ಸ್ವರಾಜ್ ಇಂಡಿಯಾ ವಕೀಲ ಶ್ರೀ ಕೆ. ಪಿ. ಶ್ರೀಪಾಲ್
(ವಿಶ್ವಕನ್ನಡಿಗ ನ್ಯೂಸ್ ), ಶಿವಮೊಗ್ಗ, ತೀರ್ಥಹಳ್ಳಿ: ತಾಲ್ಲೂಕು ಕೀಗಡಿ ಗ್ರಾಮದ ಸ.ನಂ.20/2 ಮತ್ತು ಸ.ನಂ.28 ಜಮೀನುಗಳಿಗೆ ಹೋಗುವ ರಸ್ತೆಗೆ ಸಂಬಂಸಿದಂತೆ ಜೂ. 14 ರಂದು ತಹಶೀಲ್ದಾರ್ ತೀರ್ಥಹಳ್ಳಿ ಇವರು ಮಾಡಿದ ಆದೇಶ ಜನವಿರೋಧಿ ಮತ್ತು ಸ್ಥಳಿಯವಾಗಿ ಅಶಾಂತಿಗೆ ಕಾರಣವಾಗುವುದರಿಂದ ಸದರಿ ಆದೇಶವನ್ನು ಕೂಡಲೆ ಹಿಂಪಡೆಯಬೇಕು ಎಂದು ಸ್ವರಾಜ್ ಇಂಡಿಯಾ ಜಿಲ್ಲಾ ವಕ್ತಾರ ಹಾಗೂ ವಕೀಲರಾದ ಕೆ.ಪಿ. ಶ್ರೀಪಾಲ್ ಆಗ್ರಹಿಸಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕು ಮಂಡಗದ್ದೆ ಹೋಬಳಿ ಕೀಗಡಿ ಗ್ರಾಮದ ಸ.ನಂ.28 ಮತ್ತು 20/2 ರ ಜಮೀನುಗಳಲ್ಲಿ ಹಲವು ಜನ ಕೃಷಿ ಭೂಮಿಯನ್ನು ಹೊಂದಿದ್ದು, ಸದರಿ ಪ್ರದೇಶದಲ್ಲಿ ಕೆರೆಯ ನೀರು ಹರಿಯುವ ಕಾಲುವೆಗಳಿದ್ದು ಸದರಿ ಕಾಲುವೆಯ ಮೇಲಾಗಿ ಜಮೀನಿಗೆ ಹೋಗಲು ರಸ್ತೆ ಮಾಡಲು ಅಶೋಕ ಕೆ.ಆರ್. ಎಂಬುವವರು ನೀಡಿದ ಅರ್ಜಿಯನ್ನು ಸರಿಯಾಗಿ ಪರಿಶೀಲಿಸದೆ, ಸ್ಥಳ ಪರಿಶೀಲನೆ ಮಾಡದೆ ಅಕ್ಕಪಕ್ಕದ ಸಾಗುವಳಿದಾರರ ಜಮೀನುಗಳಿಗೆ ಆಗುವ ತೊಂದರೆಯನ್ನು ಸಹ ಸ್ಥಳ ಪರಿಶೀಲನೆ ಮೂಲಕ ಗಮನಿಸದೆ ರಾಜಕೀಯ ಒತ್ತಡಕ್ಕೆ ಮಣಿದು ನೀರಿನ ಕಾಲುವೆಗೆ ಪೈಪ್ ಅಳವಡಿಸಲು ಅನುಮತಿ ನೀಡಿರುವುದು ಖಂಡನೀಯ.
ತಾಲ್ಲೂಕು ಧಂಡಾಕಾರಿಯಾದವರು ರಸ್ತೆ ನೀರು ಇಂತಹ ವಿಷಯಗಳಲ್ಲಿ ಹಳ್ಳಿಗಳಲ್ಲಿ ಅಶಾಂತಿ ಕದಡದಂತೆ ನೊಡಿಕೊಳ್ಳಬೇಕು ಅದನ್ನು ಬಿಟ್ಟು ಸ್ಥಳಿಯ ಜನಪ್ರತಿನಿದಿಗಳ ಒತ್ತಡಕ್ಕೆ ಮಣಿದು ಬಲಿಷ್ಠರ ಪರವಾಗಿ ಆದೇಶಮಾಡುವುದು ಸಾಮಾಜಿಕ ನ್ಯಾಯಾದ ಪರಿಪಾಲನೆಗೆ ವಿರುದ್ದವಾದದ್ದು.
