ಮಂಗಳೂರಿನ ಮಹಿಳೆ ಖತೀಜಾ ಜಾಸ್ಮಿನ್ ಎಂಬವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ ಮಂಗಳೂರಿನ ಪ್ರಸೂತಿ ತಜ್ಞೆ ಸೇರಿದಂತೆ ಕೆಲವು ವೈದ್ಯರು ಹಾಗೂ ಹಲವು ಖಾಸಗಿ ಆಸ್ಪತ್ರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪತ್ರಿಕಾ ಗೋಷ್ಠಿ..
(www.vknews.com) : ಪತಿಯೊಂದಿಗೆ ವಿದೇಶದಲ್ಲಿ ನೆಲೆಸಿರುವ ಪ್ರಸ್ತುತ ಮಂಗಳೂರಿನ ಮುಳಿಹಿತ್ಲು ನಿವಾಸಿಯಾಗಿರುವ 31 ವರ್ಷ ಪ್ರಾಯದ ಖತೀಜಾ ಜಾಸ್ಮಿನ್ ಎಂಬ ಮಹಿಳೆಗೆ ದಿನಾಂಕ 21/05/2021 ರಂದು ಹೆರಿಗೆನೋವು ಕಾಣಿಸಿಕೊಂಡು ಗಂಬೀರ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ತನ್ನ ಕುಟುಂಬ ವೈದ್ಯೆ ಹಾಗೂ ಗರ್ಭಾವಸ್ಥೆಯಲ್ಲಿ ಪರೀಕ್ಷಿಸುತ್ತಿದ್ದ ಪ್ರಸೂತಿ ವೈದ್ಯೆ ಡಾಕ್ಟರ್ ಪ್ರಿಯಾ ಬಳ್ಳಾಲ್ ಹಾಗೂ ಸದ್ರಿ ವೈದ್ಯಯ ಸೂಚನೆಯ ಮೇರೆಗೆ ಮಂಗಳೂರಿನ ಕೆಲವು ವೈದ್ಯರು ಹಾಗೂ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಯು ಖತೀಜಾ ಜಾಸ್ಮಿನ್ ಎಂಬ ತುಂಬು ಗರ್ಭಿಣಿ ಮಹಿಳೆಯನ್ನು ಚಿಕಿತ್ಸೆಗಾಗಿ ದಾಖಲಿಸಿಕೊಳ್ಳಲು ನಿರಾಕರಿಸಿ ಏಳೆಂಟು ಆಸ್ಪತ್ರೆಗಳಿಗೆ ಅಲೆದಾಡುವಂತೆ ಮಾಡಿದ ಅಮಾನವೀಯ ಹಾಗೂ ಪೈಶಾಚಿಕ ಘಟನೆ ಮಂಗಳೂರಲ್ಲಿ ನಡೆದಿದ್ದು , ಆರೋಗ್ಯ ಕ್ಷೇತ್ರದಲ್ಲಿ ದೇಶದಲ್ಲೇ ಹೆಸರುವಾಸಿ ಯಾದ ಹಾಗೂ ವಿದ್ಯಾವಂತರ ಜಿಲ್ಲೆಯೆಂದು ಕರೆಸಿಕೊಳ್ಳುವ ಮಂಗಳೂರಿನ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ ಇದನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ತೀವ್ರವಾಗಿ ಖಂಡಿಸುತ್ತಿದೆ ಎಂದು ಜಿಲ್ಲಾದ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ ಪತ್ರಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಂಗಳೂರಿನ ಕೆಲವು ವೈದ್ಯರ ಹಾಗೂ ಖಾಸಗಿ ಆಸ್ಪತ್ರೆಗಳ ಅಹಂಕಾರದ ವರ್ತನೆ, ಜನಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟವಾಡುವ ಇವರ ಸರ್ವಾಧಿಕಾರಿ ದೋರಣೆ ಎಷ್ಟು ಪ್ರಬಲವಾಗಿದೆ ಎಂದರೆ ವೈದ್ಯರ ವಿರುದ್ಧ ದೂರು ನೀಡಿದ ಸಂತ್ರಸ್ತರ ಕುಟುಂಬದ ಮೇಲೆಯೇ ದೂರು ನೀಡಿ ಬಂಧಿಸಿದ್ದಾರೆ ಎಂದರೆ ಈ ಮೆಡಿಕಲ್ ಮಾಫಿಯಾ ಎಷ್ಟೊಂದು ಪ್ರಬಲವಾಗಿದೆ ಎಂಬುದು ಅರ್ಥವಾಗುತ್ತದೆ. ಮಂಗಳೂರಿನ ವೈದ್ಯರು ಹಾಗೂ ಖಾಸಗಿ ಆಸ್ಪತ್ರೆಗಳು ಏನೇ ತಪ್ಪು ಮಾಡಿದರು ಅದನ್ನು ಪ್ರಶ್ನಿಸಿದರೆ ಕೂಡಲೇ ಒಗ್ಗೂಡಿ ಪ್ರಶ್ನಿಸಿದರ ಮೇಲೆ ದೂರು ನೀಡಿ ತಾವು ಸಾಚಾಗಳೆಂದು ತೋರಿಸುತ್ತಿರುವ ಇವರ ಕ್ರಮ ಖಂಡನೀಯ . ಮಂಗಳೂರಿನ ಆಸ್ಪತ್ರೆ ಹಾಗೂ ವೈದ್ಯರ ಅಮಾನವೀಯ ವರ್ತನೆಯನ್ನು ಸಹಿಸಿಕೊಳ್ಳಲು ಸಾದ್ಯವೇ ಇಲ್ಲ ಇದರ ವಿರುದ್ಧ ಮುಂದಿನ ದಿನಗಳಲ್ಲಿ SDPI ಜಿಲ್ಲಾದ್ಯಂತ ಜನಾಂದೋಲನವನ್ನು ಹಮ್ಮಿಕೊಳ್ಳಲಿದೆ .
