(www.vknews.com) : ಸಾಮಾಜಿಕ ದುರಂತಗಳ ಸಂದರ್ಭಗಳಲ್ಲಿ ಸಂಭವಿಸುವ ಮರಣಗಳು ಆಮಂತ್ರಿತವಲ್ಲ.ಇಂತಹ ಮರಣ ಗಳಿಗೆ ಯಾವುದೇ ಹೃದಯಗಳು ಮರುಗುತ್ತದೆ.ಇಂತಹ ಮರಣಗಳಿಗೆ ಮುಸ್ಲಿಮ್ ಸಮುದಾಯದವರು ಒಂದು ವೇಳೆ ಸ್ಪಂದಿಸಿದ್ದರೆ ಅದು ಅವರಿಗೆ ಅವರ ಧರ್ಮಗುರುಗಳು,ಪ್ರವಾದಿ,ಮತ್ತು ಅವರ ಧರ್ಮಗಳು ನೀಡಿದ ಉಪದೇಶ ಗಳಾಗಿದೆ. ಕೋರೋಣ ಸಂಧಿಗ್ಧ ಪರಿಸ್ಥಿತಿಯಲ್ಲಿ ಯಾವುದೇ ಮರಣ ಸಂಭವಿಸ ಭಾರದು ಎಂದು ಮುಸ್ಲಿಮ್ ಸಮುದಾಯ ಪ್ರಾರ್ಥಿಸು ತ್ತಿದೆ. ಆದರೆ ಕೋರೋಣ ಸಾವು ಗಳಿಗೆ,ಅಥವಾ ಕೋರೋಣ ಸೋಂಕುಗಳಿಗೆ ಹೆದರಿ ಯಾವುದೇ ಮೃತ ದೇಹ ಸಂಸ್ಕಾರಕ್ಕೆ ವ್ಯವಸ್ಥೆ ಹಿನ್ನಡೆಯಾದ ಸಂದರ್ಭ ಬಂದಾಗ ಈ ಕಾರ್ಯವನ್ನು ಸಂಪೂರ್ಣ ಮುಸ್ಲಿಮ್ ಸಮುದಾಯದ ಸಂಘಟನೆಗಳು ಆದ ಪೀ.ಎಫ್. ಐ, ಎಸ್.ಡಿ.ಪೀ.ಐ,ಎಸ್ಕೆ ಎಸ್.ಎಸ್. ಎಫ, ಎಸ್.ಎಸ್ ಎಫ್,ಎಸ. ಐ. ಒ, ಜೆ ಐ.ಎಚ್,ವಿವಿಧ ಪಕ್ಷದ ಯೂತ್ ವಿಂಗ್ ಗಳು, ಹೆಲ್ಪ್ ಲೈನ್ ಸದಸ್ಯರು ಮತ್ತು ಇನ್ನಿತರ ಸಂಘಟನೆಗಳು ಗೌರವ ಪೂರಕವಾಗಿ ನೆರವೇರಿಸಿದೆ. ಈ ಸೇವೆ ಸಂಪೂರ್ಣ ದೈಹಿಕ ಮತ್ತು ದತ್ತಿ ಕೊಡುಗೆ ಹೊರತು ಇನ್ನೇನಲ್ಲ. ಯಾವುದೇ ಮೃತ ದೇಹವನ್ನು ಗೌರವ ಪೂರ್ಣವಾಗಿ ವಿಲೇವಾರಿ ಗೊಳಿಸುವುದು ಪ್ರಜೆಗಳ ಸಾಮಾಜಿಕ ಕರ್ತವ್ಯ.