ಕೀಗಡಿ ಗ್ರಾಮದ ಸದರಿ ಸ.ನಂ.28 ಮತ್ತು 20/2 ರಲ್ಲಿ ಹಲವು ಜನ ಜಮೀನು ಹೊಂದಿದ್ದು ಇದುವರೆಗೂ ಪ್ರತಿ ಮಳೆಗಾಲದಲ್ಲೂ ಜಮೀನಿಗೆ ನೀರು ನುಗ್ಗಿ ಅನಾಹುತ ಅನುಭವಿಸುತ್ತಿದೆ ಮತ್ತು ಕಳೆದೆರೆಡು ವರ್ಷಗಳ ಹಿಂದೆ ಗುಡ್ಡ ಕುಸಿತದ ಅನಾಹುತ ಸಂಭವಿಸಿದ ಜಾಗಕ್ಕೆ ಸಮೀಪವೇ ಇರುವ ಜಾಗವಾಗಿದೆ. ಈ ಅನಾಹುತಕ್ಕೆ ಬಲಿಯಾದ ರೈತರಿಗೆ ಇನ್ನು ಸರಿಯಾಗಿ ಪರಿಹಾರ ನೀಡದ ಸರ್ಕಾರದ ಬೇಜವಬ್ದಾರಿತನದ ನಡುವೆಯೇ ತಹಶಿಲ್ದಾರ್ ಕೆರೆ ನೀರು ಹರಿಯುವ ಮತ್ತು ಮಳೆಗಾಲದಲ್ಲಿ ಹೊಳೆಯಾಗಿ ಪರಿಣಮಿಸುವ ಕಾಲುವೆಗೆ ಮೂರರಿಂದ ನಾಲ್ಕು ಅಡಿ ಗಾತ್ರದ ಪೈಪ್ಗಳನ್ನು ಅಳವಡಿಸಿ ಅದರ ಮೇಲೆ ರಸ್ತೆ ಮಾಡಲು ಅನುಮತಿ ನೀಡಿದ್ದಾರೆ. ಈ ಬಗ್ಗೆ ಸ್ಥಳಿಯರು ತಹಶಿಲ್ದಾರವರಿಗೆ ಹಲವು ಬಾರಿ ಮನವಿ ನೀಡಿ ಎಷ್ಟು ಕೇಳಿಕೊಂಡರು ಕೂಡಾ ಸ್ಥಳಿಯರ ಮನವಿಯನ್ನು ಕಡೆಗಣಿಸಿದ್ದಾರೆ, ಕೊನೆಗೆ ಸ್ಥಳಿಯರು ಜಿಲ್ಲಾಕಾರಿಗಳಿಗೆ ಮನವಿ ನೀಡಿ ಮತ್ತೆ ತಹಶಿಲ್ದಾಾರರ ಬಳಿ ಹೋದಾಗಲು ಸಹಾ ತಹಶಿಲ್ದಾರರು ಜನರ ಅಹವಲನ್ನು ಕೇಳದೆ ನಿರ್ಲಕ್ಷ್ಯ ತೋರಿದ್ದಾರೆ.ರಾಜಕಾರಣಿಗಳು ಒತ್ತಡಹೇರಿದರೆಂಬ ಕಾರಣಕ್ಕೆ ನೆಪ ಮಾತ್ರಕ್ಕೆ ಕೆಳ ಹಂತದ ಅಕಾರಿಗಳಿಂದ ವರದಿ ಪಡೆದ ತಹಶಿಲ್ದಾರ ತೀರ್ಥಹಳ್ಳಿ ಇವರು ಕಿಗಡಿ ಸ.ನಂ.28 ಮತ್ತು 20/2 ರ ಜಮೀನುಗಳಲ್ಲಿ ಹಾದು ಹೋಗುವ ಕೇರೆ ನೀರಿನ ಕಾಲುವೆಗಳಿಗೆ ಅಶೋಕ ಎಂಬುವವರಿಗೆ ಪೈಪ್ ಅಳವಡಿಸಿ ರಸ್ತೆ ಮಾಡಿಕೊಳ್ಳಲು ಮಾಡಿದ ಆದೇಶ ಕಾನೂನು ಬಾಹಿರ, ಈ ಕೂಡಲೆ ಸದರಿ ಅದೇಶವನ್ನು ಹಿಂಪಡೆಯಬೇಕು, ತಹಶಿಲ್ದಾರರು ಖುದ್ದಾಗಿ ಜಾಗ ಪರಿಶೀಲನೆ ನಡೆಸಬೇಕು, ರಸ್ತೆ ಅಗತ್ಯವಿದ್ದಲ್ಲಿ ಸ್ಥಳಿಯ ಜಮೀನುದಾರರ ಅಭಿಪ್ರಾಯ ಪಡೆದು ಎಲ್ಲರಿಗೂ ಅನುಕೂಲವಾಗುವಂತೆ ಕಿರು ಸೇತುವೆ ನಿರ್ಮಿಸುವ ಮೂಲಕ ಸಮಾಜಮುಖಿಯಾಗಿ ನಡೆದುಕೊಳ್ಳಬೇಕು.
ತಹಶಿಲ್ದಾರವರು ತಮ್ಮ ಆದೇಶವೆ ಸರಿ ಜನಪ್ರತಿನಿದಿಗಳು ಹೇಳಿದಂತೆಯೇ ನಮ್ಮ ಆದೇಶ ಎಂಬ ಉದ್ದಟತನ ತೋರಿದಲ್ಲಿ ತೀವ್ರ ತರದ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆಂದು ಶ್ರೀಪಾಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.