ದ ಕ ಜಿಲ್ಲಾಧಿಕಾರಿ ಹಾಗೂ ಮಂಗಳೂರು ನಗರ ಪೊಲೀಸ್ ಕಮಿಷನರ್ ರವರು ಕೂಡಲೇ ಸಂತ್ರಸ್ತೆಯ ದೂರು ದಾಖಲಿಸಿ ಅರೋಪಿಗಳು ಎಷ್ಟೇ ಪ್ರಬಲರಾದರು ಅವರ ವಿರುದ್ಧ ಕಠಿಣವಾದ ಕಾನೂನು ಕ್ರಮಗಳನ್ನು ಕೈಗೊಳ್ಳುವ ಮೂಲಕ ನಾಗರಿಕರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು ಅದೇರೀತಿ ವೈದ್ಯರ ದುಷ್ಕ್ರತ್ಯ ,ಅಸ್ಪತ್ರೆಗಳ ಅಮಾನವೀಯ ವರ್ತನೆಗಳಿಗೆ ಕೂಡಲೇ ಕಡಿವಾಣ ಹಾಕಿ ಸರಕಾರದ ನಿಯಮ, ನಿರ್ದೇಶನ ಗಳನ್ನು ಕಟ್ಟನಿಟ್ಟಾಗಿ ಅನುಷ್ಠಾನಕ್ಕೆ ತರುವ ಮೂಲಕ ಮೆಡಿಕಲ್ ಮಾಫಿಯಾವನ್ನು ಮಟ್ಟಹಾಕಬೇಕು . ಈಗಾಗಲೇ ಕೋವಿಡ್ ಚಿಕಿತ್ಸೆಗೆ ರೋಗಿಗಳಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡುವ ಮತ್ತು ಮ್ರತಪಟ್ಟ ಶರೀರವನ್ನು ಇಟ್ಟು ಬೇಕಾಬಿಟ್ಟಿ ಹಣ ವಸೂಲಿ ಮಾಡಿದ ಆಸ್ಪತ್ರೆಗಳ ಮಾನ್ಯತೆ ಯನ್ನ ತಡಗಹಿಡಿಯುವ ಮೂಲಕ ಸರಕಾರ ಹಾಗೂ ಜಿಲ್ಲಾಡಳಿತ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು, ಇಲ್ಲದಿದ್ದರೆ ಜನಸಾಮಾನ್ಯರು ರೊಚ್ಚಿಗೆದ್ದು ಬೀದಿಗಿಳಿಯುವ ದಿನಗಳು ದೂರವಿಲ್ಲ.
ಖತೀಜಾ ಜಾಸ್ಮಿನ್ ಎಂಬ ಸಂತ್ರಸ್ತೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪೋಲಿಸ್ ಇಲಾಖೆ ಯಾವುದೇ ರೀತಿಯ ಒತ್ತಡಗಳಿಗೆ ಮಣಿಯದೇ ಕಾನೂನು ಪಾಲನೆ ಮಾಡಬೇಕು , ಇಲ್ಲದಿದ್ದರೆ ಎಲ್ಲಾ ರೀತಿಯ ಕಾನೂನು ಹೋರಾಟಗಳನ್ನು ನಡೆಸಲು SDPI ಖತೀಜಾ ಕುಟುಂದೊಂದಿಗೆ ನಿಲ್ಲಲಿದೆ ಎಂದು ಪಕ್ಷದ ಜಿಲ್ಲಾ ಕಛೇರಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ ಪತ್ರಿಕಾ ಗೋಷ್ಠಿಯಲ್ಲಿ SDPI ಜಿಲ್ಲಾ ಕಾರ್ಯದರ್ಶಿ ಗಳಾದ ಅನ್ವರ್ ಸಾದತ್ ಬಜತ್ತೂರು, ಜಮಾಲ್ ಜೋಕಟ್ಟೆ, ಅಶ್ರಫ್ ಮಂಚಿ, ಮಂಗಳೂರು ದಕ್ಷಿಣ ವಿದಾನಸಬಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಸುಹೈಲ್ ಖಾನ್, ಹಾಗೂ ಸಂತ್ರಸ್ತ ಮಹಿಳೆ ಖತೀಜಾ ಜಾಸ್ಮಿನ್, ಅವರ ತಂದೆ ಹಾಗೂ ಸಹೋದರ ಉಪಸ್ಥಿತರಿದ್ದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.