ಶ್ರೀನಿವಾಸಮರ ( ವಿಶ್ವ ಕನ್ನಡಿಗ ನ್ಯೂಸ್ ) : ರೈತರು ಕೆಸಿ ವ್ಯಾಲಿ ನೀರಿನ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲೂಕಿನ ಕಲ್ಲೂರು ಗ್ರಾಮದ ಕೆರೆಗೆ ಕೆಸಿ ವ್ಯಾಲಿ ನೀರು ಹರಿಸುವ ಕಾಮಗಾರಿಗೆ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ , ಈ ಕೆರೆ ೨೭೨ ಎಕರೆ ವಿಸ್ತೀರ್ಣ ಹೊಂದಿದೆ .
ಆಲವಟ್ಟ ಕೆರೆಯಿಂದ ನೀರು ಹರಿಸಲಾಗುವುದು , ಕೆರೆ ತುಂಬಿದಾಗ ಸುತ್ತಮುತ್ತಲಿನ ಗ್ರಾಮಗಳ ಚಿತ್ರಣ ಬದಲಾಗಲಿದೆ. ಅಂತರ್ಜಲ ವೃದ್ಧಿಗೊಳ್ಳುವುದರಿಂದ ಕೃಷಿ ಚಟುವಟಿಕೆ ಮರು ಜೀವ ಪಡೆದುಕೊಳ್ಳುತ್ತದೆ ಎಂದು ಹೇಳಿದರು. ರಾಜಕೀಯ ಉದ್ದೇಶದಿಂದ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುತ್ತಿಲ್ಲ . ನೀರಿನಲ್ಲಿ ರಾಜಕೀಯ ಮಾಡಬೇಕಾದ ಅಗತ್ಯವೂ ಇಲ್ಲ . ನಾನೂ ಸಹ ಕೃಷಿಕನಾಗಿದ್ದು , ಕೃಷಿ ಉದ್ದೇಶಕ್ಕೆ ೧೮ ಕೊಳವೆ ಬಾವಿ ನಿರ್ಮಿಸಿ ನೀರಿನಿಂದ ವಂಚಿತನಾಗಿದ್ದೇನೆ . ಇಲ್ಲಿನ ಇದೇ ಪರಿಸ್ಥಿತಿಯಾಗಿದೆ ಎಂದು ಹೇಳಿದರು .
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಸ್.ಎಂ. ಶ್ರೀನಿವಾಸ್ , ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ , ಹಿರಿಯ ಸಹಾಯಕ ಕೃಷಿ ನಿರ್ದೇಶಕ ಎಂ. ಶ್ರೀನಿವಾಸ್ , ಪೊಲೀಸ್ ಇನ್ಸ್ ಪೆಕರ್ ಸಿ.ರವಿಕುಮಾರ್ , ಮುಖಂಡರಾದ ಕೆ.ಮಂಜುನಾಥರೆಡ್ಡಿ , ಮುನಿವೆಂಕಟಪ್ಪ , ರಾಮಕೃಷ್ಣಾರೆಡ್ಡಿ , ವೆಂಕಟರೆಡ್ಡಿ , ವೇಣುಗೋಪಾಲ್ , ಹರೀಶ್ ಯಾದವ್ , ರೈತರದ್ದು ಇದ್ದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.