ಮಂಗಳೂರು (www.vknews.com) ; ಈ ಹಿಂದೆ ಅರ್ಚಕರಿಗೆ ಪರಿಹಾರ ಘೋಷಿಸಿದಂತೆ ಎಲ್ಲಾ ಧಾರ್ಮಿಕ ಗುರುಗಳಿಗೂ ಪರಿಹಾರ ನೀಡ ಬೇಕೆಂಬ ಹಲವು ಸಂಘಟನೆಗಳ ಮನವಿಗೆ ಸ್ಪಂದಿಸಿದ ರಾಜ್ಯ ಸರಕಾರ ಈಗ ಮಸೀದಿ ಸಿಬ್ಬಂದಿಗಳಿಗೆ ಸಣ್ಣ ಮೊತ್ತದ ಪ್ಯಾಕೇಜ್ ಬಿಡುಗಡೆ ಮಾಡಿದ್ದಾಗಿ ವರದಿಯಾಗಿದೆ. ರಾಜ್ಯ ದಾರಿಮಿ ಉಲಮಾ ಒಕ್ಕೂಟ ಇದನ್ನು ಸ್ವಾಗತಿಸಿದೆ.
ಅದೇ ರೀತಿ ಕೊರೋನ ಸಂತ್ರಸ್ತರ ಸಾಲಿನಲ್ಲಿ ನಿಲ್ಲುವ ಮೊದಲ ವರ್ಗವೆಂದರೆ ಅದು ಶಿಕ್ಷಕ ವರ್ಗದವರಾಗಿದ್ದಾರೆ. ಸರಕಾರಿ ಶಿಕ್ಷಕರಿಗೆ ಯಥಾಪ್ರಕಾರ ಭತ್ತೆ ಸಿಗುತ್ತಿದ್ದರೂ ಖಾಸಗಿ ಅಧ್ಯಾಪಕರಿಗೆ ಮತ್ತು ಮುಸ್ಲಿಂ ಸಮಾಜದ ಮದ್ರಸ ಮುಹಲ್ಲಿಮರಿಗೆ ಕೊರೋನದಿಂದಾಗಿ ಬಹಳ ಸಂಕಷ್ಟ ಎದುರಾಗಿದೆ. ಬಡತನದಲ್ಲೇ ಕಾಲ ಕಳೆಯುತ್ತಿರುವ ಈ ವರ್ಗ ಈಗ ಲಾಕ್ ಡೌನ್ ನಿಮಿತ್ತ ಕೆಲಸ ಕಳೆದುಕೊಂಡು ಕಂಗಾಲಾಗಿದ್ದಾರೆ. ಆದ್ದರಿಂದ ಈಗ ಘೋಷಿಸಲಾದ ಪ್ಯಾಕೇಜ್ ನ ಪಲಾನುಭವಿಗಳಲ್ಲಿ ಇವರನ್ನೂ ಸೇರಿಸ ಬೇಕೆಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಸರಕಾರವನ್ನು ಆಗ್ರಹಿಸಿದೆ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.