(www.vknews.com) : ಕರ್ನಾಟಕ ಸರ್ಕಾರವು ಕೋವಿಡ್ 2ನೇ ಪರಿಹಾರ .500 ಕೋಟಿ ಪ್ಯಾಕೇಜ್ ಬಿಡುಗಡೆ ಮಾಡಿದ್ದು, ಅಸಂಘಟಿತ ಕಾರ್ಮಿಕರಿಗೆ 2000 ರುಪಾಯಿ. ಪಡೆಯಲು ವಿದಿಸಿರುವ. ಷರತ್ತು ನಿಯಮಗಳನ್ನು ನೋಡಿದರೆ. ಪರಿಹಾರದ ಗೋಜಿಗೆ ಯಾರೂ ಹೋಗಲ್ಲ ಬಿಡಿ. ಅದೇನೆಂದರೆ
1.ಅಸಂಘಟಿತ ಕಾರ್ಮಿಕರಾಗಿರಬೇಕು. ವಯೋಮಿತಿ 18 ರಿಂದ 65 ವರ್ಷದೊಳಗಿದ್ದು, ಬಿ.ಪಿ.ಎಲ್. ಕುಟುಂಬದವರಾಗಿರಬೇಕು. ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಪರಿಹಾರ ನೀಡಲಾಗುತ್ತದೆ. ಟೈಲರ್. ದೋಬಿ. ಚಿಂದಿಆಯುವವರು. ಮನೆಕೆಲಸದವರು. ಇತ್ಯಾದಿ ಇತ್ಯಾದಿ. (ಅಡುಗೆ ಯವರನ್ನು ಸೇರಿಸಿಲ್ಲ) ಸೇವಾ ಸಿಂದು ಮೂಲಕ ಅರ್ಜಿ ಸಲ್ಲಿಸಬೇಕು, ದಾಖಲೆ ಬಿಪಿಎಲ್ ಕಾರ್ಡ್. ಆದಾರ್ ಕಾರ್ಡ್. ಪೃತ್ತಿಯ ದೃಡ ಪತ್ರ. ಫೋಟೋ. ಬ್ಯಾಂಕ್ ಅಕೌಂಟ್ ಸಂಖ್ಯೆ. ದೂರವಾಣಿ ಸಂಖ್ಯೆ,
ಇಲ್ಲಿರುವ ವಿಚಾರ ಚಿಂದಿ ಆಯುವವರು ದೃಡ ಪತ್ರ ಎಲ್ಲಿಂದ ತರೋದು, ಅವರಲ್ಲಿ ಬ್ಯಾಂಕ್ ಖಾತೆ. ಮೊಬೈಲ್ ಸಂಖ್ಯೆ ಇರಬಹುದೇ? ಮುಂತಾದ ಪ್ರಶ್ನೆಗಳು ಮೂಡುದಲ್ಲದೇ. ಸೇವಾ ಸಿಂದು. ಮೂಲಕ ಅರ್ಜಿ ಸಲ್ಲಿಸಲು ಇನ್ಯಾರನ್ನೋ ಕೈ ಕಾಲು ಹಿಡಿದು, ಅವರಿಗೊಂದಿಷ್ಟು. ದುಡ್ಡು ನೀಡಿ ಕೈ ಸುಟ್ಟು ಕೊಳ್ಳೋದಕ್ಕಿಂತ, ಸುಮ್ಮನಿರುದೇ ಲೇಸು ಅಂತ. ಯಾರೂ ಹೋಗಲ್ಲ ಅಷ್ಟೊತ್ತಿಗೆ ಲಾಕ್ ಡೌನ್ ಮುಗಿದು ಈ ವಿಚಾರ ಮರೆತೂ ಬಿಡ್ತಾರೆ. ಇದರಿಂದ ಬಿಡುಗಡೆ ಗೊಂಡ ಪರಿಹಾರದ ದುಡ್ಡಿಗೆ, ಅಧಿಕಾರಿಗಳು ಒಂದಿಷ್ಟು ನಕಲಿ ದಾಖಲೆ ಸೃಷ್ಟಿಸಿ, ತಮ್ಮ ಜೇಬು ಬರ್ತಿ ಮಾಡ್ತಾರೆ ಅಲ್ಲವೇ ?
ಎಸ್. ಝಾಕಿರ್
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.