅನುಸರಿಸುತ್ತಿರುವುದು. ಸರ್ಕಾರದ ಕಾನೂನು ಮತ್ತೊಂದು. ಕಡುಬಡವರು ಹೊಟ್ಟೆಗೆ ಹಿಟ್ಟಿಲ್ಲದೆ ಅಲೆದಾಡುತ್ತಿದ್ದಾರೆ. ದಿನಗೂಲಿ ಕೆಲಸವನ್ನು ಮಾಡುವವರು ದೈನಂದಿನ ಜೀವನ ಸಾಗಿಸಲು ದಿಕ್ಕಿಲ್ಲದೆ ಕಷ್ಟಪಡುತ್ತಿದ್ದಾರೆ. ಇವರ ಹಸಿವು ನೀಗಿಸುವ ಹೊಣೆ ಕೇವಲ ರಾಜ್ಯ ಸರಕಾರದ ಜವಾಬ್ದಾರಿ ಮಾತ್ರವಲ್ಲ.ಸರಕಾರದ ಆಹಾರಧಾನ್ಯದ ವಿತರಣೆಗೆ ಕಾದು ನಿಲ್ಲದೆ ಸ್ಥಳೀಯ ಪಂಚಾಯತ್, ತಾಲೂಕು ಜಿಲ್ಲಾ ಅಧಿಕಾರಿಗಳು ಕಷ್ಟದಲ್ಲಿರುವ ಪ್ರಜೆಗಳಿಗೆ ಹಸಿವು ನೀಗಿಸುವ ವ್ಯವಸ್ಥೆಯನ್ನಾದರೂ ಮಾಡಬೇಕು.
ಅದೇರೀತಿ ಕೋರೋಣ ಇಲ್ಲದ ಪ್ರದೇಶದಲ್ಲಿ ತೀವ್ರವಾದ ನಿಯಮಗಳನ್ನು ಜಾರಿಗೆ ತಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೆರಳೆಣಿಕೆಯಷ್ಟೂ ಕೋವಿಡ್ ಪ್ರಕರಣ ಇಲ್ಲದ ಪ್ರದೇಶಗಳಲ್ಲಿನ ಮಸೀದಿಗಳಲ್ಲಿ ರಂಜಾನ್ ತಿಂಗಳಾದ್ದರಿಂದ ಪ್ರಾರ್ಥನೆಗಳನ್ನು ಅತ್ಯಂತ ಎಚ್ಚರಿಕೆಯಿಂದ ನಡೆಸಲಾಗುತ್ತಿದೆಯಾದರೂ ಜುಮಾ ನಮಾಜಿಗೆ ನಿರ್ಬಂಧವನ್ನು ಹೇರಲಾಗುತ್ತದೆ. ಪವಿತ್ರವಾದ ತಾರವೀ ಹನ್ನ ಅಡ್ಡಿಪಡಿಸಲಾಗಿದೆ. ಕೋವಿಡ್ ನೆಪದಲ್ಲಿ ಅಧಿಕಾರಶಾಹಿ ದುಷ್ಕೃತ್ಯ ನಡೆಯುತ್ತಿದೆ. ಆದರೆ ಪರೀಕ್ಷೆಗಳನ್ನು ನಡೆಸುವ ವಿಟಿಯು ಒಳಗೊಂಡ ಯೂನಿವರ್ಸಿಟಿಗಳ ಬೇಜವಾಬ್ದಾರಿತನಕ್ಕೆ ಪೂರ್ಣಪ್ರಮಾಣದ ಸ್ವಾತಂತ್ರ್ಯವನ್ನು ನೀಡಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆನ್ನಮಣೆ ಆಡುತ್ತಿದ್ದಾರೆ. ಬೆಂಗಳೂರಿನಂತಹ ಮಹಾನಗರದಲ್ಲಿ ಕೋರೋಣ ಆರ್ಭಟಿಸುವಂತಹ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಮಾಡಿ ಕೊರೋನಾದ ಮುಂದೆ ಮುಂದಿನ ಪೀಳಿಗೆಯನ್ನು ಬಲಿಯಾಡು ಮಾಡುವಂತಹ ರೀತಿಯಲ್ಲಿದೆ. ಕೊರೋನಾದ ಎರಡನೆಯ ಅಲೆಗೆ ಜ್ವಲಂತ ಕಾರಣ ಚುನಾವಣೆಯನ್ನು, ರಾಲಿಗಳನ್ನು ನಡೆಸಿದ ರಾಜಕಾರಣಿಗಳು ಅದಕ್ಕೆ ಪೂರ್ಣವಾಗಿ ಅನುಮತಿ ನೀಡಿದ ಸರ್ಕಾರದ ಬೇಜವಾಬ್ದಾರಿತನವಾದರೆ ಇದಕ್ಕೆ ಅವಕಾಶವನ್ನು ಕಲ್ಪಿಸಿದ ನಾವೆಲ್ಲರೂ ಪರೋಕ್ಷವಾಗಿ ಕಾರಣಕರ್ತರಾಗಿರುತ್ತಾರೆ.
