ರಾಮಕುಂಜ (www.vknews.com): ಎಸ್ ಕೆ ಎಸ್ ಎಸ್ ಎಫ್ ಆತೂರು ಕಸ್ಟರ್ ವಿಖಾಯ ತಂಡ ಇದರ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ಹಾಗೂ ಕೊಯಿಲ, ಆತೂರು, ರಾಮಕುಂಜ ಮತ್ತು ಗೋಳಿತ್ತಡಿ ಮುಂತಾದ ಸ್ಥಳದಲ್ಲಿ ಫಾಗಿಂಗ್ ಸಿಂಪಡಿಕೆ ದಿನಾಂಕ ಜುಲೈ 16 ರಂದು ನಡೆಯಿತು.
ಎಸ್ ಕೆ ಎಸ್ ಎಸ್ ಎಫ್ ಆತೂರು ಕಸ್ಟರ್ ವಿಖಾಯ ತಂಡ ಬೆಳಿಗ್ಗೆ ಮೆಸ್ಕಾಂ ಇಲಾಖೆಯ ಅಪೇಕ್ಷೆಯಂತೆ ಮರದ ಕೊಂಬೆಗಳು ವಿದ್ಯುತ್ ತಂತಿಗಳಿಗೆ ಬೀಳುವುದನ್ನು ಕಡಿದು ಲೈನ್ ಮ್ಯಾನ್ ಜೊತೆ ಕೈಜೋಡಿಸಿದರು.
ಕೊಯಿಲ ಹಾಗು ರಾಮಕುಂಜ ಗ್ರಾಮ ಪೊಲೀಸ್ ಶಾoತಿ ಸಭೆಗೆ ಆಗಮಿಸಿದ ಪುತ್ತೂರು ಉಪವಿಭಾಗ ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ಹಾಗೂ ಕಡಬ ಠಾಣೆಯ ಸಬ್ ಇನ್ಸ್ಪೆಕ್ಟರ್ ರುಕ್ಮ್ ನಾಯಕ್ ರವರು ಸ್ವಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಆತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರ ಸ್ವಚತೆ ಮಾಡಲಾಯಿತು. ಶಾಲೆಯ ಮುಖ್ಯ ಶಿಕ್ಷಕರು ಸಹಕರಿಸಿದರು.
ಪುತ್ತೂರು ವೃತ್ತಿ ನಿರೀಕ್ಷಕರು ತಿಮ್ಮಪ್ಪ ನಾಯಕ್ ಫಾಗಿಂಗ್ ಸಿಂಪಡಿಕೆಗೆ ಚಾಲನೆ ನೀಡಿದರು. ಗೋಳಿತ್ತಡಿಯಿಂದ ಹಿಡಿದು ಕೊಯಿಲಾ ಪರಿಸರದ ಸಾರ್ವಜನಿಕ ಸ್ಥಳದಲ್ಲಿ, ರಾಮಕುಂಜ ಗ್ರಾಮ ಪಂಚಾಯತ್ ವಠಾರ, ಕೊಯಿಲಾ ಗ್ರಾಮ ಪಂಚಾಯತ್ ವಠಾರ, ಹಿರಿಯ ಪ್ರಾಥಮಿಕ ಆಸ್ಪತ್ರೆ ಆತೂರು ಪರಿಸರ, ನ್ಯಾಯ ಬೆಲೆ ಅಂಗಡಿ ಆತೂರು ಪರಿಸರ, ಬದ್ರಿಯಾ ಜುಮಾ ಮಸೀದಿ ಆತೂರು, ಮುಹ್ಯೀಯ್ಯದ್ದೀನ್ ಜುಮಾ ಮಸೀದಿ, ಶ್ರೀ ರಾಮಕುಂಜೇಶ್ವರ ದೇವಸ್ಥಾನ ವಠಾರ ಹಾಗೂ ನೂರುಲ್ ಹುದಾ ಮದರಸ ನೀರಜೆ ಮುಂತಾದ ಸ್ಥಳದಲ್ಲಿ ಫಾಗಿಂಗ್ ಸಿಂಪಡಿಕೆ ಮಾಡಲಾಯಿತು. ಕೊಯಿಲ ಮತ್ತು ರಾಮಕುಂಜ ಗ್ರಾಮ ಪಂಚಾಯತ್ ಗ್ರಾಮ ಕಣಿಕ, ಕೊಯಿಲ ಮತ್ತು ರಾಮಕುಂಜ ಗ್ರಾಮ ಪಂಚಾಯತ್ ಸದಸ್ಯರು, ಮಸೀದಿ ಹಾಗೂ ದೇವಸ್ಥಾನ ಆಡಳಿತ ಸಮಿತಿ ಸದಸ್ಯರು ಕೈ ಜೋಡಿಸಿದರು.
ಬೆಳಿಗ್ಗೆಯಿಂದ ಸಂಜೆವರೆಗೂ ಆತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಆತೂರು ಕಸ್ಟರ್ ವಿಖಾಯ ತಂಡದ ಸದಸ್ಯರು ಸ್ವಚ್ಚತೆ ಮಾಡಿದರು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಸೇವೆಯ ಕುರಿತು ಪ್ರಶಂಸನೀಯ ಮಾತುಗಳನ್ನು ಹೇಳಿದರು.
ಆತೂರು ಕ್ಲಸ್ಟರ್ ಅಧ್ಯಕ್ಷರಾದ ಸಿದ್ದೀಕ್ ನೀರಾಜೆ ನೇತೃತ್ವದಲ್ಲಿ ಕಸ್ಟರ್ ಒಳಪಟ್ಟ ಎಲ್ಲಾ ವಿಖಾಯ ಕಾರ್ಯಕರ್ತರು ಭಾಗವಹಿಸಿ ಸಹಕರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.