ದೇಶಾದ್ಯಂತ ಇಂದು ಯಾವುದೇ ಮೃತ ದೇಹದ ಮುಂದೆ ಧರ್ಮದ ಟ್ಯಾಗ್ ಬಳಸಿಲ್ಲ. ಆದರೆ ಈ ಮೃತ ದೇಹಗಳು ದುರಂತದ ಅವಶೇಶವಾದ ಕಾರಣದಿಂದ ಸಾಮೂಹಿಕ ದಫನ ಅಥವಾ ಸಂಸ್ಕಾರ ಮುಸ್ಲಿಮರ ಕರ್ತವ್ಯ ವಾಗಿದೆ.ಮುಸ್ಲಿಮರು ತುರ್ತು ಸಂದರ್ಭಗಳಿಗೆ ಅತಿ ಶೀಘ್ರ ಸ್ಪಂದಿಸುವ ಗುಣ ಇದ್ದುದರಿಂದ ಇಂತಹ ಸಂಧಿಗ್ಧ ಪರಿಸ್ಥಿತಿಯ ಸೇವೆ ಗೈಯುತ್ತಾರೆ. ಮುಂದೆಯೂ ಮಾಡುತ್ತಾರೆ. ಶರಣ್ ಪಂಪ್ ವೆಲ್ ರವರಿಗೆ ಈ ದುರಂತದ ಅವಶೇಷ ಮೃತ ದೇಹಗಳನ್ನು ಸಂಸ್ಕರಿಸುವ ಆಸಕ್ತಿ ಇದ್ದರೆ ಖಂಡಿತ ಅದಕ್ಕೆ ಯಾರ ವಿರೋಧವೂ ಇಲ್ಲ. ತಮ್ಮ ಉದ್ದೇಶಿತ ಆಸಕ್ತಿಯನ್ನು ಈ ಗಲಾದರು ತಾವು ಪ್ರಕಟಿಸಿ ದ್ದಕ್ಕೆ ಧನ್ಯ ವಾದಗಳು. ಆದರೆ ಶರಣ್ ಪಂಪ್ವೆಲ್ ಒಂದು ನೆನಪಿಟ್ಟು ಕೊಳ್ಳಿ ಯಾವುದೇ ಮೃತ ದೇಹ ಅಧಿಕ ಸಮಯ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು.ಅಂತ್ಯ ಸಂಸ್ಕಾರ ಹೊಂದ ದಿದ್ದರೂ ಪ್ರಕೃತಿ ಅದನ್ನು ಆಪೋಶನ ತೆಗೆದುಕೊಳ್ಳುತ್ತದೆ. ಆದರೆ ಮೃತರ ಕುಟುಂಬದವರಿಗೆ ತಮ್ಮ ಅಥವಾ ತಮ್ಮವರ ಲಭ್ಯತೆ ಶೀಘ್ರ ಲಭಿಸದೆ ಇದ್ದರೆ ಅವರು ಇತರರನ್ನು ಅವಲಂಬಿಸಿ ಯೇ ಮೃತದೇಹಗಳ ವಿಲೇವಾರಿ ಅಥವಾ ಶವ ಸಂಸ್ಕಾರ ಮಾಡ ಬೇಕಾಗುತ್ತದೆ. ಮನುಷ್ಯನಿಗೆ ಜೀವನದ ಯಾವುದಾದರೂ ಒಂದು ಸಂದರ್ಭದಲ್ಲಿ ಇತರ ಧರ್ಮದ ವರನ್ನು ಅವಲಂಭಿಸ ಬೇಕಾಗಿರುವುದು ಪ್ರಕೃತಿ ನಿಯಮ. ಆದರೆ,ಶರಣ್ ಪಂಪ್ ವೆಲ್ ಅದಕ್ಕೂ ಅವಕಾಶ ನೀಡದೆ ಇರುವುದು ಖೇದಕರ. ನಿಮ್ಮ ಜಾತಿ ಪ್ರೇಮವನ್ನು ಮೆಚ್ಚಲೇ ಬೇಕು. ನೆನಪಿ ರಲಿ ಸೂತಕಕ್ಕೆ ಧರ್ಮವಿಲ್ಲ.
ಕೆ.ಅಶ್ರಫ್(ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ.ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.