ದುಬೈ(www.Vknews.in): ಸೌದಿ ಅರೇಬಿಯಾದಲ್ಲಿರುವ ಭಾರತದ ರಾಯಭಾರಿಯನ್ನು ಭೇಟಿಯಾಗಿ ಇತ್ತೀಚಿನ ದಿನಗಳಲ್ಲಿ ಭಾರತದ ಮುಸಲ್ಮಾನರ ಮೇಲೆ ನಡೆಯುತ್ತಿರುವ ಹಲ್ಲೆ ಗುಂಪು ಹತ್ಯೆಗಳ ಕುರಿತು ಕಳವಳ ವ್ಯಕ್ತಪಡಿಸಿದ ಆರ್ಗನೈಶೇಷನ್ ಆಫ್ ಇಸ್ಲಾಮಿಕ್ ಕೋ ಅಪರೇಷನ್ , ಕಾಶ್ಮೀರ ಸೇರಿದಂತೆ ಭಾರತದ ವಿವಿಧ ಭಾಗಗಳಿಗೆ ನಿಯೋಗ ಕಳುಹಿಸಲು ತೀರ್ಮಾನಿಸಿತು. ಓಐಸಿ ಪ್ರಧಾನ ಕಾರ್ಯದರ್ಶಿ ಯೂಸಫ್ ಅಲ್ ಒಥೈಮೀನ್ ಅವರ ನೇತೃತ್ವದ ನಿಯೋಗವು ಭಾರತದ ರಾಯಭಾರಿ ಔಸಫ್ ಸಯೀದ್ ಅವರನ್ನು ಭೇಟಿಯಾಗಿ ಭಾರತದ ಮುಸಲ್ಮಾನರ ಸ್ಥಿತಿಗತಿಗಳು ಹಾಗೂ ಕಾಶ್ಮೀರದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಕಳವಳ ವ್ಯಕ್ತಪಡಿಸಿತು ಹಾಗೂ ಈ ಕುರಿತು ಔಐಸಿಯ ಖಂಡನಾ ನಿರ್ಣಯವನ್ನು ರಾಯಭಾರಿಗಳಿಗೆ ಹಸ್ತಾಂತರಿಸಿತು’ ಎಂದು ಐಓಸಿಯು ಹೇಳಿದೆ.
ಇದೊಂದು ಸೌಹಾರ್ಧಯುತವಾದ ಭೇಟಿಯಾಗಿತ್ತು ಎಂದು ಭಾರತದ ರಾಯಭಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.