(www.vknews.com) : ಸೌದಿಯಲ್ಲಿ ಮೋಸಕ್ಕೊಳಗಾಗಿ ನಾಯಾ ಪೈಸೆ ಕೈಯಲ್ಲಿಲ್ಲದೆ ಇಂದು ಮುಂಜಾನೆ ಮುಂಬಯಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಮಂಗಳೂರು ತೊಕ್ಕೊಟ್ಟು ಮೂಲದ ಮೊಹಮ್ಮದ್ ಸೌಬನ್ ಎಂಬ ಯುವಕ ದಿಕ್ಕುದಿಶೆ ಇಲ್ಲದೆ ಅನಾಥನಾಗಿರ ಬೇಕಾಯಿತು. ಮಹಾರಾಷ್ಟ್ರದ ಆರೋಗ್ಯಾಧಿಕಾರಿಗಳು ದಿಕ್ಕು ತಪ್ಪಿಸಿ ಕ್ವಾರೈಂಟಯ್ನ್ ನೆಪಹೊತ್ತು ಈತನಿಗೆ ಹೋಟೇಲ್ ಒಂದರ ಕೊಠಡಿಯಲ್ಲಿ ಕೂಡಾಟಿಸಿಟ್ಟರು. ಯುವಕನಲ್ಲಿ ಭಾರತೀಯ ಮೊಬೈಲ್ ಸಂಖ್ಯೆ, ಸ್ಥಳೀಯ ಫೋನ್ ಇಲ್ಲದಿರುವುದರಿಂದ ಪರಿಸ್ಥಿತಿ ದಾರುಣ ವಾಯಿತು.
ಕೊನೆಗೂ ಮಂಗಳೂರು ಮಿತ್ರನನ್ನು (ಸೂರಜ್ ಮಂಗಳೂರು) ಸಂಪರ್ಕಿಸಿದ್ದು ಅವರು ರೆಡಿಯೋ ಜಾಕಿ ಆರ್.ಜೆ ಏರಲ್ ಮೂಲಕ ಮುಂಬಯಿ ಪತ್ರಕರ್ತ ರೋನ್ಸ್ ಬಂಟ್ವಾಳ್ ಸಂಪರ್ಕಿಸಿದ ಅರ್ಧ ತಾಸಲ್ಲೇ ಉಳಕೊಂಡ ರೂಮ್ ಗೆ ತಲುಪಿ ಸೌಬನ್ ಗೆ ಸ್ಪಂದಿಸಿ ಹಣವಿತ್ತು, ಊಟೋಪಚಾರದ ವ್ಯವಸ್ಥೆ ಮಾಡಿಸಿ (ಸರಕಾರದ ಆದೇಶ ಪಾಲನೆಯಂತೆ) ರೂಮ್ ನಿಂದ ಬಿಡಿಸಿ ಮಂಗಳೂರುಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಿದರು.
ಮುಂಬಯಿ ಪ್ರದೇಶ ಕಾಂಗ್ರೇಸ್ ಸಮಿತಿ (ಎಂಆರ್ ಸಿಸಿ) ಅಂಧೇರಿ ಜಿಲ್ಲಾ ಅಧ್ಯಕ್ಷ ಕ್ಲೈವ್ ಡಾಯಸ್ (ಬಾರ್ಕೂರು), ಸಮಾಜ ಸೇವಕರಾದ ತೋನ್ಸೆ ಸಂಜೀವ ಪೂಜಾರಿ, ಅನಿಲ್ ಅಲ್ಮೇಡಾ ಬ್ರಹ್ಮವಾರ, ಕೆನರಾ ಪಿಂಟೋ ಮಾಲಿಕ ಶ್ರೀ ಸುನೀಲ್ ಪಾಯ್ಸ್, ವ್ಯವಸ್ಥಾಪಕ ಮಧುಕರ್ ಸುವರ್ಣ ಇವರು ಸಹಯೋಗವನ್ನು ನೀಡಿದ್ದರು.
MRCC Mumbai Andheri Dist. President Mr. Clive Dias.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.