ಇನ್ನಾದರೂ ಸರ್ಕಾರದ ಆದೇಶವನ್ನು ಪಾಲಿಸಿಕೊಂಡು ಚಾಲ್ತಿಯಲ್ಲಿರುವ ಹಲವಾರು ಮೌಢ್ಯತೆಯ ಚಿಕಿತ್ಸೆಗೆ ಕಿವಿಗೊಡದೆ ವೈಜ್ಞಾನಿಕವಾದ ಚಿಕಿತ್ಸೆಯನ್ನು ಪಡೆದು ಸರ್ಕಾರ ಕಲ್ಪಿಸುವುದಾದರೆ ಲಸಿಕೆಯನ್ನು ಸರಿಯಾಗಿ ಹಾಕಿಸಿ ಎಚ್ಚರಿಕೆಯಿಂದ ಭಯ ರಹಿತವಾಗಿ ಜಾಗರೂಕತೆಯಿಂದ ಜೀವನ ಸಾಗಿಸಿದರೆ ಈ ಮಹಾಮಾರಿಗೆ ಕ್ಷಣಕಾಲ ತಡೆಗೋಡೆಯನ್ನು ಕಟ್ಟಬಹುದು. ಇಲ್ಲವಾದರೆ ಸರ್ವನಾಶ ಕಟ್ಟಿಟ್ಟಬುತ್ತಿ. ನೆನಪಿಡಿ ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ದಿ.
ಕೊರೋಣ ರಾಜ್ಯದಲ್ಲಿ ಪ್ರಕಾಶ ವೇಗದಲ್ಲಿ ಮುನ್ನುಗುತ್ತಿದೆ. ಸರಕಾರವು ನಿಯಂತ್ರಣಕ್ಕೆ ಬೇಕಾಗಿ ಹಲವಾರು ಕ್ರಮಗಳನ್ನು ಜಾರಿಗೊಳಿಸಿದೆಯಾದರೂ ಯಾವ ರೀತಿ ಕಾನೂನನ್ನು ಪಾಲಿಸಬೇಕೆಂದು ಸಾರ್ವಜನಿಕರಿಗೆ ಇನ್ನೂ ತಿಳಿದಿಲ್ಲ. ಪಂಚಾಯತ್ ಅಧಿಕಾರಿಗಳು ಒಂದು ರೀತಿಯಲ್ಲಿ ಹೇಳುವುದಾದರೆ ಆರೋಗ್ಯ ಅಧಿಕಾರಿಗಳ ಆಜ್ಞೆ ವಿಭಿನ್ನವಾಗಿರುತ್ತದೆ. ಜಿಲ್ಲಾಧಿಕಾರಿಯ ಸೂಚನೆಗಳನ್ನಲ್ಲ ಪೊಲೀಸರು ಅನುಸರಿಸುತ್ತಿರುವುದು. ಸರ್ಕಾರದ ಕಾನೂನು ಮತ್ತೊಂದು. ಕಡುಬಡವರು ಹೊಟ್ಟೆಗೆ ಹಿಟ್ಟಿಲ್ಲದೆ ಅಲೆದಾಡುತ್ತಿದ್ದಾರೆ. ದಿನಗೂಲಿ ಕೆಲಸವನ್ನು ಮಾಡುವವರು ದೈನಂದಿನ ಜೀವನ ಸಾಗಿಸಲು ದಿಕ್ಕಿಲ್ಲದೆ ಕಷ್ಟಪಡುತ್ತಿದ್ದಾರೆ.
