ಪುತ್ತೂರು(ವಿಶ್ವ ಕನ್ನಡಿಗ ನ್ಯೂಸ್): ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯು ಆಯೋಜಿಸಿದ ಮಾದಕ ವಸ್ತುಗಳ ಸೇವನೆ ವಿರೋಧಿ ಅಭಿಯಾನವು, ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಎಸ್ಸೆಸ್ಸೆಫ್ ಕೆಮ್ಮಾಯಿ ಶಾಖೆಯ ವತಿಯಿಂದ ಪೋಸ್ಟರ್ ಪ್ರದರ್ಶನ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ SSF ಬಳ್ಳಾರಿ ಜೆಲ್ಲೆ ಕ್ಯಾಂಪಸ್ ಕಾರ್ಯದರ್ಶಿ ಅಬೂಬಕ್ಕರ್ ಮರ್ಝುಖಿ ಸಖಾಫಿ ಮಾತನಾಡಿ, ಯುವ ಸಮೂಹಕ್ಕೆ ಮಾದಕ ವಸ್ತುಗಳಿಂದಾಗುವ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಎಸ್.ವೈ.ಎಸ್ ಕೆಮ್ಮಾಯಿ ಬ್ರಾಂಚ್ ನಾಯಕರಾದ ಬಳ್ಳಾರಿ ರಫೀಕ್ ಸಖಾಫಿ, ಅಝೀಝ್ ಕೆಮ್ಮಾಯಿ ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಕೆಮ್ಮಾಯಿ ಶಾಖಾ ಅಧ್ಯಕ್ಷ ರಫೀಕ್ ಕೆಮ್ಮಾಯಿ ಸ್ವಾಗತಿಸಿ, ಕಾರ್ಯದರ್ಶಿ ಅಫ್ರೀದ್ ಕೆಮ್ಮಾಯಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.