ಕೋಲಾರ (ವಿಶ್ವ ಕನ್ನಡಿಗ ನ್ಯೂಸ್) :- ಈವರೆಗೂ ಉಪವಿಭಾಗಾಧಿಕಾರಿಯಾಗಿದ್ದು , ವರ್ಗಾವಣೆಯಾಗಿರುವ ಸೋಮಶೇಖರ್ ಅವರನ್ನು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ಬಾಬು ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸೋಮಶೇಖರ್ , ರೈತರು , ಸಾರ್ವಜನಿಕರ ಸಮಸ್ಯೆಗಳಿಗೆ ಸದಾ ಸ್ಪಂದಿಸಿ ಕೆಲಸ ಮಾಡಿದ ತೃಪ್ತಿ ಇದೆ , ಜಿಲ್ಲೆಯ ಜನತೆಯ ಸಹಕಾರ ನನಗೆ ಸಿಕ್ಕಿದೆ ಎಂದು ತಿಳಿಸಿದರು.
ಸರ್ಕಾರಿ ನೌಕರಿಯಲ್ಲಿ ವರ್ಗಾವಣೆ ಸಾಮಾನ್ಯ ಆದರೆ ಸಿಕ್ಕ ಸಮಯದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಜನರ ಕೆಲಸ ಮಾಡಿದ್ದಕ್ಕೆ ಮಿಷಿ ಇದೆ ಎಂದು ತಿಳಿಸಿ , ಸಹಕಾರ ನೀಡಿದ ಜನತೆ. ಸಂಘ ಸಂಸ್ಥೆಗಳು , ಇಲಾಖೆ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದರು.
ನೌಕರರ ಸಂಘಕ್ಕೆ ಜಮೀನು ಧನ್ಯವಾದ
ಎಸಿಯವರನ್ನು ಸನ್ಮಾನಿಸಿದ ನೌಕರರ ಸಂಘದ ಅಧ್ಯಕ್ಷ ಜಿ . ಸುರೇಶ್ ಬಾಬು , ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಅನೇಕ ಸಮಸ್ಯೆಗಳನ್ನು ಪರಿಹರಿಸಿದ್ದೀರಿ , ಇಲ್ಲಿನ ರೈತರ ಭೂವಿವಾದಗಳಿಗೆ ಕೊನಯಾಡಿದಿರಿ ಎಂದು ತಿಳಿಸಿ ಅಭಿನಂದಿಸಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ೫ ಎಕರೆ ಜಮೀನು ಮಂಜೂರು ಮಾಡುವ ಪ್ರಸ್ತಾವನೆಯನ್ನು ಒಂದೇ ದಿನದಲ್ಲಿ ಶಿಫಾರಸ್ಸು ಮಾಡಿದ್ದು , ಇಡೀ ಜಿಲ್ಲೆಯು ನೌಕರರು ಅವರನ್ನು ಸ್ಮರಿಸುವ ಕೆಲಸ ಮಾಡಿದ್ದಾರೆ ಎಂದರು.
ಇಲಾಖೆಯ ಆಡಳಿತದಲ್ಲಿ ಚುರುಕುಮುಟ್ಟಿಸಿ ಜನರಲ್ಲಿಗೆ ಕಂದಾಯ ಇಲಾಖೆಯನ್ನು ತಲುಪಿಸುವಲ್ಲಿ ಕೆಲಸ ಮಾಡಿದ್ದು , ನಿಮ್ಮ ಮಾರ್ಗದರ್ಶನ ಮರಯುವುದಿಲ್ಲ ಎಂದು ತಿಳಿಸಿದರು. ವರ್ಗಾವಣೆಯಾಗಿರುವ ತಮಗೆ ಮತ್ತಷ್ಟು ಉತ್ತಮ ಅವಕಾಶಗಳು ಒದಗಿ ಬರಲಿ , ಇನೂ , ಉನ್ನತ ಸ್ಥಾನ ಪಡೆದು ಮತ್ತೊಮ್ಮೆ ಜಿಲ್ಲೆಗೆ ಬರುವ ಅವಕಾಶ ಸಿಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ನೂತನ ಎಸಿ ಆನಂದ್ಪಕಾಶ್ ಮೀನಾ , ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ , ಖಜಾಂಚಿ ವಿಜಯ್ , ಗೌರವಾಧ್ಯಕ್ಷ ಶ್ರೀನಿವಾಸರೆಡ್ಡಿ , ರಾಜ್ಯಪರಿಷತ್ ಸದಸ್ಯ ಗೌತಮ್ , ಉಪಾಧ್ಯಕ್ಷ ಪುರುಷೋತ್ತಮ್ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ , ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್ , ನೌಕರರ ಸಂಘದ ಜಂಟಿ ಕಾರ್ಯದರ್ಶಿ ಶ್ರೀನಿವಾಸಲು , ಮಂಜುನಾಥ್ , ಸಂದೀಪ್. ಬಿ.ಮುನಿರಾಜು , ವೆಂಕಟರಮಣಪ್ಪ. ಕೆ.ಎಂ.ಮಂಜುನಾಥ್ , ಎಂ. ಮುನಿಯಪ್ಪ. ನಾರಾಯಣ ಪ್ರ.ನಟರಾಜ್ ಮತ್ತಿತರರಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.