ಇವರ ಹಸಿವು ನೀಗಿಸುವ ಹೊಣೆ ಕೇವಲ ರಾಜ್ಯ ಸರಕಾರದ ಜವಾಬ್ದಾರಿ ಮಾತ್ರವಲ್ಲ.ಸರಕಾರದ ಆಹಾರಧಾನ್ಯದ ವಿತರಣೆಗೆ ಕಾದು ನಿಲ್ಲದೆ ಸ್ಥಳೀಯ ಪಂಚಾಯತ್, ತಾಲೂಕು ಜಿಲ್ಲಾ ಅಧಿಕಾರಿಗಳು ಕಷ್ಟದಲ್ಲಿರುವ ಪ್ರಜೆಗಳಿಗೆ ಹಸಿವು ನೀಗಿಸುವ ವ್ಯವಸ್ಥೆಯನ್ನಾದರೂ ಮಾಡಬೇಕು. ಅದೇರೀತಿ ಕೋರೋಣ ಇಲ್ಲದ ಪ್ರದೇಶದಲ್ಲಿ ತೀವ್ರವಾದ ನಿಯಮಗಳನ್ನು ಜಾರಿಗೆ ತಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೆರಳೆಣಿಕೆಯಷ್ಟೂ ಕೋವಿಡ್ ಪ್ರಕರಣ ಇಲ್ಲದ ಪ್ರದೇಶಗಳಲ್ಲಿನ ಮಸೀದಿಗಳಲ್ಲಿ ರಂಜಾನ್ ತಿಂಗಳಾದ್ದರಿಂದ ಪ್ರಾರ್ಥನೆಗಳನ್ನು ಅತ್ಯಂತ ಎಚ್ಚರಿಕೆಯಿಂದ ನಡೆಸಲಾಗುತ್ತಿದೆಯಾದರೂ ಜುಮಾ ನಮಾಜಿಗೆ ನಿರ್ಬಂಧವನ್ನು ಹೇರಲಾಗುತ್ತದೆ. ಪವಿತ್ರವಾದ ತಾರವೀ ಹನ್ನ ಅಡ್ಡಿಪಡಿಸಲಾಗಿದೆ. ಕೋವಿಡ್ ನೆಪದಲ್ಲಿ ಅಧಿಕಾರಶಾಹಿ ದುಷ್ಕೃತ್ಯ ನಡೆಯುತ್ತಿದೆ. ಆದರೆ ಪರೀಕ್ಷೆಗಳನ್ನು ನಡೆಸುವ ವಿಟಿಯು ಒಳಗೊಂಡ ಯೂನಿವರ್ಸಿಟಿಗಳ ಬೇಜವಾಬ್ದಾರಿತನಕ್ಕೆ ಪೂರ್ಣಪ್ರಮಾಣದ ಸ್ವಾತಂತ್ರ್ಯವನ್ನು ನೀಡಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆನ್ನಮಣೆ ಆಡುತ್ತಿದ್ದಾರೆ.
ಬೆಂಗಳೂರಿನಂತಹ ಮಹಾನಗರದಲ್ಲಿ ಕೋರೋಣ ಆರ್ಭಟಿಸುವಂತಹ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಮಾಡಿ ಕೊರೋನಾದ ಮುಂದೆ ಮುಂದಿನ ಪೀಳಿಗೆಯನ್ನು ಬಲಿಯಾಡು ಮಾಡುವಂತಹ ರೀತಿಯಲ್ಲಿದೆ. ಕೊರೋನಾದ ಎರಡನೆಯ ಅಲೆಗೆ ಜ್ವಲಂತ ಕಾರಣ ಚುನಾವಣೆಯನ್ನು, ರಾಲಿಗಳನ್ನು ನಡೆಸಿದ ರಾಜಕಾರಣಿಗಳು ಅದಕ್ಕೆ ಪೂರ್ಣವಾಗಿ ಅನುಮತಿ ನೀಡಿದ ಸರ್ಕಾರದ ಬೇಜವಾಬ್ದಾರಿತನವಾದರೆ ಇದಕ್ಕೆ ಅವಕಾಶವನ್ನು ಕಲ್ಪಿಸಿದ ನಾವೆಲ್ಲರೂ ಪರೋಕ್ಷವಾಗಿ ಕಾರಣಕರ್ತರಾಗಿರುತ್ತಾರೆ. ಇನ್ನಾದರೂ ಸರ್ಕಾರದ ಆದೇಶವನ್ನು ಪಾಲಿಸಿಕೊಂಡು ಚಾಲ್ತಿಯಲ್ಲಿರುವ ಹಲವಾರು ಮೌಢ್ಯತೆಯ ಚಿಕಿತ್ಸೆಗೆ ಕಿವಿಗೊಡದೆ ವೈಜ್ಞಾನಿಕವಾದ ಚಿಕಿತ್ಸೆಯನ್ನು ಪಡೆದು ಸರ್ಕಾರ ಕಲ್ಪಿಸುವುದಾದರೆ ಲಸಿಕೆಯನ್ನು ಸರಿಯಾಗಿ ಹಾಕಿಸಿ ಎಚ್ಚರಿಕೆಯಿಂದ ಭಯ ರಹಿತವಾಗಿ ಜಾಗರೂಕತೆಯಿಂದ ಜೀವನ ಸಾಗಿಸಿದರೆ ಈ ಮಹಾಮಾರಿಗೆ ಕ್ಷಣಕಾಲ ತಡೆಗೋಡೆಯನ್ನು ಕಟ್ಟಬಹುದು. ಇಲ್ಲವಾದರೆ ಸರ್ವನಾಶ ಕಟ್ಟಿಟ್ಟಬುತ್ತಿ. ನೆನಪಿಡಿ ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ದಿ.
– ಸಹದ್ ಟಿ ಕರ್ನೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.